Thursday, February 21, 2008

ಬಡತನ ಅಂದ್ರೆ ಹೀಗಿರುತ್ತೆ ಅವ್ರ ಮನ್ಯಾಗ ಒಂದೇ ಕಾರಿರುತ್ತೆ!

ಪಂಚಾಯತ್ ಕಚೇರಿನಾಗೆ ಬೋರಣ್ಣ `ನಂಗೆ ಬಿಪಿಯಲ್ ಕಾರ್ಡ್ ಯಾಕೆ ಕೊಡಾಕಿಲ್ಲಾ'ಂತ ತಗಾದೆ ತೆಗ್ದೇ ಬಿಟ್ಟ. `ನಾನು ಬಡವ ಸ್ವಾಮೀ ನನ್ನ ಮನ್ಯಾಗ ಟಿ.ವಿ ಇಲ್ಲ. ಫೋನ್ ಇಲ್ಲ. ಇರೋದು ಒಂದೇ ಒಂದು ನಲ್ವತ್ತು ವ್ಯಾಟಿನ ಬುರುಡೆ. ಅದೂ ಕೆಇಬಿ ಕೃಪಾ ಕಟಾಕ್ಷದಿಂದ ಸಂಜೆಗೆ ಉರಿಯಾಕಿಲ್ಲ. ಅದು ಉರಿದಾಗ ನಂಗೆ ಗಡದ್ದು ನಿದ್ದೆ ಬಂದು ಬಿಡುತ್ತೆ. ಹಂಗಿರುವಾಗ ನಂಗೇಕಿಲ್ಲ ಬಿಪಿಎಲ್ ಕಾರ್ಡ್' ಅಂತ ಒಂದೇ ಹಠ.
`ಹಂಗಲ್ಲಾ ಬೋರಣ್ಣಾ ನಿನ್ ಮಗಾ ಬ್ಯಾಂಕಾಗೆ ಮ್ಯಾನೇಜರ್ ಇದ್ದಾನೆ. ಮಂಗ್ಳೂರು ಪಟ್ಟಣದಾಗೆ ಮನೆ ಮಾಡ್ಯಾನೆ ನಿಂಗೆ ಹೆಂಗೆ ಕೊಡೋಕಾಗುತ್ತೆ ಬಿಪಿಎಲ್ ಕಾರ್ಡ್?' ಸಮಾಜ ಸೇವಕ ರಂಗಪ್ಪ ಬೋರಣ್ಣನ ಸಮಾದಾನ ಮಾಡೋಕೆ ಸುರಮಾಡ್ದ. `ನೋಡಪ್ಪಾ ಬಡತನ ಅಂದ್ರೆ ದುಡ್ಡಿಂದ ಬರೋದಲ್ಲ ಅದು ಮನಸ್ಸಿನಾಗ ಇರೋದು. ನೀನು ತೆಂಗಿನ ಕಾಯಿ ಕೀಳೋಕೆ ಹೋಗ್ತಿಯಲ್ಲಪ್ಪಾ ಒಂದು ಮರಾಕ್ಕೆ ಹತ್ತು ರೂಪಾಯಿ ರೊಕ್ಕ ಪಡೀತಿಲ್ಲೋ ಹೇಳು. ದಿನಾ ಎಷ್ಟು ಮರಾ ಹತ್ತುತೀ ಹೇಳ್ಬಿಡು' ಬೋರ ತಲೀ ಕೆರೆಯೂತ 'ದಿನಕ್ಕೆ ಏನಿಲ್ಲಾಂದ್ರು ಒಂದಿಪ್ಪತ್ತು ಇಪ್ಪತ್ತೈದು' ಅಂದ.
ಹಂಗಾರೆ ಇನ್ನೂರೈವತ್ತಾತು ನೋಡು. ದಿನಕ್ಕೆ ಇನ್ನೂರೈವತ್ತು ಅಂದ್ರೆ ತಿಂಗಳಿಗೆ ಎಳೂವರೆ ಸಾವ್ರ.... ನಿಂಗೇಕಪ್ಪಾ ಬಿಪಿಎಲ್ ಕಾಡರ್ು??'
ಬೋರಣ್ಣ ಮುಖ ಸಣ್ಣದು ಮಾಡಿ `ಆದ್ರೂ ಆದ್ರೂ....' ಅಂದ.
ಹಂಗಾರೆ ನಿಂಗೆ ಸಮಾಧಾನ ಆಗಿಲ್ಲ ಅಂತಾದ್ರೆ ನಾನೊಂದು ವಿಷ್ಯ ಹೇಳ್ತೇನೆ ಕೇಳು. ನಮ್ಮ ರಾಜಧಾನಿ ಅದಲ್ಲೋ ದಿಲ್ಲಿ. ಅಲ್ಲಿ ಒಂದು ಸಾಲಿನಾಗೆ ಮೇಷ್ಟ್ರು ಹೈಕಳಿಗೆ ಪ್ರಬಂಧ ಬರ್ಯೋಕೆ ಹೇಳಿದ್ರು. ಅದು ಅಂತಿಂತಾ ಸಾಲೀ ಅಲ್ಲ. ನಮ್ಮ ಮಾಜಿ ಪ್ರಧಾನಿ - ಅಧ್ಯಕ್ಷರುಗಳ ಮರಿಮಕ್ಕಳು. ಅಮಿತಾಬ್ ಬಚ್ಚನರ ಮೊಮ್ಮಕ್ಕಳು, ಶಾರೂಕ ಖಾನ್ನಂತವರ ಮಕ್ಕಳು ಬರೋ ಸಾಲಿ. ಅದ್ರಾಗ ಪ್ರಬಂಧ ಬರ್ಯೋಕೆ ಕೊಟ್ಟ ಇಚಾರ ಏನೂಂತಂದ್ರ 'ಬಡತನ ಅಂದ್ರೆ ಏನು?' ಅಂತ.
ಹೈಕ್ಲು ಬರೆದೇ ಬಿಟ್ವು. ಬಡತನಾ ಅಂತಂದ್ರೆ ಅವ್ರಿಗೆ ಜೀವನಾ ನಡೆಸೋಕೆ ಬಹಳ ಕಷ್ಟ ಇರ್ತದಾ... ಅವ್ರಿಗೆ ಮೂರು ಹೊತ್ತು ಊಟ ಮಾಡೋಕೆ ಕಷ್ಟ ಅದಾ.. ಅವ್ರ ಮನೆ ತೋಟಕ್ಕೆ ಮಾಲಿ ಇರೋಲ್ಲಾ. ಮನೆಯೋವ್ರೇ ಗಿಡಗಳಿಗೆ ನೀರು ಹೊಯ್ಬೇಕು. ಅವ್ರಿಗೆ ಒಂದೇ ಕಾರು ಇರ್ತದೆ. ಅವ್ರ ಮನೀ ಕಾರಿಗೆ ಡ್ರೈವರ ಇರೋಲ್ಲ. ಅವರಮ್ಮ ಅಪ್ಪನೇ ಮಕ್ಕಳನ್ನ ಶಾಲಿಗೆ ಬಿಡ್ಬೇಕು. ಶಾಪಿಂಗ್ಗೆ ಹೋಗಬ್ಬೇಕಾದ್ರೆ ಅವ್ರೆ ಕಾರು ಬಿಟ್ಕೊಂಡು ಹೋಗ್ಬೇಕು..
ಬಡತನಾ ಅಂದ್ರೆ ತುಂಬಾ ಕಷ್ಟ ಇರ್ತದಾ. ಅವ್ರ ಮನ್ಯಾಗಾ ಒಂದೇ ಆಳು ಇರ್ತಾನೆ... ಅಡುಗೆ ಮನೆಯವ್ರೇ ಮಾಡ್ಬೇಕು...' ರಂಗಣ್ಣ ಹೇಳುತ್ತಾನೆ ಇದ್ದ.
`ಸಾಕು ರಂಗಪ್ಪಣ್ಣ ಬಡತನಾ ಅಂದ್ರೆ ಏನೂಂತ ಈಗ ಅರ್ಥ ಆತು ಬಿಡ್ರಿ' ಅಂತ ಬೋರ ಬಿಪಿಎಲ್ ಕಾರ್ಡ್ ಮರ್ತು ಮನೆ ಹಾದಿ ಹಿಡ್ದ.

ಅರ್ಹತೆ. ಅರ್ಹತೆ.. ಅಂತಾ ಬಡ್ಕೋತಿಯಾ

ನಿಂಗೆ ತೆಂಗಿನ್ಮರ ಹತ್ತೋ ಅರ್ಹತೆ ಇದ್ಯಾ?
ಅದೊಂದು ಸಭೆ. ಸಭೆ ಅಂದ್ರೆ ಪಂಚಾತಿಕೆ. ನಮ್ಗೆ ಕಾಖರ್ಾನೆ ಕಟ್ಟೋಕೆ ಜಾಗ ಕೊಡ್ರಿ, ನಿಮ್ಗೆ ನಿಮ್ಮನಿಗೊಂದ್ರಂತ ಕೆಲ್ಸ ಕೊಡ್ತೀವಿ ಅಂತಾ ಹೇಳಿದ ಕಂಪೆನಿ ಆಡಳಿತ ಮಾತು ತಪ್ಪಿದಾಗ, ತಮ್ಮ ಕೆಲ್ಸ ಮುಗ್ದ ಮೇಲೆ ತಿಕಾ ತೋರಿಸ್ದಾಗ ಧರಣಿ, ಸತ್ಯಾಗ್ರಹ ಅಂತ ಬೀದಿಗಿಳಿದು ಕೂಗಾಡಿ ರಂಪಾ ಮಾಡಿ ರಸ್ತೆ ಮ್ಯಾಗೆ ಹೊರ್ಳಾಡಿ, ಬಳ್ಳಾರಿ ಜೈಲದಾಗ ಕ್ಯಾಂಪು ಮಾಡಿದ, ಕಾರ್ಖಾನೆಗಾಗಿ ಭೂಮಿ, ಮನೀ ಮೂರು ಕಾಸಿಗೆ ತ್ಯಾಗ ಅಂತಾ ಮಾಡಿದ ಜನ್ರು ಮತ್ತು ಕಂಪೆನಿಯ ಪರವಾಗಿ ಅಧಿಕಾರಿಗಳ ನಡುವೆ ಪಂಚಾತಿಕೆ.
'ನೀವು ಕೊಟ್ಟ ಮಾತು ಉಳಿಸ್ಕೊಳ್ರೀ. ನಮ್ಗೆ ಮೋಸ ಮಾಡ್ಬ್ಯಾಡ್ರಿ. ಏನ್ ಕೆಲ್ಸ ಕೊಡ್ತೀವಿ ಅಂತ ಮಾತು, ಸ್ಟಾಂಪು ಪೇಪರ್ದಾಗ ಬರ್ದು ಕೊಟ್ಟಿದ್ದಿರೋ ಆ ಥರಾ ಮಾಡ್ರಿ' ಅಂತ ತ್ಯಾಗಿಗಳ ಒಕ್ಕೊರಲ ಕೂಗು.
ಹಾವಿನ್ತರಾ ನಾಲ್ಗೆ ಎತ್ತ ಚಾಚೋಕೂ ಸಿದ್ಧವಾಗಿರೋ ಅಧಿಕಾರಿ ಮಾತಾಡೋಕೆ ಶುರುಹಚ್ದ. 'ನೀವೇನು ಹೇಳ್ತೀರೋ ಅದೇ ಖರೇ ಅದಾ. ನೀವು ಕಾಖರ್ಾನೆಗೆ ಹೊಲ-ಮನಿ ಬಿಟ್ಕೊಟ್ಟಿದ್ದೀರಿ. ನಿಮ್ಮ ತ್ಯಾಗನಾ ಎಷ್ಟು ಕೊಂಡಾಡಿದ್ರೂ ಸಾಕಾಗೋಲ್ಲ. ಆದ್ರೆ ಒಂದು ವಿಚಾರ ಮಾತ್ರ ನೀವು ತಿಳ್ಕೋಬೇಕು. ನಮ್ದು ಜಗತ್ತಿನಾಗೇ ಮುಖ್ಯ ವಸ್ತು ಉತ್ಪಾದನೆ ಮಾಡೋ ಕಾಖರ್ಾನೆ. ಇದಕ್ಕೆ ಸಯನ್ಸ್ ಕಲಿತಿರೋರು ಬೇಕಾಗುತ್ತೆ. ನಮ್ಮ ಕೆಲ್ಸಗಾರ್ರು ಅರ್ಹತೆ ಇರೋರು. ಅರ್ಹತೆ ಇಲ್ಲದೋರ್ಗೆಲ್ಲಾ ಕೆಲ್ಸ ಕೊಟ್ರೆ ನಮ್ಮ ಕಾರ್ಖಾನೆ ಸುಟ್ಟು ಬೂದಿಯಾಗೋಬ್ಬಹುದು. ಅವಾಗ ನಿಮ್ಮ ತ್ಯಾಗ ಎಲ್ಲ ಬೂದಿಯಾಗಿ ಬಿಡುತ್ತೆ. ನಿಮ್ಗೆಲ್ಲಾ ಅರ್ಹತೆ ಇದ್ರೆ ಕೆಲ್ಸ ಕೊಡ್ತೇವೆ. ಅಂತಾವ್ರು ಇದ್ರೆ ಹೇಳಿ. ನಮ್ಗೆ ಬೇಕಾಗಿರೋದು ಅರ್ಹತೆ, ಅರ್ಹತೆ...
ಸೇರಿರೋ ಹಳ್ಳಿ ಮಂದಿ ಗಪ್ ಚಿಪ್ಪಂತ ಕೇಳಿ ತಲೀ ಅಲ್ಲಾಡಿಸಿದ್ರು. 'ನಿಮ್ ಪಂಚಾತಿಕೆಗೆ ನಾನೂ ಬರ್ತೀನಿ' ಅಂತ ಹಠ ತೊಟ್ಟು ಬಂದಿದ್ದ ಬೋರಂಗೆ ಈಗ ಪಿತ್ತ ನೆತ್ತಿಗೇರಿಬಿಡ್ತು ಆತ ಅಬ್ಬರಿಸಿದ 'ಏನ್ರೀ ಅರ್ಹತೆ, ಅರ್ಹತೆ ಅಂತಾ ಬಾಯಿ ಬಡ್ಕೋತೀರಾ ನಾವು ನಿಮ್ಮಂಗೆ ಮನುಷ್ಯರಲ್ವಾ. ಭತ್ತ - ತೆಂಗು - ಕಂಗು ಬೆಳೆಸ್ತಿದ್ದ ನಮ್ಮ ಜಮೀನನ್ನ ಕಸ್ದುಕೊಂಡು ಈಗ ಅರ್ಹತೆ ಅಂತ ಒಟಗುಟ್ಟುತ್ತಿಯಲ್ಲಾ... ನಿಂಗೇನು ಅರ್ಹತೆ ಇದೆ. ನಿಂಗೆ ತೆಂಗಿನ್ಮರಾ ಹತ್ತಾಕೆ ಬರುತ್ತಾ. ಕಂಗು ಏರಿ ಅಡ್ಕೆ ಇಳಿಸೋಕೆ ಆಯ್ತದಾ? ನೇಜಿ ನೆಡೋಕೆ ಬರುತ್ತಾ. ಗದ್ದೆ ಉಳೋಕೆ ಆಗುತ್ತಾ. ಸೂಟು, ಬೂಟು ಹಾಕ್ಕೊಂಡ ಮಾತ್ರಕ್ಕೆ ನಮ್ಮನ್ನೆಲ್ಲಾ ಮಂಗ್ಯಾ ಮಾಡೋಕೆ ಆಗುತ್ತೆ ಅಂತಾ ಭಾವಿಸ್ಬೇಡ. ಅರ್ಹತೆ ಇಲ್ಲದೋರ ಭೂಮಿನ ಯಾಕೆ ಕಸ್ದುಕೊಂಡ್ರಿ. ಮರ್ಯಾದೆಯಾಗಿ ಭೂಮಿ ಬಿಟ್ಕೊಟ್ಟ ಮನೆಗಳ ಒಂದೊಂದು ಮಂದಿಗೆ ಅದೇನು ನಿನ್ನ ಸುಡುಗಾಡು ಕೆಲ್ಸ ಕೊಟ್ಬಿಡು ಪರದೇಸಿ ಮಗ್ನೆ...'
ಅಧಿಕಾರಿಗಳು ಪಂಚಾತಿಕೆಗೆ ಸೇರಿದ ನಾಯಕರು ಎಲ್ರೂ ಬೋರನ ಅಬ್ಬರಕ್ಕೆ ತಲೆ ತಗ್ಗಿಸಿಬಿಟ್ರು...

ಆಯಮ್ಮಂಗೆ ಹೊಟ್ಟೇಪಾಡು ಇವಂಗೆ ರೂಲ್ಸು!

ಆ ಹೊಟೇಲಿಗೆ ಕಾಮರ್ಿಕ ಅಧಿಕಾರಿ ಬಂದು ಬಿಟ್ಟು ಗಲ್ಲಾ ಪೆಟ್ಟಿಗೆಯ ಮುರುಕು ಕುರ್ಚಿಯನ್ನು ಆಕ್ರಮಿಸಿಕೊಂಡುಬಿಟ್ಟ. ಹೊಟೇಲು ಅಂದರೆ ನಮ್ಮ ಸಿಟಿಯಾಗಿರೋ ಲಕ ಲಕ ಹೊಳೆಯೋ, ಮಿರ ಮಿರ ಮಿಂಚೋ ಘನಾಂದಾರಿ ಹೊಟೇಲು ಅಲ್ಲ. ಅದು ನಾಲ್ಕಾರು ಹರಕು-ಮುರುಕು ಟೇಬಲ್ಲು, ಕುರ್ಚಿ ಇರೋ 'ಹೋಟೆಲ್ ಮಾಯಾನಗರಿ' ಎಂಬ ಹೆಸರಿನ ಒಂದು ಕೋಣೆ.
ಬಂದಿರೋ ಕಾರ್ಮಿಕ ಅಧಿಕಾರಿ ಮಹಾರಾಜರೆದುರು ಹೋಟೇಲು ಮಾಲಕ ತಿಪ್ಪಣ್ಣ ಖಡಕ್ ಚಹಾ ಗೋಳಿಬಜೆ ಇಟ್ಟು ಕೈಕಟ್ಟಿ ವಿನೀತ ಭಾವದಿಂದ 'ಏನಪ್ಪಣೆ' ಎಂಬಂತೆ ನಿಂತ.
ಏನಪ್ಪಾ ಹೋಟೇಲಿನ್ಯಾಗೆ ಕೆಲಸಕ್ಕೆ ಎಷ್ಟು ಮಂದಿ ಇದಾರೆ...?' ಕಾರ್ಮಿಕಾಧಿಕಾರಿ ದರ್ಪದಿಂದ ಪ್ರಶ್ನಿಸಿದ. ಅದೇ ಸಂದರ್ಭಕ್ಕೆ ಇನ್ನೂ ಹದಿನೈದು ವರ್ಷ ಮೀರದ ನಾಣಿ ದೊಡ್ಡ ಕೊಡಪಾನದಾಗೆ ನೀರು ತುಂಬಿಕೊಂಡು ಎಂಟ್ರಿ ತೆಕೊಂಡೇ ಬಿಟ್ಟ.
ಈಗ ಕಾರ್ಮಿಕಾಧಿಕಾರಿ ಕಣ್ಣು ಅರಳಿತು. ಬಾಲ ಕಾಮರ್ಮಿಕನೊಬ್ಬನನ್ನು ಪತ್ತೆ ಹಚ್ಚಿ ಬಿಟ್ಟೆ ಅಂತ ಆತ ಆಗಸಕ್ಕೇರಿಬಿಟ್ಟ. 'ಏನಯ್ಯಾ ಪುಟ್ಟ ಮಕ್ಕಳನ್ನ ಕೆಲ್ಸಕ್ಕೆ ಇಟ್ಕೋಬಾರ್ದು ಅಂತ ತಿಳಿಯೋದಿಲ್ವೇನಯ್ಯಾ? ನಿನ್ನ ಜೈಲಿಗೆ ಹಾಕಿಸ್ತೀನಿ, ಫೈನ್ ಬರೀತೀನಿ....' ಅಧಿಕಾರಿಯ ವಟಗುಟ್ಟುವಿಕೆಯನ್ನು ತಲೆ ತಗ್ಗಿಸಿಕೊಂಡು ಕೇಳಿಸಿಕೊಳ್ಳುತ್ತಾನೇ ನಿಂತ ತಿಪ್ಪಣ್ಣ.
'ಅಡ್ಡಬಿದ್ದೇ ದನೀ' ಎಂಬ ಕೀರಲು ಕಂಠ ಕಾರ್ಮಿಕಾಧಿಕಾರಿಯ ವಾಗ್ಜರಿಯನ್ನು ತಡೆಯಿತು. ಹೊಟೇಲಿನ ಬಾಗಿಲಲ್ಲಿ ಗಂಗವ್ವ ಕೈ ಮುಗ್ದು ನಿಂತಿದ್ದಳು. ಕಲ್ಲಿನ ಮೂರ್ತಿಯಂಗೆ ನಿಂತಿದ್ದ ತಿಪ್ಪಣ್ಣಂಗೆ ಈಗ ಜೀವ ಬಂದು ಬಿಡ್ತು. 'ಲೇ ಗಂಗೀ ನಿನ್ನ ಮಗನ್ನ ಈಗ್ಲೆ ಕರ್ಕೊಂಡ್ಹೋಗು. ಸಾಹೇಬ್ರು ಬಂದಿದ್ದಾರೆ. ಚಿಕ್ಕ ಮಕ್ಕಳ ಕೈಲಿ ಕೆಲ್ಸ ಮಾಡಿಸ್ಕೋಬಾರ್ದು ಅಂತ ರೂಲ್ಸು ಐತೆ. ಸಾಹೇಬ್ರು ಹೇಳಿದ ದಂಡ ನಾನು ಕಟ್ತೀನಿ. ಇನ್ನು ಮುಂದಕ್ಕೆ ನೀನೂ ಬೇಡ ನಿನ್ಮಗ ನಾಣೀನೂ ಬೇಡ. ಈಗ್ಲೇ ಕರ್ಕೋಡ್ಹೋಗು ಮಾರಾಯ್ತಿ' ಅಂದು ಬಿಟ್ಟ.
ಗಂಗಿ ಪಾತಾಳಕ್ಕೆ ಇಳಿದುಬಿಟ್ಳು. ಗಂಗಾ-ಸಿಂಧೂ ಪ್ರವಾಹ ಆಕೆಯ ಕಣ್ಣುಗಳಿಂದ ಹರಿಯಿತು. 'ಬೇಡಿ ಸಾಹೇಬ್ರೇ ಅವಂಗೆ ಮನೇಲಿ ಹೊಟ್ಟೆ ತುಂಬಾ ಊಟ ಕೊಡೋಕೂ ನಂಗೆ ಗತೀ ಇಲ್ಲ. ನೀವು ಅವಂಗೆ ರೊಕ್ಕ ಗಿಕ್ಕ ಏನು ಕೊಡ್ಬಾಡ್ರೀ. ವರ್ಷಕ್ಕೊಂದು ಅಂಗಿ ಚೆಡ್ಡಿ ಮಾತ್ರ ಕೊಡಿಸ್ರೀ. ನಿಮ್ಮ ದಮ್ಮಯ್ಯಾ ನಿಮ್ಗೆ ಪುಣ್ಯ ಬರುತ್ತೆ...' ಗಂಗಿ ತಿಪ್ಪಣ್ಣನ ಕಾಲು ಹಿಡ್ಕೊಂಡು ಬಿಟ್ಲು.
'ನನ್ನ ಕಾಲಿಗ್ಯಾಕೆ ಬೀಳ್ತಿಯಾ. ಅಲ್ಲಿದ್ದಾರೆ ನೋಡು ಅಧಿಕಾರಿ ಸಾಹೇಬ್ರು ಅವ್ರ ಕಾಲಿಗೆ ಬೀಳು. ನಿನ್ಗೆ ಉಪ್ಕಾರ ಮಾಡಿದ್ದಕ್ಕೆ ನನ್ನ ಮೇಲೆ ಕೇಸು ಹಾಕ್ತೀನಿ ಅಂತಾರೆ ಅವ್ರ ಕಾಲಿಗೆ ಬೀಳು' ತಿಪ್ಪಣ್ಣ ಕಾರ್ಮಿಕ ಅಧಿಕಾರಿ ಕಡೆಗೆ ಬೆರಳು ತೋರಿಸ್ದ.
ಗಂಗಿ ಕಾರ್ಮಿಕ ಅಧಿಕಾರಿಯ ಎದುರು ಸಾಷ್ಟಾಂಗ ನಮಸ್ಕಾರಾನೇ ಮಾಡಿಬಿಟ್ಲು. ಈ ಧನಿಯರದೇನೂ ತಪ್ಪಿಲ್ಲ. ನನ್ನ ಮಗಂಗೆ ಕೆಲ್ಸ ಕೊಟ್ಟು, ಊಟ ತಿಂಡಿ, ಅಂಗಿ ಚೆಡ್ಡಿ ಕೊಟ್ಟ ಮಹಾನುಭಾವರು ಇವ್ರು. ಇವ್ರನ್ನ ಜೈಲಿಗೆ ಹಾಕ್ಬೇಡ್ರೀ. ನನ್ನ ಮೇಲೆ ಕೇಸು ಬರೀರೀ. ನನ್ನ ಜೈಲಿಗೆ ಹಾಕ್ರಿ ಅಂತ ಗೋಗರೆದಳು.
ತಟ್ಟನೆದ್ದ ಕಾರ್ಮಿಕ ಅಧಿಕಾರಿ ಚಾ-ಗೋಳಿಬಜೆಯ ಐದು ರೂಪಾಯಿ ತಿಪ್ಪಣ್ಣನ ಕೈಗೆ ಹಾಕಿ. ಜೀಪನ್ನೇರಿ ಭುರ್ರಂತ ಹೋಗೇ ಬಿಟ್ರು.

'ಅವ್ನೇ ಅಗ್ಬೇಕಾ ನಾವ್ಯಾರೂ ಆಗಾಕಿಲ್ವಾ?'

'ಅವ್ನೇ ಅಗ್ಬೇಕಾ ನಾವ್ಯಾರೂ ಆಗಾಕಿಲ್ವಾ?'
ಆ ಬ್ಯಾಂಕಿಗೆ ಬೋರ ಖಾಯಂ ಗಿರಾಕಿ. ವಾರಕ್ಕೆರಡು ಬಾರಿ ಬ್ಯಾಂಕ್ ಮೆಟ್ಟಲೇರದಿದ್ರೆ ಆಯಪ್ಪನಿಗೆ ನಿದ್ದೇನೇ ಹತ್ತೋಲ್ಲ. ಬ್ಯಾಂಕಿನ ಹಸನ್ಮುಖಿ ವ್ಯಕ್ತಿ ತುಕಾರಾಮನ ಬಳಿ ಬೋರಂಗೆ ಯಾವಾಗಲೂ ಕೆಲ್ಸ. ಬೇರೆ ಯಾರ ಹತ್ರಾನೂ ಮಾತಾಡದ ಬೋರ ತುಕರಾಮನ ಕೈಯಾಗೆ ಪಾಸು ಪುಸ್ತಕ ಕೊಟ್ಟು ಪಿಸ ಪಿಸ - ಕಿಸ ಕಿಸ ಅಂತಾ ಮಾತಾಡುದನ್ನು ಉಳಿದ ಸಿಬ್ಬಂದಿಗಳ ಓರೆ ಗಣ್ಣಿನಿಂದ ನೋಡ್ತಿದ್ರು. ಈಯಪ್ಪನಿಗೆ ತುಕಾರಾಮನೇ ಆಗ್ಬೇಕಾ ನಾವ್ಯಾರೂ ಆಗಾಕಿಲ್ಲವಾ ಅಂತಾ ಅವ್ರಿಗೆ ಅಸಮಾಧಾನ ಬೇರೆ. ಬೇರೆ ಸಿಬ್ಬಂದಿಗಳ ಕಂಡ್ರೆ ಬೋರ ಹುಣಸೀ ಹಣ್ಣು ತಿಂದಂತೆ ಮುಖ ಹುಳಿ ಹುಳಿ ಮಾಡೋದೂ ಉಂಟು. ಹಂಗಿರುವಾಗ ಉಳಿದೋರೆಲ್ಲಾ ಇಂವ ಯಾವಾಗ ನಮ್ಮ ಕೈಗೆ ಸಿಕ್ಕಿ ಬೀಳ್ತಾನೆ ಅಂತ 'ಉರುಳು ಹಿಡಿದು ಕಾದಂಗೆ' ಕಾಯ್ತಿದ್ರು.
ಅದ್ಕೂ ಒಂದು ಕಾಲ ಬಂತು. ತುಕಾರಾಮ ಅದೇಕೋ ಹದಿನೈದು ದಿನ ರಜಾ ಬರ್ದು ಹೋದ ದಿನವೇ ಬೋರ ಆ ಬ್ಯಾಂಕಿನ ಮೆಟ್ಟಿಲು ಹತ್ತಿದ. ವಾಡಿಕೆಯಂತೆ ತುಕಾರಾಮನ ಸೀಟಿನ ಹತ್ರ ಬಂದು ನೋಡ್ತಾನೆ ಆ ಸೀಟಿನಾಗೆ ಪೈಸೆ ಪೈಸೆಗೂ ಬ್ರಹ್ಮ ಗಂಟು ಬಿಗಿಯೋ ಪಿಟ್ಟಾಸಿ ಪಿತಾಮಹ ಪರಮಯ್ಯ ವಕ್ಕರಿಸಿಕೊಂಡಿದ್ದ. ಪರಮಯ್ಯ ಬೋರನ್ನು ನೋಡಿಯೂ ನೋಡದಂತೆ ಮಾಡಿ ಬಾರೀ ತುತರ್ಿನಲ್ಲಿರುವಂತೆ ಕೆಲ್ಸ ಮಾಡ ತೊಡಗಿದ. 'ತುಕಾರಾಮಪ್ಪನೋರು ಇಲ್ವಾ' ಅಂತ ಬೋರ ಮೂರನೇ ಬಾರಿ ಕೇಳ್ದಾಗ. ಓ ಅವ್ರಾ ಈಗ ಬರ್ತಾರೆ ಕೂತ್ಕೋ ಅಂದ ಒಳಗೊಳಗೇ ನಗುತ್ತಾ ಪರಮಯ್ಯ. ಬೋರ ಕಾದು ಕುಂತ ಮಧ್ಯಾಹ್ನ ಆದ್ರೂ ತುಕಾರಾಮ ಪತ್ತೆ ಇಲ್ಲ. ರಜೆ ಹಾಕಿದಾತ ಅದೆಲ್ಲಿಂದ ಬರಬೇಕು?. 'ನಾಳೆ ಬತ್ತೀನಿ' ಅಂತ ಬೋರ ಹೊರ ನಡೆದ. ಪರಮಯ್ಯ ಉಳಿದ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಬೋರನ್ನ ಬೈರಾಸ್ ಮಾಡಿದ್ದಕ್ಕೆ ಬೀಗಿದ್ದೇ ಬೀಗಿದ್ದು.
ಮರುದಿನ ತಪ್ಪದೆ ಹತ್ತು ಗಂಟೆಗೆ ಬೋರ ಬ್ಯಾಂಕಿನೆದುರು ಹಾಜರಾದ. 'ತುಕಾರಾಮ ಇವತ್ತು ರಜಾ ನಾಳೆ ಬಾ' ಅಂದ ಪರಮಯ್ಯ. ಹಿಂಗೆ ಐದಾರು ದಿನ ನಡೀತು. ಬೋರ ದಿನಾ ಬರೋದು ಅವನ್ನ ಪರಮಯ್ಯ ಏನೋ ಹೇಳಿ ಕಳ್ಸೋದು. ಅಂವ ಹೋದ ನಂತರ ಪಿಸ ಪಿಸ ನೆಗಾಡೋದನ್ನು ತನ್ನ ಚೇಂಬರಿಂದಲೇ ನೋಡಿದ ಮ್ಯಾನೇಜರ್ರಿಗೆ ಏನೋ ಎಡವಟ್ಟು ಆಗುತ್ತಿದೆ ಅನ್ನಿಸಿತು. ಮರುದಿನ ಬೋರ ಪರಮಯ್ಯ ಸೀಟು ಬಳಿ ನಿಂತ ಕೂಡ್ಲೆ ಮ್ಯಾನೇಜರ್ರು ಅಲ್ಲಿಗೇ ಬಂದು ಬಿಟ್ರು. 'ಏನು ಬೋರಣ್ಣಾ ದಿನಾ ಬರ್ತೀರೀ ಹೋಗ್ತೀರಿ ಏನ್ಕತೆ' ಅಂತ ವಿಚಾರಿಸಿದ್ರು. 'ಬೋರ ಏನಿಲ್ಲ ಸ್ವಾಮೀ ನಂಗೆ ತುಕಾರಾಮಪ್ಪನೋರ ಹತ್ರ ಕೆಲ್ಸ ಐತೆ ನಾಳೆ ಬರ್ತಾರೆ ನಾಳೆ ಬರ್ತಾರೆ ಅಂತ ಇವ್ರು ಹೇಳವ್ರೆ ಅಂಗೆ ದಿನಾ ಬರ್ತಾ ಇದ್ದೀನಿ' ಅಂದ ಬೋರ. 'ತುಕಾರಾಮ ಹದಿನೈದು ದಿನ ರಜಾ ಅಲ್ರೀ ಮತ್ಯಾಕ್ರೀ ನಾಳೆ ಬರ್ತಾರೆ ಅಂತಾ ಹೇಳ್ತೀರ್ರೀ. ಅವ್ರ ಕೆಲ್ಸ ಏನೂಂತ ಮಾಡಿ ಕೊಡ್ರಿ ಮತ್ತೆ' ಮ್ಯಾನೇಜರ್ ಪರಮಯ್ಯನ ಕಡೆ ನೋಡುತ್ತಾ ಹೇಳೀದ್ರು. ಪರಮಯ್ಯ ಇಂಗು ತಿಂದ ಮಂಗನಂತಾದ. 'ಅದೇನು ಕೆಲ್ಸ ಹೇಳ್ರೀ ನಿಮ್ಗೆ ಆ ತುಕಾರಾಮನೇ ಆಗ್ಬೇಕಾ ನಾವ್ಯಾರೂ ಆಗೊಲ್ವಾ?' ಪರಮೇಶಿ ಸಿಡುಕಿದ.
'ಬೇಡ್ರಿ ಅವ್ರೇ ಬರ್ಲಿ' ಅಂತಂದ ಬೋರ. 'ಅವ್ರು ಇನ್ನಾರು ದಿವ್ಸ ಬರೋಲ್ಲ ಇವರೆಲ್ಲರ ಕೈಲಿ ಕೆಲ್ಸ ಮಾಡೋಕೆ ಮನಸ್ಸಿಲ್ಲದಿದ್ರೆ ನಾನು ಮಾಡಿ ಕೊಡ್ತೀನಿ ಬೋರನ್ನಾ ಅದೇನಾಗ್ಬೇಕು ಹೇಳಿ' ಮ್ಯಾನೇಜರ್ ಬೋರನ ಹೆಗಲು ಸವರುತ್ತಾ ನುಡಿದರು.
'ಅದೇನಿಲ್ಲಾ ಸ್ವಾಮೀ. ತುಕಾರಾಪ್ಪನೋರು ನಂಗೆ ಅಗತ್ಯಕ್ಕೆ ಆವಾಗಾವಾಗ ಇನ್ನೂರು - ಮುನ್ನೂರು ಸಾಲ ಕೊಡ್ತಿದ್ರು ಎರಡು ಮೂರು ದಿನದೊಳಗೆ ವಾಪಾಸು ಕೊಡ್ತಿದ್ದೆ ಬಡ್ಡಿ ಗಿಡ್ಡಿ ಏನೂ ಇರ್ತಿರ್ಲಿಲ್ಲ. ಮೊನ್ನೆ ಮನೆಯಾಗ ಹೆಂಡ್ತಿಗೆ ಉಸಾರಿಲ್ಲಾಂತ ಐನೂರು ರೂಪಾಯಿ ತೆಕ್ಕೊಂಡಿದ್ದೆ. ಅಂಗೆ ಅದನ್ನು ವಾಪಾಸು ಮಾಡೋಣಾಂತ ಬಂದೆ. ಈಯಪ್ಪಾ ನಾಳೆ... ನಾಳೆ ಅಂತಿದ್ರು ಅಷ್ಟೆ' ಅಂದಾಗ ಎಂಜಲು ಕೈನಾಗೆ ಕಾಗೆ ಓಡಿಸದ ಪಿಟ್ಟಾಸಿ ಪರಮಯ್ಯ ಬೋರನ್ನ ಕೆಕ್ಕರಿಸಿ ನೋಡಿದ.

ಹಾಗಂದ್ರೆ ಏನೂಂತ ಗೊತ್ತೇನ್ರೀ?

ಹಾಗಂದ್ರೆ ಏನೂಂತ ಗೊತ್ತೇನ್ರೀ?
ವೆಂಕಟನಿಗೆ ಸಮಾಜ ಸೇವೆ ಮಾಡಬೇಕೆಂಬ ಅಸೆ ಹುಟ್ಟಿಕೊಂಡುಬಿಡ್ತು. ಸೇವೆ ಅಂದ್ರೆ ಅಂತಿಂಥಾ ಸೇವೆ ಅಲ್ಲ. ಅದನ್ನು ಜನ್ರು, ಸಕರ್ಾರ ಗುರ್ತಿಸ್ಬೇಕು ಅಂತಾ ಛಲ ಹಚ್ಕೊಂಡು ಹಿರೀರು ಅವ್ರು ಇವ್ರು ಅಂತ ಸಲಹೆ ಪಡ್ಯೋಕೆ ಸುರು ಮಾಡ್ದ. ಬಿಟ್ಟಿ ಸಲಹೆ ಬೇಕಾಬಿಟ್ಟಿ ಹರಿದುಬಂದ್ರೂ ಪ್ರಯೋಜನಾಗುವಂತದ್ದು ಯಾವ್ದೂ ಕಾಣಿಸ್ಲಿಲ್ಲ. ಯಾರೋ ಒಬ್ರು ಒಂದ್ನಾಕು ದೊಡ್ಡ ದೊಡ್ಡೋರ್ರನ್ನು ಸೇರ್ಸಿಕೊಂಡು ಟ್ರಸ್ಟ್ ಅಂತ ಒಂದು ರಚಿಸ್ಕೊಂಡು ಬಿಡ್ರಿ. ಅದನ್ನು ರಿಜಸ್ಟರ್ ಮಾಡಿದ್ರೆ ಭಾಳಾ ಪ್ರಯೋಜನ ಉಂಟು. ನಿಮ್ಗೆ ಡೆಲ್ಲಿ, ಬೆಂಗಳೂರು ಕಡೆಯಿಂದ ಸಕರ್ಾರದ ಫಂಡು ಬರ್ತೈತೆ. ಚೆಂದಾಗಿ ಸಮಾಜ ಸೇವೆ ಮಾಡ್ಕೋಬಹುದು ಅಂದ್ರು.
ಟ್ರಸ್ಟ್ ರಚಿಸೋಕೆ ಓಡಾಡತೊಡಗಿದ ವೆಂಕಟ. ಊರ್ನಾಗೇ ಹೆಸರು ಮಾಡ್ಕೋಬೇಕು ಅಂತಾ ಆಸೆ ಇರೋ ವೈದ್ಯರು, ವಕೀಲರನ್ನು ಸೇರಿಸ್ಕೋಡು ಸೈ ಅನ್ನಿಸ್ಕೊಂಡ. ಅದೆಲ್ಲಿಂದಲೋ ಕನ್ನಡಾಭಿಮಾನಿ, ಧಮನಿ ಧಮನಿಗಳಲ್ಲಿ ಕನ್ನಡ ರಕ್ತ ಹರಿಯೋ ಕಾಮರಾಯ ಸೇರ್ಕೊಂಡು ಬಿಟ್ಟು `ನಾವು ಕನ್ನಡ ಸೇವೇನೂ ಗುರಿಯಾಗಿಟ್ಕೋಬೇಕು. ಯಾರಾದ್ರೂ ಕನ್ನಡ ಪಂಡಿತರನ್ನು ನಮ್ಮ್ ಟ್ರಸ್ಟ್ ಅಲ್ಲಲ್ಲ ನ್ಯಾಸದಾಗೆ ಸೇರಿಸ್ಕೋಬೇಕು' ಅಂತ ತಲೆತಿಂದ. ವೆಂಕಟನಿಗೂ ಹೌದೆನಿಸಿತು. ಕನ್ನಡದಾಗಿ ಐದಾರು ಪದಕ ಗೆದ್ದುಕೊಂಡ ಕನ್ನಡ ಪಂಡಿತೆ, ಶ್ಯಾಮಲಮ್ಮ ಐದನೇ ಟ್ರಸ್ಟಿಯಾಗಿ ಸೇರಿಕೊಂಡು ಬಿಟ್ರು.
ಟ್ರಸ್ಟ್ ಅಂದಮೇಲೆ ಅದಕ್ಕೊಂದು ಬೈಲಾ, ಗೊತ್ತು, ಗುರಿಗಳನ್ನು ಪಟ್ಟಿ ಮಾಡ್ಕೊಂಡು ದಾಖಲಾತಿ ಮಾಡಿಯೂ ಆಯ್ತು. ಇನ್ನು ದುಡ್ಡೆತ್ತಬೇಕಲ್ಲ. ಅದಕ್ಕೆ ವೆಂಕಟನೂ, ಕಾಮರಾಯನೂ ಸೇರಿಕೊಂಡು ಮನವಿ ಪತ್ರ ರಶೀದಿ ತಯಾರು ಮಾಡತೊಡಗಿದರು. ಕಾಮರಾಯ ಎಲ್ಲಾ ಶಬ್ದ, ಅಕ್ಷರಗಳನ್ನೂ ಕನ್ನಡದಲ್ಲೇ ಮುದ್ರಿಸಬೇಕೆಂದು ಹಠ ಹಿಡ್ದ. ಟ್ರಸ್ಟಿ ಎಂದು ಎಲ್ಲೂ ಬರೀಬಾರ್ದು ಗಂಡಸರ ಹೆಸರೆದುರು ವಿಶ್ವಸ್ಥರು ಎಂದು ಬರೆದರೆ ಶ್ಯಾಮಲಮ್ಮನ ಹೆಸರಿನೆದುರು ವಿಸ್ವಸ್ತೆ ಎಂದು ಬರೆದು ಹತ್ತಿಪ್ಪತ್ತು ಸಾವಿರ ಖಚರ್ು ಮಾಡಿ ಬಣ್ಣ ಬಣ್ಣದ ಮನವಿ ಪತ್ರ ಮುದ್ರಣ ಮಾಡಿ ಹಂಚಿಯೇ ಬಿಟ್ರು.
ಒಂದು ಭಾನುವಾರ ಬೆಳ್ಳಂಬೆಳಗ್ಗೆ ವೆಂಕಟನ ಮೊಬೈಲು ಕಿಣಿಗುಟ್ಟಿತು. ವೆಂಕಟ ಗುಂಡಿ ಅದುಮಿ ಹಲೋ ಅಂದ. ಅತ್ತ ಕಡೆಯಿಂದ ಶ್ಯಾಮಲಮ್ಮನ ಬಿರುನುಡಿ. 'ಏನಯ್ಯಾ ನೀವೆಲ್ಲಾ ಸೇರಿ ಟ್ರಸ್ಟಿ ಆಗಿ ಅತ್ತ ಒತ್ತಾಯಿಸಿ ಹೀಗಾ ನಂಗೆ ಶೇಮ್ ಮಾಡೋದು. ಮೆಮರಾಂಡಮ್ನಲ್ಲಿ ಏನೆಲ್ಲಾ ಗೀಚಾಕಿದ್ದೀರಲ್ಲಾ.... ತಲೆ...ಗಿಲೆ ಕೆಟ್ಟೋಗಿದ್ಯಾ ನಿಮ್ಗೆ?' ಅವಕ್ಕಾದ ವೆಂಕಟ 'ಏನಮ್ಮಾ ಏನು ಹೇಳ್ತಾ ಇದ್ದೀರಿ?' ಅಂದ.
'ಏನಿಲ್ಲ ಈಗ್ಲೆ ನಿಮ್ಮ ಉಳಿದ ಟ್ರಸ್ಟಿಗಳನ್ನೆಲ್ಲಾ ಸೇರ್ಸಿ ಮೀಟಿಂಗ್ ಕರೀರಿ. ನೀವು ಮಾಡಿದ ಉಪ್ಕಾರ ಸಾಕು. ನನ್ನ ಮಾನ ಹರಾಜಾಕಿದ್ದೀರಲ್ಲಾ. ಇವತ್ತೇ ರಾಜೀನಾಮೆ ಲೆಟರ್ ರೆಡಿ ಮಾಡಿದೀನಿ......' ಶ್ಯಾಮಲಮ್ಮ ಫೋನ್ ಕಟ್ ಮಾಡಿದ್ರು.
ವೆಂಕಟ ಅವಸವಸರವಾಗಿ ಎಲ್ರೂನೂ ಸೇರ್ಸಿ ಮೀಟಿಂಗ್ ಶುರುಮಾಡೇಬಿಟ್ಟ. ಗರಂ ಆಗಿದ್ದ ಶ್ಯಾಮಲಮ್ಮ ಈಗ ಕುಸು ಕುಸು ಅಳುತ್ತಿದ್ದರು. ವೆಂಕಟ ವಿನೀತನಾಗಿ ಶ್ಯಾಮಲಮ್ಮನ ಎದುರು ಕೈಕಟ್ಕೊಂಡು `ಏನಾಯ್ತು ಮೇಡಂ ಏನಾರ ಅಪಚಾರ ಆಯ್ತೇನ್ರಿ ಅಂದ'
`ಇನ್ನೇನಾಗ್ಬೇಕಾಗಿದೆ. ಮೂರು ಮಕ್ಕಳು ಮುತ್ತಿನಂತಾ ಗಂಡ ಇರುವಾಗ ನೀವೆಲ್ಲಾ ಸೇರ್ಕೊಂಡು ನನ್ನ ಏನೇನೋ ಮಾಡ್ಬಿಟ್ರಲ್ರೀ, ಮೆಮರಾಂಡಮ್ದಾಗ ಏನು ಬರ್ದಿದೀರಿ. ವಿಶ್ವಸ್ತೆ ಅಂದ್ರ ಅರ್ಥ ಗೊತ್ತೇನ್ರೀ ನಿಮ್ಗೆ?.' ಶ್ಯಾಮಲಮ್ಮ ದುಃಖ - ಕೋಪ ಎರಡರಿಂದಲೂ ನಡುಗುತ್ತಾ ಕೇಳಿದ್ರು.
`ಅದು ಹಂಗಲ್ಲಾ ಮೇಡಂ... ನಾನು... ನಾನು...' ವೆಂಕಟ ತೊದಲಿದ. `ಹಂಗೂ ಇಲ್ಲ, ಹಿಂಗೂ ಇಲ್ಲ. ನಾನೂ ಬೇಡ ನೀನೂ ಬೇಡ್ರಿ, ಮೊದ್ಲು ನನ್ ರಾಜೀನಾಮೆ ಸ್ವೀಕರಿಸ್ರೀ' ಅನ್ನುತ್ತಾ ಶ್ಯಾಮಲಮ್ಮ ರಾಜೀನಾಮೆ ಪತ್ರ ವೆಂಕಟನ ಮುಖಕ್ಕೆ ಎಸೆದು ಬಿರ ಬಿರನೆ ನಡೆದು ಹೋದ್ರು. ವೆಂಕಟ ಮನೆಗೆ ಹೋದವನೇ ಮೊದ್ಲು ಕನ್ನಡ ಶಬ್ದ ಕೋಶ ಎತ್ತಿ ವಿಸ್ವಸ್ತೆ ಅಂದ್ರೇನು ಅಂತ ಹುಡುಕಾಡಿದ.
ವಿಶ್ವಸ್ತೆ ಎಂಬ ಪದದ ಮುಂದೆ ಗಂಡ ಸತ್ತವಳು, ವಿಧವೆ ಎಂದು ಬರೆದಿತ್ತು. ಕಾಮರಾಯ ಎಂಬ ಕನ್ನಡ ಪ್ರೇಮಿಯನ್ನು ಜೀವಂತ ಸುಟ್ಟುಬಿಡಬೇಕೆಂದು ವೆಂಕಟನಿಗೆ ಅನಿಸಿತು.�

ಅಯ್ಯೋ ಇದು ಫಸ್ಟ್ ಕಂಪ್ಲೇಂಟು!!

ಒಮ್ಮೆ ಕಿರುತೆರೆ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಬುದ್ಧಿವಂತ ಡೈರೆಕ್ಟರು ಎಫೆಕ್ಟಿವ್ ಆಗಿ ಚಿತ್ರೀಕರಣ ಮಾಡುತ್ತಿದ್ದರು. ಅದೊಂದು ಶವ ಮೆರವಣಿಗೆಯ ಸಂದರ್ಭ ಕಡಿಮೆ ಅಂದ್ರೆ 2 ಕಂತುಗಳಿಗಾದರು ಈ ಸೀನು ಎಳೆಯಬೇಕೆಂದು ಅವ್ರು ಹಂತ ಹಂತವಾಗಿ ಚಿತ್ರೀಕರಣ ಮಾಡಲು ತೀರ್ಮಾನಿಸಿಬಿಟ್ರು. ಅವಾಗಲೇ ಸಿದ್ಧವಾಗಿಟ್ಟಿದ್ದ ಶವ ಪಟ್ಟಿಗೆಯೊಳಗೆ ಸತ್ತ ವ್ಯಕ್ತಿಯ ಪಾತ್ರದ ನಟನನ್ನು ಪರಿಣಾಮಕಾರಿಯಾಗಿ ಮನಕರಗುವಂತೆ ಮಲಗಿಸಲಾಯಿತು.
ಈಗ ಪ್ರತಿಯೊಬ್ಬರು ಶವ ಪೆಟ್ಟಿಗೆಯ ಬಳಿಗೆ ಬಂದು ಕಲ್ಲು ಕರಗುವಂತೆ ರೋಧಿಸೋ ಗಂಭೀರವಾದ ಸೀನು. ಶವಪೆಟ್ಟಿಯೊಳಗೆ ಮಲಗಿರೋ ನಟ ಮಲಗಿದಲ್ಲೇ ತುಸು ಎಡಕ್ಕೆ ಜರಗಿದ. 'ಕಟ್' ಎಂದ ನಿದರ್ೇಶಕ 'ಏಯ್ ನೀನು ಶವ ಅನ್ನೋದು ಗೊತ್ತಲ್ಲಾ?" ಅಂದ ಮಲಗಿದ ವ್ಯಕ್ತಿ 'ಗೊತ್ತು ಸಾರ್... ಸಾರಿ ಸಾರ್ ' ಅಂದ. ಪುನಃ ಚಿತ್ರೀಕರಣ ಪ್ರಾರಂಭ. ಶವಪೆಟ್ಟಿಗೆಯ ಒಳಗಿದ್ದವ ಮತ್ತೆ ಬಲಕ್ಕೆ ಹೊರಳಿದ. ನಿದರ್ೇಶಕ 'ಕಟ್' ಅಂದ. 'ಏಯ್... ಸುಮ್ನೆ ಬಿದ್ಕೊಳೋ ಮಗ್ನೆ' ನಿದರ್ೇಶಕನ ತಾಳ್ಮೆ ತಪ್ಪತೊಡಗಿತು. ಆತ 'ಆಯ್ತು ಸರ್' ಅಂದ. ಚಿತ್ರೀಕರಣ ಮತ್ತೆ ಆರಂಭ. ಶವ ಪೆಟ್ಟಿಗೆಯ ಸುತ್ತ ಸೇರಿದವರು ರೋಧಿಸುತ್ತಿದ್ದಂತೆ. ಅದರೊಳಗೆ ಮಲಗಿದಾತ ಮೆಲ್ಲ ಎದೆ- ಸೊಂಟ ಮೇಲೆತ್ತಿದ. 'ಎಲ್ರೂ ಕುಯ್ಯೋ ಮುರ್ಯೋ ಅಂತಾ ಕಣ್ಣೀರಿಡುವಾಗ ಶವಕ್ಕೆ ಜೀವ ಬರೋದೇ...?' ನಿದರ್ೇಶಕನ ತಾಳ್ಮೆ ಪೂರಾ ತಪ್ಪಿ ಹೋಯಿತು. 'ನಿಂಗೆ ಶವದಂತೆ ಮಲಗೋದಕ್ಕೇ ಬರೋಲ್ಲ ನಟನೆ ಮಾಡ್ತೇನೆ ದೊಡ್ಡ ಸ್ಟಾರ್ ಆಗ್ತೇನೆ ಅಂತ ಬಂದಿದ್ಯಲ್ಲಾ ನಾಚ್ಕೆ ಆಗೋಲ್ಲಾ ನಿಂಗೆ. ಎದ್ದೇಳೋ ಮೇಲೆ...' ಎಂದು ಅರಚುತ್ತಾ ಆತನನ್ನು ಶವ ಪಟ್ಟಿಗೆಯಿಂದ ಎಳೆದು ಎಬ್ಬಿಸಿದ.
'ಸಾರ್... ಸಾರ್.. ಹಾಗಲ್ಲಾ ಸಾರ್...' ಅಂತ ಆತ ಅಂಗಲಾಚುತ್ತಿದ್ದಂತೆ ಇನ್ನೊಬ್ಬನಿಗೆ ಶವದ ಬಟ್ಟೆ ತೊಡಿಸಿ ಶವದ ಪೆಟ್ಟಿಗೆಯೊಳಗೆ ಮುಸುಕು ಹಾಕಿ ಮಲಗಿಸಲಾಯಿತು. ಮತ್ತೆ ಚಿತ್ರೀಕರಣ ಆರಂಭ... ಆ ಎರಡನೇ ವ್ಯಕ್ತಿಯೂ ಶವಪೆಟ್ಟಿಗೆಯೊಳಗೆ ನೆಟ್ಟಗೆ ಮಲಗದೆ ಅತ್ತಿತ್ತ ಹೊರಳಾಡಬೇಕೇ... ನಿದರ್ೇಶಕ ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟ. 'ಸಾರ್ ಇದರೊಳಗೆ ಹೊಡೆದ ಮೊಳೆ ಮೈಗೆ ಚಚ್ಚುತ್ತಾ ಇದೆ ಸರಿಯಾಗಿ ಮಲಗೋಕೆ ಆಗ್ತಾ ಇಲ್ಲ...' ಅಂದ ಎರಡನೇ ಬಾರಿ ಶವ ಪೆಟ್ಟಿಗೆಯೊಳಗೆ ಮಲಗಿದ ವ್ಯಕ್ತಿ.
'ಓ ಹಂಗಾ... ಯಾರ್ರೀ ಈ ಶವ ಪೆಟ್ಟಿಗೇನ ಮಾಡಿದೋನು? ಅವ್ನಿಗೆ ಫೋನ್ ಹಚ್ಚಿರೀ' ನಿದರ್ೇಶಕ ಕೋಪದಿಂದ ಕುದಿಯುತ್ತಾ ನುಡಿದ. ಶವ ಪೆಟ್ಟಿಗೆ ಮಾಡ್ದೋನಿಗೆ ಫೋನ್ ಮಾಡಲಾಯಿತು. 'ಏನಪ್ಪಾ ನಿಂಗೆ ಚೂರೂ ಕಾಮನ್ ಸೆನ್ಸ್ ಇಲ್ವಾ... ಮತ್ತೆ ಶವ ಪೆಟ್ಟಿಗೆಯೊಳಗೆ ಮೈಗೆ ಚುಚ್ಚುವಂತೆ ಮೊಳೆ ಬಡಿದಿದ್ದಿಯಲ್ಲಾ.. ಬುದ್ದಿ ಗಿದ್ದಿ ಇದೆಯೇನಯ್ಯ ನಿಂಗೆ' ನಿದರ್ೇಶಕ ರೋಪು ಹಾಕಿದ.
ಅತ್ತ ಕಡೆಯಿಂದ ತಣ್ಣಗಿನ ಧ್ವನಿ 'ಹಂಗಾ ಸರ್. ನಾವು ಇಪ್ಪತ್ತೈದು ವರ್ಷದಿಂದ ಶವ ಪೆಟ್ಟಿಗೆ ಮಾಡ್ತಾ ಇದ್ದೇವೆ. ಇಷ್ಟರವರೇಗೆ ಯಾವ ಶವಾನೂ ಈ ರೀತಿ ಅಂದಿಲ್ಲ. ಇದು ನಮ್ಗೆ ಫಸ್ಟ್ ಕಂಪ್ಲೇಂಟು. ಶವ ಪೆಟ್ಟಿಗೆಯೊಳಗೆ ಶವವನ್ನು ಹಾಕುತ್ತಾರೇ ಹೊರ್ತು ಜೀವಂತ ಮನುಷ್ಯರನ್ನು ಯಾರೂ ಹಾಕಲ್ಲ. ನಿಮ್ಮ ಮನುಷ್ಯ ಸತ್ತಿಲ್ಲ ಆತನ್ನ ಸ್ಮಶಾನಕ್ಕೆ ಸಾಗಿಸಬೇಡಿ ಸಾರ್ ಆಸ್ಪತ್ರೆಗೆ ಅಡ್ಮಿಟ್ ಮಾಡಿ' ಎನ್ನಬೇಕೇ?