Sunday, January 27, 2008

ಉರಿಯದ ಲೈಟರಿನ ಜ್ವಾಲೆ




(ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾದ ಕತೆ)

ಹೀಗೇ ನಡೆಯುತ್ತದೆ ಎಂದು ಆತನಿಗೆ ಮೊದಲೇ ತಿಳಿದಿತ್ತು.
ಚಿಲಕ ಕಳಚಿದ ಸದ್ದಿನೊಂದಿಗೆ ತೆರೆದುಕೊಂಡ ಬಾಗಿಲಿನೊಳಗೆ ಪ್ರವೇಶಿಸಿದ, ರಿವಾಲ್ವರ್ ಹಿಡಿದ ತೆಳ್ಳನೆ ಆಸಾಮಿಯನ್ನು ಆತ ಯಾವುದೇ ಗಾಬರಿಯಿಲ್ಲದೆ ಎದುರುಗೊಳ್ಳುವವನಂತೆ, ತಾನು ಹೊದ್ದಿದ್ದ ಬೆಡ್ ಶೀಟನ್ನು ಸರಿಸಿ ಎದ್ದು ನಿಂತ.
ಆತನೊಂದಿಗೆ ಮತ್ತೆರಡು ಮಂದಿ ಒಳಪ್ರವೇಶಿಸಿದರು.
"ನಾವು ನಿನ್ನನ್ನು ಬಂಧಿಸುತ್ತಿದ್ದೇವೆ ಮಿಸ್ಟರ್ ರಾಮ್ಸನ್, ಗಲಾಟೆ ಮಾಡದೆ ಹೊರಟು ಬಿಡು" ಅವರಲ್ಲಿ ಒಬ್ಬ ನುಡಿದ.
ರಾಮ್ಸ್ ನಸುನಕ್ಕ. ವಿಷಾದದ ಗೆರೆ ಆತನ ತುಟಿಗಳಲ್ಲಿ ಪ್ರತಿಫಲಿಸಿತು. ತಾನೇನು ಮಾಡಿದರೂ ಅವರು ತನ್ನ ಜೀವಕ್ಕೆ ಅಪಾಯ ಮಾಡುವುದಿಲ್ಲ ಎಂಬುದು ಆತನಿಗೆ ಖಾತರಿಯಿತ್ತು. ರಿವಾಲ್ವರ್ ಬಿಡಿ, ಸಣ್ಣ ಬ್ಲೇಡಿನ ಚೂರು ಕೂಡಾ ಆತನಲ್ಲಿ ಇಲ್ಲದೇ ಇರುವುದು ಬಂಧನಕಾರರಿಗೂ ಸ್ಪಷ್ಟವಾಗಿ ತಿಳಿದಿತ್ತು. ಆದುದರಿಂದಲೇ ಅವರು ರಾಮ್ಸ್ನನ್ನು ದೈಹಿಕವಾಗಿ ಬಂಧಿಸುವ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಚಕಚಕನೆ ಉಡುಪು ತೊಟ್ಟ ರಾಮ್ಸ್ ಹೊರಡಲಣಿಯಾದ.
"ನಿಮ್ಮ ಅಭ್ಯಂತರ ಇದ್ದರೂ, ಇಲ್ಲದಿದ್ದರೂ ನಾನು ಈ ಸಿಗರೇಟು ಪೊಟ್ಟಣ ಮತ್ತು ಸಿಗಾರ್ ಲೈಟರನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ" ರಾಮ್ಸ್ ಬಲವಂತದ ನಗು ನಗುತ್ತ ನುಡಿದ.
ಸಿಬ್ಬಂದಿಯೊಬ್ಬ ಮುಂದುವರಿದು ಸಿಗಾರ್ ಲೈಟರನ್ನು ಪರೀಕ್ಷಿಸತೊಡಗಿದ.
ಸಾಮಾನ್ಯ ಪೆಟ್ರೋಲ್ ಇಂಧನದ ಲೈಟರದು. ತಳಭಾಗದಲ್ಲಿ ಪ್ರತ್ಯೇಕ ಎರಡು ವಿಭಾಗಗಳು. ಒಂದರಲ್ಲಿ ಕಪ್ಪನೆಯ ದ್ರವ. ಅದರಲ್ಲಿ ತೇಲಾಡುವ ಮಿಲಿಮೀಟರ್ ಉದ್ದದ ಹುಳುಗಳು. ಮತ್ತೊಂದು ಭಾಗದಲ್ಲಿ ಕೆಂಪು ದ್ರವ. ಅದರಲ್ಲೂ ಅದೇ ತೆರನಾದ ಬಿಳಿ ಕೀಟಗಳಂತಹ ಜೀವಿಗಳು. ಅದು ಇತ್ತೀಚೆಗಿನ ಹೊಸ ಶೈಲಿಯ ಲೈಟರು ಎಂದೆನಿಸಿ ಪರೀಕ್ಷಕ "ಅಭ್ಯಂತರವಿಲ್ಲ" ಎನ್ನುವಂತೆ ರಾಮ್ಸ್ಗೆ ಹಸ್ತಾಂತರಿಸಿದ.
"ನನ್ನ ಹಿರಿಯರ ಅಚ್ಚು ಮೆಚ್ಚಿನ ಕೊಡುಗೆ ಇದು. ಇದು....." ರಾಮ್ಸ್ನ ಧ್ವನಿಗಳನ್ನು ತುಂಡರಿಸಿದ ರಿವಾಲ್ವರ್ಧಾರಿ "ಸರಿ ಹೊರಡು"ಎಂದ.
ಲಿಫ್ಟ್ ಒಂದೊಂದೇ ಮಹಡಿಯನ್ನು ಬಳಸಿ ಕೆಳಗಿಳಿಯಿತು. ಹೊರಭಾಗದಲ್ಲಿ ಸಿದ್ಧ ಸ್ಥಿತಿಯಲ್ಲಿಟ್ಟ ಮೂರು ಕಾರುಗಳು. ಮಧ್ಯದಲ್ಲಿರುವ ಕಾರಿನೊಳಗೆ ರಾಮ್ಸ್ ಮತ್ತು ಇಬ್ಬರು ಸಿಬ್ಬಂದಿಗಳು ತೂರಿಕೊಂಡರು. ಮುಂಭಾಗದಲ್ಲೊಂದು ಕಾರು ದಾರಿ ತೋರಿಸುವಂತೆ, ಹಿಂಭಾಗದ ಕಾರು ಹಿಂಬಾಲಿಸುವಂತೆ ವೇಗವಾಗಿ ಸಾಗತೊಡಗಿತು.
ಸಿಗರೇಟು ತುಟಿಗಿಟ್ಟು ಲೈಟರಿಂದ ಹೊತ್ತಿಸಿ ಹೊಗೆ ಬಿಡತೊಡಗಿದ ರಾಮ್ಸ್. ಸಿಗರೇಟು ಆತನದೇನೂ ದೌರ್ಬಲ್ಯವಲ್ಲ. ಆದರೆ ಆ ಲೈಟರು ಸದಾ ಆತನ ಬಳಿಯಲ್ಲಿರಬೇಕು. ಅದಕ್ಕಾಗಿ ಸಿಗರೇಟಿನ ನೆಪ. ಅದೇ ಸಿಗಾರ್ ಲೈಟರಿನ ತಳಭಾಗದಲ್ಲಿ ಓಲಾಡುವ ಹುಳುಗಳನ್ನು ದಿಟ್ಟಿಸತೊಡಗಿದ ರಾಮ್ಸ್. `ಇನ್ನೊಂದು ತಿಂಗಳು ಮಕ್ಕಳೇ... ಆಮೇಲೆ ನಿಮಗೆ ಮುಕ್ತಿ" ಮನದೊಳಗೆ ಅಂದುಕೊಂಡ.
ಕಾರು ನಿಂತಿತು. ಪಕ್ಕದಲ್ಲಿ ಕುಳಿತಿದ್ದ ಸಿಬ್ಬಂದಿ ಬಾಗಿಲು ತೆರೆದು ಕೆಳಗಿಳಿದ "ಬಾ, ಇಳಿ" ಎನ್ನುತ್ತಿದ್ದಂತೆ ರಾಮ್ಸ್ ಕೆಳಗಿಳಿದ. ಹೆಲಿಕಾಪ್ಟರೊಂದು ಇವರಿಗಾಗಿ ಕಾಯುವಂತಿತ್ತು. ಹೆಲಿಕಾಪ್ಟರ್ ಏರಿ ಕುಳಿತುಕೊಳ್ಳುತ್ತಿದ್ದಂತೆ ಅಕ್ಕಪಕ್ಕದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಶಸ್ತ್ರಧಾರಿಗಳಾಗಿ ಕುಳಿತರು. ಹೆಲಿಕಾಪ್ಟರ್ ಮೇಲೇರಿತು.
ರಾಮ್ಸ್ಗೆ ತಾನೆಲ್ಲಿಗೆ ಹೋಗುತ್ತಿರುವೆನೆಂಬುದು ಸ್ಪಷ್ಟವಾಗಿ ಅರಿವಾಗಿತ್ತು. ಹೆಲಿಕಾಪ್ಟರ್ ರಾಜಧಾನಿಯ ಪಕ್ಕದ ಮೈದಾನದಲ್ಲಿ ಇಳಿಯಲಿದೆ. ಅಲ್ಲಿಂದ ನೇರವಾಗಿ ತನ್ನ ಅಣ್ಣನ ಪ್ರಯೋಗಾಲಯಕ್ಕೆ ತನ್ನನ್ನು ಕರೆದೊಯ್ಯಲಾಗುತ್ತದೆ. ಅಲ್ಲಿ ಪ್ರಯೋಗವೊಂದರ ರಹಸ್ಯವನ್ನು ಬಯಲು ಮಾಡಲು ಒತ್ತಾಯಿಸಲಾಗುತ್ತದೆ. ತಾನು ಅಲ್ಲಿ ಮೂಕನಂತೆ ಸುಮ್ಮನೆ ಕುಳಿತುಕೊಳ್ಳುತ್ತೇನೆ. ಅನಂತರ ತನ್ನನ್ನು ಪಕ್ಕದ ನಗರದ ಅಪರಾಧಿ ವಿಭಾಗಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಮೂರನೇ ದಜರ್ೆಯ ವಿಚಾರಣೆ ನಡೆಸಲಾಗುತ್ತದೆ. ಯಾವುದೇ ರಹಸ್ಯ ಮೂರನೇ ದಜರ್ೆಯ ವಿಚಾರಣೆಯಿಂದ ಖಂಡಿತಾ ಹೊರಬೀಳುತ್ತದೆ. ಆದರೆ ನನ್ನ ಬಾಯಿಯಿಂದ ರಹಸ್ಯ ಖಂಡಿತಾ ಹೊರಬೀಳದು. ಯಾಕೆಂದರೆ... ಯಾಕೆಂದರೆ... ಈ ಮೂರ್ಖರು ನನಗೆ ಅರಿವಿದೆ ಎನ್ನುವ ರಹಸ್ಯ ತನಗೆ ತಿಳಿದೇ ಇಲ್ಲ. ಖಾಲಿ ಬುರುಡೆಯಿಂದ ಬ್ರಹ್ಮಸತ್ಯವನ್ನು ಹೊರಡಿಸುವ ಮುಠ್ಠಾಳ ಮಂದಿ ಇವರು. ರಾಮ್ಸ್ ನೀಳವಾಗಿ ಉಸಿರು ಬಿಡುತ್ತಾ ನಸುನಕ್ಕ.
ಹೆಲಿಕಾಪ್ಟರ್ ಮೈದಾನದಲ್ಲಿ ಇಳಿಯಿತು. ರಾಮ್ಸ್ನನ್ನು ಹತ್ತಿಸಿಕೊಂಡ ಬಿಳಿ ಕಾರು ಆತನ ಅಣ್ಣನ ಪ್ರಯೋಗಶಾಲೆಗೆ ಕರೆದೊಯ್ಯಿತು. ಆತ ಯೋಚಿಸಿದಂತೆ ಆತನನ್ನು ಅಲ್ಲಿ ಕುಳ್ಳಿರಿಸಲಾಯಿತು. ಮಿಲಿಟರಿಯ ವಿಜ್ಞಾನಿಯ ದಿರಿಸು ಹಾಕಿದ ಅಧಿಕಾರಿಯೊಬ್ಬ ಆತನ ಮುಂದೆ ಕುಳಿತ.
"ನೋಡು ಮಿಸ್ಟರ್ ರಾಮ್ಸ್ನ್ ನೀನು ಹಠಮಾಡಬೇಡ. ನಾವು ದೇಶಕ್ಕಾಗಿ ಯಾವುದೇ ಸೇವೆ ಮಾಡಲು ಸಿದ್ಧರಿರಬೇಕೆಂಬುದನ್ನು ಮರೆಯಬೇಡ...."
"ದೇಶಸೇವೆ...?" ರಾಮ್ಸ್ ಅಸಹನೆಯಿಂದ ಅಧಿಕಾರಿಯ ಮುಖದಿಂದ ತನ್ನ ನೋಟನ್ನು ಹೊರಳಿಸಿದ. ಆತನ ದೃಷ್ಟಿ ದೂರದಲ್ಲಿದ್ದ ಕುಚರ್ಿಯೊಂದರಲ್ಲಿ ಕೇಂದ್ರೀಕೃತವಾಯಿತು...

******

ತಾನು ಪ್ರಥಮ ಬಾರಿಗೆ ಈ ಪ್ರಯೋಗಾಲಯಕ್ಕೆ ಕಾಲಿಟ್ಟಾಗ ಅಣ್ಣ ಅದೇ ಕುಚರ್ಿಯಲ್ಲಿ ಕುಳಿತು "ಬಾರೋ ನನ್ನ ಪ್ರೀತಿಯ ಹುಡುಗ ಬಾ.." ಅಂದಿದ್ದ. ಅತ್ತಿಗೆ ಅಕ್ಕರೆಯಿಂದ ಹತ್ತಿರ ಬಂದು ತಲೆ ನೇವರಿಸಿದ್ದಳು...
ಆ ದಿನಗಳಲ್ಲಿ ರಾಮ್ಸ್ ತನ್ನಣ್ಣನ ಪ್ರಯೋಗಗಳನ್ನು ತಲೆಕೆರೆಯುತ್ತಾ ಏನೊಂದೂ ಅರ್ಥವಾಗದೆ ವೀಕ್ಷಿಸುತ್ತಿದ್ದ.
"ನೋಡು ರಾಮ್ಸ್ ಜಗತ್ತು ತನ್ನದೇ ಆದ ನಿಧರ್ಾರಗಳೊಂದಿಗೆ ಮುಂದುವರಿಯುತ್ತದೆ. ನನ್ನಂತಹ ಮಾನವ "ವಿಜ್ಞಾನಿ" ಎಂಬ ಶಂಖದಲ್ಲಿ ನಾನು ಕಂಡು ಹಿಡಿದೆ...ನಾನು ಕಂಡು ಹಿಡಿದೆ ಎಂದು ಊದುತ್ತಿರುತ್ತಾನೆ. ನಾನೊಂದು ರಹಸ್ಯವನ್ನು ಕಂಡು ಹಿಡಿದಿದ್ದೇನೆ. ಅದೆಷ್ಟು ಅಪಾಯಕಾರಿ ಎಂದರೆ ಮಾನವನ ಸಾವಿರಾರು ವರ್ಷಗಳ ಪ್ರಯತ್ನಕ್ಕೆ ಸಡ್ಡು ಹೊಡೆದು ತಿಂಗಳೊಳಗೆ ಎಲ್ಲವನ್ನೂ ಮಣ್ಣುಗೂಡಿಸುತ್ತದೆ. ನೋಡು ಸರಕಾರ ನನಗೆಲ್ಲಾ ಸೌಲಭ್ಯವನ್ನು ಕೊಟ್ಟಿದೆ. ವಿನಾಶಕಾರಿ ಪ್ರಯೋಗದಲ್ಲಿ ನನ್ನನ್ನು ತೊಡಗಿಸಿದೆ. ನಾನು ಅಂತಿಮ ಘಟ್ಟಕ್ಕೆ ಬಂದಿದ್ದೇನೆ. ಅದರ ಫಲಿತಾಂಶ ಅದೆಷ್ಟು ಭೀಕರ ಎಂದರೆ ಅದನ್ನು ಯೋಚಿಸಿ ನಾನು ನಡುಗುತ್ತಿದ್ದೇನೆ. ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಬೇಕೆಂಬ ಹೆಬ್ಬಯಕೆಯಿಂದ ಇತರ ರಾಷ್ಟ್ರಗಳನ್ನು ಹೇಗಾದರೂ ನಾಶಪಡಿಸಬೇಕು ಎಂಬ ಮಹತ್ವಾಕಾಂಕ್ಷೆಯುಳ್ಳ ನಮ್ಮ ಸರಕಾರದ ಕೈಗೆ ಇನ್ನೂ ಪೂತರ್ಿಯಾಗದ ಈ ಪ್ರಯೋಗ ಸಿಕ್ಕಿಬಿಟ್ಟರೆ... ಎಲ್ಲಿಯಾದರೂ ಇತರ ರಾಷ್ಟ್ರದ ಮೇಲೆ ಪ್ರಯೋಗಿಸಲ್ಪಟ್ಟರೆ... ಜಗತ್ತು ಒಮ್ಮಲೇ ಸಾವಿರಾರು ವರ್ಷಗಳಷ್ಟು ಹಿಂದೆ ಸರಿಯಲಿದೆ. ಮಾತ್ರವಲ್ಲ ಅದರ ಪರಿಣಾಮವನ್ನು ಊಹಿಸಲೂ ಅಸಾಧ್ಯ. ಜಪಾನ್ನ ನಗರಗಳ ಮೇಲುದುರಿದ ಪರಮಾಣು ಬಾಂಬಿನ ಪರಿಣಾಮಗಳನ್ನು ತಿಳಿದ ಮೇಲೆ... ಪ್ರಯೋಗಾಲಯದಿಂದ ಸೋರಿಹೋದ ಸಾಸರ್್, ಏಡ್ಸ್ನಂತಹ ಭೀಕರ ರೋಗಗಳ ಅನಾಹುತ ಅರಿತ ಮೇಲೆ ಜೀವ ಹೋದರೂ ಮತ್ತೋರ್ವ ಅಂತಹ ಕೆಲಸ ಮಾಡಲಾರ".
ರಾಮ್ಸ್ ತುಸು ಬೆದರಿದ. ಅಣ್ಣನ ಸಂಶೋಧನೆ ಯಾವುದು ಎಂದು ಕೇಳಲು ಮತ್ತಷ್ಟು ಹೆದರಿದ....

*****

"ಹಠಮಾಡಬೇಡ ಮಿಸ್ಟರ್ ರಾಮ್ಸನ್... ಹೀಗೆ ಮುಂದುವರಿದರೆ ನಿನಗೆ ಮೂರನೇ ದಜರ್ೆಯ ವಿಚಾರಣೆಯ ಶಿಕ್ಷೆ ನೀಡಬೇಕಾಗುತ್ತದೆ. ನಿನ್ನ ಜೀವನದ ಅರ್ಧ ಆಯಸ್ಸು ಆ ಶಿಕ್ಷೆಯಿಂದ ಕಳೆದುಕೊಳ್ಳಲಿರುವೆ ಎಂಬುದು ನಿನಗೆ ತಿಳಿದಿರಬಹುದು. ನನಗೆ ನಿನ್ನ ಮೇಲೆ ಕರುಣೆ ಬರುತ್ತಿದೆ ಹೇಳಿಬಿಡು... " ಮಿಲಿಟರಿ ಅಧಿಕಾರಿ ರಾಮ್ಸ್ನ ಯೋಚನಾ ಲಹರಿಯನ್ನು ಕತ್ತರಿಸಿದ.
"ಊಹುಂ... ನೀವೇನೇ ಮಾಡಿದರೂ ನಾನು ಹೇಳಲಾರೆ... ಯಾಕೆಂದರೆ ನನಗೇನೂ ಗೊತ್ತಿಲ್ಲ... ಖಂಡಿತಾ ನನ್ನನ್ನು ನಂಬಿ" ರಾಮ್ಸ್ ಗೋಗರೆದ.
ಮಿಲಿಟರಿ ಅಧಿಕಾರಿಯ ಮುಖ ಕೆಂಪಗಾಯಿತು. ರಾಮ್ಸ್ನ ಮುಖಕ್ಕೆ ರಪ್ಪನೆ ಬಾರಿಸಿದ "ಎದ್ದೇಳು ಹಾಳು ಕತ್ತೆ..." ಎಂದು ಆರ್ಭಟಿಸಿದ.
"ಈತನನ್ನು ಮೂರನೇ ದಜರ್ೆಯ ಪ್ರಯೋಗಾಲಯಕ್ಕೆ ಕರೆದೊಯ್ಯಿರಿ" ಎಂದು ಮಿಲಿಟರಿ ಅಧಿಕಾರಿ ತನ್ನ ನಾಲ್ವರು ಠೊಣಪ ಸಿಬ್ಬಂದಿಗಳಿಗೆ ಆಜ್ಞಾಪಿಸಿದ.
ರಾಮ್ಸ್ ಮತ್ತು ನಾಲ್ಕು ಮಂದಿಯನ್ನು ಹತ್ತಿಸಿಕೊಂಡ ಕಾರು ಮುನ್ನಡೆಯಿತು. ಅಲ್ಲಿಯವರೆಗೆ ಶಾಂತವಾಗಿದ್ದ ಪರಿಸ್ಥಿತಿ ಬದಲಾವಣೆ ಕಂಡಿತು. ಠೊಣಪರು ರಾಮ್ಸ್ಗೆ ಕಿರುಕುಳ ನೀಡಲಾರಂಭಿಸಿದರು.
ಕಾರು ದೇಶದ ಪ್ರಖ್ಯಾತ ಅಣೆಕಟ್ಟು "ನೀಲ ಹದ್ದ"ನ್ನು ಬಳಸಿಕೊಂಡು ಸಾಗತೊಡಗಿತು.
ಜಗತ್ತಿನಲ್ಲೇ ಅತ್ಯಾಧುನಿಕ "ನೀಲ ಹದ್ದಿ"ನ ಸುಂದರ ದೃಶ್ಯ ರಾಮ್ಸ್ನ ಕಣ್ಣಿಗೆ ಗೋಚರಿಸಿತು. ಒಂದು ಬದಿ ವಿಶಾಲ ಸಾಗರದಂತೆ. ಮತ್ತೊಂದು ಬದಿ ಆಳ ಪ್ರಪಾತ. ಪ್ರಪಾತದೆಡೆಗೆ ತೂರಿಬರುವ ಕಾರಂಜಿಯಂತಹ ನೀರು. ದೇಶದ ಅರ್ಧಭಾಗಕ್ಕೆ ವಿದ್ಯುತ್ ಒದಗಿಸುವ ಜನರೇಟರು ಕಟ್ಟಡಗಳು.. ಒಟ್ಟಾರೆಯಾಗಿ ನೋಡಿದಲ್ಲಿ ದೇಶದ ಆಥರ್ಿಕ ಶಕ್ತಿಯ ಬೆನ್ನೆಲುಬಾಗಿ ಹೆಮ್ಮೆಯಿಂದ ನೀಲ ಬಣ್ಣದ ಗಿಡುಗನಂತೆ ಕಂಗೊಳಿಸುತ್ತಿತ್ತು "ನೀಲಹದ್ದು". ಅದರ ಮಧ್ಯಭಾಗದ ಸೇತುವೆಯಲ್ಲಿ ರಾಮ್ಸ್ನನ್ನು ಹೊತ್ತುಕೊಂಡ ಕಾರು ಚಲಿಸುತ್ತಿತ್ತು.
ಠೊಣಪನೊಬ್ಬ ಸಿಗರೇಟು ತೆಗೆದು ತುಟಿಗಿರಿಸಿ, ಲೈಟರಿಗಾಗಿ ತಡಕಾಡಿದ. ಲೈಟರು ಕಾಣೆಯಾಗಿತ್ತು. ಮತ್ತೆ ಮೂವರ ಬಳಿಯೂ ಲೈಟರಿರಲಿಲ್ಲ. ಓರ್ವ ಠೊಣಪ "ರಾಮ್ಸ್ ಬಳಿ ಲೈಟರಿದೆ" ಅಂದ. ರಾಮ್ಸ್ನ ಪ್ರತಿಭಟನೆಯ ನಡುವೆ ಆತನ ಕಿಸೆಗಳನ್ನು ಶೋಧಿಸಲಾಯಿತು. ಪ್ಯಾಂಟಿನ ಕಿಸೆಯೊಳಗಿದ್ದ ಲೈಟರ್ ಠೊಣಪನೊಬ್ಬನ ಕೈ ಸೇರಿತು. ಆತ ಲೈಟರ್ ಉರಿಸಲಾರಂಭಿಸಿದ.
ಇಂಧನ ಖಾಲಿಯಾದ ಲೈಟರ್ ಕ್ಷಣಕಾಲ ಉರಿದು ಆರಿಹೋಯಿತು. ಠೊಣಪ ಅಸಹನೆಯಿಂದ ಬೈಯ್ದಾಡಿದ. "ಪ್ಲೀಸ್ ಲೈಟರ್ ಕೊಟ್ಟುಬಿಡು" ರಾಮ್ಸ್ ಗೋಗರೆದ. ಠೊಣಪ ಗಹಗಹಿಸಿ ನಕ್ಕ. "ಉರಿಯದ ಲೈಟರ್ ನಿನಗ್ಯಾಕೋ ಮೂರ್ಖ" ಎಂದು ಗೇಲಿ ಮಾಡಿದ.
"ನನಗೆ ಬೇಕು... ನನಗೆ ಬೇಕು" ಪುಟ್ಟ ಮಗುವಿನಂತೆ ರಾಮ್ಸ್ ಆಸನದಿಂದೆದ್ದ. ಠೊಣಪರಿಗೆ ಅದೊಂದು ಹಾಸ್ಯ ಪ್ರಸಂಗವಾಗಿಬಿಟ್ಟಿತ್ತು. ಒಬ್ಬನ ಕೈಯಿಂದ ಇನ್ನೊಬ್ಬನ ಕೈಗೆ ಲೈಟರ್ ಕುಣಿಯತೊಡಗಿತು. ರಾಮ್ಸ್ ಭ್ರಾಂತಿಗೊಳಗಾದವನಂತೆ ಅವರೊಂದಿಗೆ ಲೈಟರಿಗಾಗಿ ಹೋರಾಟಕ್ಕಿಳಿದ. ಕಾರು ತುಂಬ ಠೊಣಪರ ವ್ಯಂಗ್ಯ ಕೇಕೆ ತುಂಬಿ ಹೋಯಿತು.
ಠೊಣಪನೊಬ್ಬ ಲೈಟರನ್ನು ರಭಸವಾಗಿ ಹೊರಗೆಸೆದ...
ಲೈಟರಲ್ಲೇ ದೃಷ್ಟಿ ನೆಟ್ಟಿದ್ದ ರಾಮ್ಸ್, ಅದು ಅಣೆಕಟ್ಟಿನ ಕಾಂಕ್ರೀಟು ಆವರಣ ಗೋಡೆಗೆ ಬಡಿದು ಪುಡಿ ಪುಡಿಯಾಗಿ ಅದರೊಳಗಿದ್ದ ದ್ರವ ಚೆಲ್ಲಿ ಹೋದುದನ್ನು ಕ್ಷಣಮಾತ್ರದಲ್ಲಿ ಗ್ರಹಿಸಿದ...
ಈಗ ರಾಮ್ಸ್ನ ದೇಹದೊಳಗೆ ದೆವ್ವ ಪ್ರವೇಶವಾದಂತಾಗಿತ್ತು. ಠೊಣಪನೊಬ್ಬನ ಮೂಗಿಗೆ ಗುದ್ದಿದ. ಬಳ್ಳನೆ ರಕ್ತ ಹರಿಯಿತು. ಮತ್ತೊಬ್ಬನ ಕಣ್ಣಿಗೆ ತನ್ನ ತೋರು ಬೆರಳಿನಿಂದ ಕುಕ್ಕಿದ ಆತ ಕಣ್ಣು ಮುಚ್ಚಿ ನೋವಿನಿಂದ ಸಣ್ಣಗೆ ಚೀರಿದ. ಇನ್ನೊಬ್ಬನ ದವಡೆಗೆ ಬಾರಿಸಿದ. ಕಾರು ಸೇತುವೆ ಮೇಲೆ ಅಡ್ಡಾದಿಡ್ಡಿಯಾಗಿ ಚಲಿಸತೊಡಗಿತು. ಕಾರು ಚಲಾಯುಸುತ್ತಿದ್ದ ಠೊಣಪ ಎಡಕೈಯಲ್ಲಿ ಸ್ಟೇರಿಂಗ್ ಹಿಡಿದು ಬಲಕೈಯಿಂದ ರಾಮ್ಸ್ನ ಕುತ್ತಿಗೆಯ ತಳಭಾಗಕ್ಕೆ ಘಾತಿಸಿದ. ರಾಮ್ಸ್ ಕುಸಿದ. ಆತನ ಸ್ಮೃತಿ ತಪ್ಪಿತು.
ಕಾರು ಅಣೆಕಟ್ಟಿನ ಅಂತಿಮ ಹಂತವನ್ನು ದಾಟಿತು.
ಕುತ್ತಿಗೆಯಲ್ಲಿ ತುಸು ನೋವು ಅರಿವಾದಾಗ ರಾಮ್ಸ್ ಮೆಲ್ಲನೆ ಕಣ್ಣುತೆರೆದ. ಕಾರು ಸಾಗುತ್ತಲೇ ಇತ್ತು. ಪಕ್ಕಕ್ಕೆ ದೃಷ್ಟಿ ಹಾಯಿಸಿದ. ಠೊಣಪ ಮೂಗೊತ್ತಿ ಕುಳಿತಿದ್ದ. ಮತ್ತೊಬ್ಬನ ಕಣ್ಣು ಕೆಂಪಗಾಗಿ ನೀರಿಳಿಯುತ್ತಿತ್ತು.
"ನೀವು ಮೂರ್ಖರು ಮತ್ತೊಬ್ಬರ ದುಃಖ ಅರಿಯದವರು ನಿಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಲ್ಲವರು" ರಾಮ್ಸ್ ಬೊಬ್ಬಿರಿದ.
ಠೊಣಪರು ಅವಕ್ಕಾದರು. ರಾಮ್ಸ್ನ ರೌದ್ರಾತಾರ ಅವರಿಗೆ ಬಲು ದೊಡ್ಡ ಪ್ರಶ್ನೆಯಾಗಿತ್ತು. ಆತನ ಭುಜಗಳನ್ನು ಆಸನಕ್ಕೊತ್ತಿ ಹಿಡಿದು ಮಿಸುಕಾಡದಂತೆ ಮಾಡಿದರು. ರಾಮ್ಸ್ ಬಯ್ದಾಡುತ್ತಲೇ ಇದ್ದ. ಆತನ ಶಾಂತತೆಯ ಅರಿವಿದ್ದ ಠೊಣಪರಿಗೆ ಈಗ ರೌದ್ರ ನರ್ತನ ಪರಿಚಯವಾಗುತ್ತಿತ್ತು. ಅವರು ಪಾತಾಳಕ್ಕಿಳಿದು ಹೋಗಿದ್ದರು. ಆತನಿಗೇನಾದರೂ ಅಪಾಯವಾದರೆ ಅವರ ಕತ್ತಿಗೆ ನೇಣು ಬೀಳುವ ಸಾಧ್ಯತೆಯಿತ್ತು. ಅಂತಹ ಕಟ್ಟಾಜ್ಞೆ ಅವರಿಗಿತ್ತು.
"ಸರ್... ಕೇವಲ ಜುಜುಬಿ, `ಉರಿಯದ ಸಿಗಾರ್ ಲೈಟರಿ'ಗಾಗಿ ನೀವು ಈ ರೀತಿ ಮಾಡುವುದೇ.....?" ಓರ್ವ ಅತೀ ವಿನಯವಾಗಿ ನುಡಿದ.
"ನಿನಗೇನು ಗೊತ್ತು ಮೂರ್ಖ...ಆ ಲೈಟರಿನಲ್ಲಿ ಪ್ರಪಂಚದ ಭವಿಷ್ಯ ಅಡಗಿತ್ತೆಂದು. ನಾನು ಮನಸ್ಸು ಮಾಡಿದ್ದರೆ ಪ್ರಪಂಚದ ಸರ್ವನಾಶವನ್ನೇ ನನ್ನಣ್ಣನ ಸಾವಿನ ಸೇಡಿಗಾಗಿ ಮಾಡುತ್ತಿದ್ದೆ. ಆದರೆ ನನಗದು ಇಷ್ಟವಿರಲಿಲ್ಲ. ನನ್ನ ಅಣ್ಣ ಯಾವ ಪಾಪಕ್ಕೆ ಹೆದರಿ ಇಹಲೋಕ ತ್ಯಜಿಸಿದನೋ ಅಂತಹ ಪಾಪವನ್ನು ನಾನು ಮಾಡಬಲ್ಲನೇ? ಅಣ್ಣ, ಅತ್ತಿಗೆಯರನ್ನು ಮಾತ್ರ ಹೊಂದಿದ್ದ ನಾನು ಅವರಿಬ್ಬರನ್ನು ಕಳೆದುಕೊಂಡು ಅನುಭವಿಸಿದ ದುಃಖ ನಿನಗೇನು ಗೊತ್ತು. ಅದನ್ನು ಅನುಭವಿಸಿದ ನಂತರ ನಾನು ಸಾಮೂಹಿಕ ವಿನಾಶಕ್ಕೆ ಮನಸ್ಸು ಮಾಡಬಲ್ಲೆನೇ? ನೀವು ಮಾಡಿಬಿಟ್ಟಿರಿ... ನಿಮ್ಮ ಬಂಧು.. ಬಳಗ.. ದೇಶದ ವಿನಾಶವನ್ನು, ನಿಮ್ಮ ವಿನಾಶವನ್ನು.. ನಿಮ್ಮ ಕೈಯಾರೆ ಮಾಡಿಬಿಟ್ಟಿರಿ. ನೀವು ತಿಳಿಗೇಡಿಗಳು... ಮೂರ್ಖರು.... ಆ ಉರಿಯದ ಲೈಟರಿನ ಮೂಲಕ ಪ್ರಪಂಚಕ್ಕೆ ಕೊಳ್ಳಿಯಿಟ್ಟವರು..."
ರಾಮ್ಸ್ ಮತಿಭ್ರಾಂತಿಗೊಳಗಾಗಿದ್ದ.
ಆತನ ಆರ್ಭಟ ಠೊಣಪರಿಗೆ ಕಬ್ಬಿಣದ ಕಡಲೆಯಾಗಿತ್ತು.
ಮೂರನೇ ದಜರ್ೆಯ ಪ್ರಯೋಗಾಲಯದ ಆವರಣವನ್ನು ಹೊಕ್ಕ ಕಾರನ್ನು ಸ್ವಾಗತಿಸಲು ಸಿದ್ಧನಾಗಿ ಮಿಲಿಟರಿ ಅಧಿಕಾರಿಯೊಬ್ಬ ನಿಂತಿದ್ದ. ಕಾರಿನಿಂದ ನಾಲ್ಕು ಮಂದಿ ಠೊಣಪರು ಅಪರಾಧಿ ಪ್ರಜ್ಞೆಯನ್ನು ಮೈ ತುಂಬಾ ಹೊತ್ತುಕೊಂಡವರಂತೆ ತಲೆ ತಗ್ಗಿಸಿ ಇಳಿದರು. ರಾಮ್ಸ್ ಹುಚ್ಚನಂತಾಡುತ್ತಿದ್ದ. ಕಾರಿನಿಂದ ಇಳಿಯಲು ನಿರಾಕರಿಸುತ್ತಿದ್ದ "ನೀವು ನನ್ನನ್ನು ಕೊಂದು ಬಿಡಿ" ಎಂದು ಅರಚುತ್ತಿದ್ದ.
ಮಿಲಿಟರಿ ಅಧಿಕಾರಿ ಕಾರಿನ ಬಾಗಿಲೆಡೆ ಧಾವಿಸಿದ. ಠೊಣಪರು ನಡೆದ ಘಟನೆಯ ವರದಿ ಒಪ್ಪಿಸಿದರು. ವ್ಯಘ್ರಗೊಂಡ ಮಿಲಿಟರಿ ಅಧಿಕಾರಿ "ನೀವು ಕೆಲಸಕ್ಕೆ ಬಾರದ ವ್ಯಕ್ತಿಗಳು" ಎಂದು ಬೈಯ್ದಾಡಿದ. ತಕ್ಷಣ ಅವರ ಬಂಧನಕ್ಕೆ ಆಜ್ಞಾಪಿಸಿದ.
ರಾಮ್ಸ್ ಮತಿವಿಕಲನಾಗಿದ್ದ. ಆತನನ್ನು ವಸತಿಗೃಹವೊಂದರಲ್ಲಿ ಸಕಲ ಸೌಲಭ್ಯಗಳೊಂದಿಗೆ ರಾಜ ಮಯರ್ಾದೆಯಲ್ಲಿ ಬಂಧನದಲ್ಲಿಡಲಾಯಿತು. "ಅನಾರೋಗ್ಯದಿಂದಿರುವವನಿಗೆ ಮೂರನೇ ದಜರ್ೆಯ ವಿಚಾರಣೆಯ ಶಿಕ್ಷೆ ನೀಡಲು ದೇಶದ ಕಾನೂನು ಸಮ್ಮತಿ ನೀಡುತ್ತಿರಲಿಲ್ಲ. ಚಿಕಿತ್ಸೆ ನೀಡುವುದರೊಂದಿಗೆ ರಾಮ್ಸ್ನ ಚಲನವಲನಗಳು, ವರ್ತನೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಾಗುತ್ತಿತ್ತು. ತ್ತೊಂಭತ್ತು ಶೇಕಡಾ ಆರೋಗ್ಯವಂತನಾದ ರಾಮ್ಸ್ನಿಗೆ ಮೂರನೇ ದಜರ್ೆಯ ವಿಚಾರಣೆ ಮಾಡುವ ದಿನಾಂಕವನ್ನು ಗೊತ್ತು ಮಾಡಲಾಯಿತು.
ಮಿಲಿಟರಿ ಅಧಿಕಾರಿ ರಾಮ್ಸ್ನ ಕೊಠಡಿಯೊಳಗೆ ಕುಳಿತು ಕುಶಲೋಪರಿ ವಿಚಾರಿಸಲಾರಂಭಿಸಿದ. ದೂರದರ್ಶನದ ಪರದೆಯಲ್ಲಿ ಸುದ್ಧಿ ಬಿತ್ತರವಾಗುತ್ತಿತ್ತು. ಮಿಲಿಟರಿ ಅಧಿಕಾರಿಯ ಮುಖ ನೋಡದೆ, ಅನ್ಯಮನಸ್ಕನಾಗಿ ದೂರದರ್ಶನ ನೋಡುತ್ತಿದ್ದ ರಾಮ್ಸ್ ಇದ್ದಕ್ಕಿದ್ದಂತೆ ಗಂಭೀರನಾದ. ಸುದ್ಧಿಯೊಂದು ಆತನ ಮೇಲೆ ಪ್ರಭಾವ ಬೀರಲಾರಂಭಿಸಿತು. ಮಿಲಿಟರಿ ಅಧಿಕಾರಿ ಕುತೂಹಲಭರಿತನಾಗಿ ರಾಮ್ಸ್ ಮತ್ತು ದೂರದರ್ಶನದ ಕಡೆ ದೃಷ್ಟಿ ಬದಲಿಸುತ್ತಾ ನೋಡತೊಡಗಿದ.
"ನೀಲ ಹದ್ದಿನ" ಮೇಲಿನ ಹಂತದಲ್ಲಿ ಸಣ್ಣಗೆ ಬಿರುಕು ಕಾಣಿಸುತ್ತಿದ್ದು ನೀರು ಸೋರಲಾರಂಭಿಸಿದೆ. ಅಧಿಕಾರಿಗಳು ನಿಯಂತ್ರಣ ಕಾರ್ಯದಲ್ಲಿ ಮಗ್ನರಾಗಿದ್ದರೂ ವಿಶ್ವಾಸಭರಿತರಾಗಿಲ್ಲ. ಇಂತಹ ಬಿರುಕುಗಳು ಅಣೆಕಟ್ಟಿನ ಮೇಲು ಹಂತದಿಂದ ಕೆಲಹಂತದವರೆಗೂ ಅಲ್ಲಲ್ಲಿ ಕಾಣಿಸಿಕೊಂಡಿದೆ. ಆ ಬಿರುಕುಗಳಲ್ಲಿ ಕಪ್ಪು ಬಣ್ಣದ ಚಿಕ್ಕ ಚಿಕ್ಕ ಕೀಟಗಳು ಗುಂಪು ಗುಂಪಾಗಿ ಗೋಚರಿಸುತ್ತಿವೆಯೆಂದು ಅವರು ಹೇಳುತ್ತಿದ್ದು ಇದಕ್ಕೆ ಕಾರಣವೇನೆಂದು ಸಂಶೋಧಿಸಲಾಗುತ್ತಿದೆ. ಆದರೆ ಅದು ಸಫಲತೆಯನ್ನು ನೀಡಿಲ್ಲ. ಹೀಗೆ ಮುಂದುವರಿದಲ್ಲಿ ಇನ್ನೊಂದು ದಿವಸದೊಳಗೆ ಅಣೆಕಟ್ಟು ಒಡೆದು ಹೋಗುವ ಸಂಭವವಿದ್ದು ಪರಿಹಾರ ಕಾರ್ಯಗಳ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಯೋಚಿಸಲಾಗುತ್ತಿದೆ. ಅಣೆಕಟ್ಟಿನ ಪರಿಸರದಿಂದ ಜನರನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ..."
ಮಿಲಿಟರಿ ಅಧಿಕಾರಿಯ ಮುಖ ಬಿಳುಚಿಕೊಂಡಿತು.
ರಾಮ್ಸ್ ರೌದ್ರಾವತಾರ ತಾಳಿದ್ದ...
"ನೀವು ಪಾಪಿಗಳು... ಪಾಪದ ಫಲ ದೇಶವಾಸಿಗಳೆಲ್ಲಾ ಉಣ್ಣಬೇಕಾಗಿದೆ... " ಎಂದು ಕಿರುಚಾಡುತ್ತಾ ಕೈಗೆ ಸಿಕ್ಕ ವಸ್ತುಗಳನ್ನು ಅಧಿಕಾರಿಯ ಮೇಲೆಸೆಯಲಾರಂಭಿಸಿದ. ಸಿಬ್ಬಂದಿಗಳು ಧಾವಿಸಿ ರಾಮ್ಸ್ನನ್ನು ಬಂಧಿಸಿದರು.
ಮತ್ತೆರಡು ದಿನಗಳಲ್ಲಿ ಭೀಕರ ಆಘಾತ ದೇಶವನ್ನು ಅಪ್ಪಳಿಸಿತು. "ನೀಲಹದ್ದು" ಭಯಂಕರವಾಗಿ ಒಡೆದು ಹೋಗಿತ್ತು. ಲಕ್ಷಾಂತರ ಮಂದಿಯ ಆಸ್ತಿ ಪಾಸ್ತಿಗಳು ನಷ್ಟವಾಗಿತ್ತು. ಲೆಕ್ಕವಿಲ್ಲದಷ್ಟು ಜನ ಕೊಚ್ಚಿ ಹೋಗಿದ್ದರು. ಎರಡು ಪ್ರಖ್ಯಾತ ನಗರಗಳು ಇನ್ನಿಲ್ಲದಂತೆ ನಾಶವಾಗಿತ್ತು...
ರಾಮ್ಸ್ನ ಹುಚ್ಚುತನ ಮೇರೆ ಮೀರಿತ್ತು. ಯಾರಿಗೂ ಆತನನ್ನು ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಮಿಲಿಟರಿ ಅಧಿಕಾರಿಗಳಿಗೆ ಈತನ ಹುಚ್ಚುತನದ ಬಗ್ಗೆ ಸಂಶಯ ಮೂಡಿತು. ಆತನ ಅಣ್ಣ ಕಂಡುಹಿಡಿದಿರುವ ರಹಸ್ಯದಿಂದಲೇ ಈ ಅನಾಹುತ ಎಂಬುದಾಗಿ ಅವರಿಗೆ ಸ್ಪಷ್ಟವಾಗಿತ್ತು. ಅದೇನೆಂದು ತಿಳಿಯಲು ಸಹಾಯಕವಾಗುವ ಮೂರನೇ ದಜರ್ೆಯ ಪರೀಕ್ಷೆಗೆ ಕಾನೂನು ಸಮ್ಮತಿಸುತ್ತಿರಲಿಲ್ಲ. ಅಸ್ತವ್ಯಸ್ತಗೊಂಡ ದೇಶದ ಪರಿಸ್ಥಿತಿಯ ಮೂಲವನ್ನು ತಿಳಿಯಲು ಅನಿವಾರ್ಯವಾಗಿ ಕಾನೂನು ಮುರಿಯಲು ನಿರ್ಧರಿಸಲಾಯಿತು.
ರಾಮ್ಸ್ ಮೂರನೇ ದಜರ್ೆಯ ಪ್ರಯೋಗಾಲಯದ ಅಪರಾಧಿ ಕುಚರ್ಿಯಲ್ಲಿ ಕಟ್ಟಿಹಾಕಲ್ಪಟ್ಟಿದ್ದ...
ವಿವಿಧ ರೀತಿಯ ತಂತಿಗಳು ಆತನ ದೇಹವಿಡೀ ಬಿಗಿಯಲ್ಪಟ್ಟಿತು.
"ಸ್ಟಾರ್ಟ್" ಎಂದ ಕೂಡಲೇ ಗುಂಡಿ ಅದುಮಲ್ಪಟ್ಟಿತು. ಕುಳಿತಲ್ಲಿಂದಲೇ ತುಸು ಕುಪ್ಪಳಿಸಿದ ರಾಮ್ ಮತ್ತೆ ಯಥಾ ಸ್ಥಿತಿಗೆ ಬಂದ. ತೇಲುಗಣ್ಣಿನ ಮೂಲಕ ಮಿಲಿಟರಿ ಅಧಿಕಾರಿಯ ಮುಖವನ್ನು ದಿಟ್ಟಿಸಲಾರಂಭಿಸಿದ.
"ಹೇಳು ಮಿಸ್ಟರ್ ರಾಮ್ಸನ್... ನಿನ್ನ ಅಣ್ಣನ ಪ್ರಯೋಗದ ಬಗ್ಗೆ ಹೇಳು" ಮಿಲಿಟರಿ ಅಧಿಕಾರಿ ಪ್ರಶ್ನಿಸಿದ.
"ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ನನ್ನ ಅಣ್ಣ ಯಾವ ರೀತಿಯ ಪ್ರಯೋಗದಲ್ಲಿ ನಿರತನಾಗಿದ್ದನೆಂದು ಖಂಡಿತವಾಗಿಯೂ ನನಗೆ ಗೊತ್ತಿಲ್ಲ....."
"ಮೂರನೇ ದಜರ್ೆಯ ಪ್ರಯೋಗ ವಿಫಲವಾಯಿತೇ...?"
ಅಧಿಕಾರಿ ಅಚ್ಚರಿಯಿಂದ ಗೊಣಗಿದ. ಆತನ ಮುಖ ವಿವರ್ಣವಾಯಿತು. ಇಂತಹ ವಿಚಾರಣೆಯಲ್ಲಿ ಪ್ರಶ್ನೆಗಳಿಗೆ ಪಟಪಟನೆ ಉತ್ತರ ನೀಡುತ್ತಿದ್ದ ಅಪರಾಧಿಗಳು ಆತನಿಗೆ ಈವರೆಗೆ ಸಿಕ್ಕಿದ್ದರು. ಈತನೇಕೆ ಹೀಗೆ... ಪ್ರಾಯಶಃ ತಾನು ತಪ್ಪು ದಾರಿಯಲ್ಲಿ ಸಾಗುತ್ತಿದ್ದೇನೆಯೇ? ಎಂಬ ಪ್ರಶ್ನೆಯು ಆತನನ್ನು ಕಾಡಿತು.
"ಹಾಗಾದರೆ ನಿನಗೆ ಗೊತ್ತಿರುವುದೇನು ಹೇಳು...." ಅಧಿಕಾರಿ ವಿಶ್ವಾಸ ಹೀನನಾಗಿ ಪ್ರಶ್ನಿಸಿದ.
"ನನಗೆ ಇಷ್ಟೇ ಗೊತ್ತು. ಅಣ್ಣ ದೂರವಾಣಿಯ ಮೂಲಕ ನನಗೆ ಹೇಳಿದ್ದ ನಾವು ವಿಶಿಷ್ಠರೀತಿಯ ಪ್ರಯೋಗದಲ್ಲಿ ತೊಡಗಿದ್ದೇವೆ. ಇದು ಯಶಸ್ವಿಯಾದರೆ ಜಗತ್ತು ಒಮ್ಮೆಲೇ ಸಾವಿರಾರು ವರ್ಷಗಳ ಹಿಂದೆ ಸರಿಯಲಿದೆ. ಆದರೆ ಅದನ್ನು ಪ್ರಪಂಚವನ್ನೇ ಗೆಲ್ಲಲು ಹೊರಟ ದೇಶದ ಕೈಗೆ ನೀಡಲು ನನಗೆ ಮನಸ್ಸಿಲ್ಲ. ಇವರಿಗೆ ನನ್ನ ಮೇಲೆ ಸಂಶಯವಿದೆ ನಾವೆಲ್ಲಿಯಾದರೂ ಓಡಿಹೋಗುತ್ತೇವೆಯೊ ಎಂಬ ಭಯ ಇವರನ್ನು ಕಾಡುತ್ತಿದೆ. ನಾನು ಮೂರನೇ ದಜರ್ೆಯ ವಿಚಾರಣೆ ಎದುರಿಸುವ ಭೀತಿಯಲ್ಲಿದ್ದೇನೆ. ಅಲ್ಲಿ ನನ್ನ ಪ್ರಯೋಗದ ರಹಸ್ಯ ಬಹಿರಂಗವಾಗುವ ಸಾಧ್ಯತೆ ಇದೆ. ಆದುದರಿಂದ ಕೂಡಲೇ ಬಂದು ಬಿಡು. ನನ್ನ ಆಸ್ತಿ ಹಣ ಎಲ್ಲವನ್ನು ನಿನ್ನ ವಶಕ್ಕೆ ಒಪ್ಪಿಸುವ ಏಪರ್ಾಡು ಮಾಡಿದ್ದೇನೆ. ತಕ್ಷಣ ಹೊರಟು ಬಿಡು" ಎನ್ನುತ್ತಿದ್ದಂತೆ ರಾಮ್ಸ್ನ ಆಯಾಸಗೊಂಡಿದ್ದ.
"ಮುಂದೇನಾಯಿತು ಹೇಳು" ಅಧಿಕಾರಿ ಕುತೂಹಲ, ಆತುರದಿಂದ ಪ್ರಶ್ನಿಸಿದ.
"ಮುಂದೆ.... ಮುಂದೆ ನಾನು ಅಣ್ಣನ ಪ್ರಯೋಗಾಲಯಕ್ಕೆ ಹೋಗಿ ನೋಡಿದ್ದು ಅಣ್ಣ ಅತ್ತಿಗೆಯರನ್ನಲ್ಲ. ಕೇವಲ ಅವರ ಮೃತ ಶರೀರವನ್ನು ಅವರಿಬ್ಬರೂ ಯಾವುದೋ ಭೀತಿಯಿಂದ ಗುಂಡಿಟ್ಟು ಆತ್ಯಹತ್ಯೆ ಮಾಡಿಕೊಂಡಿದ್ದರು. ಅಣ್ಣನ ಮೇಜಿನ ಮೇಲೆ ಒಂದು ಪತ್ರ, ಒಂದು ಲಕೋಟೆ ಮತ್ತೊಂದು ಸಿಗಾರ್ ಲೈಟರ್ ನನಗಾಗಿ ಕಾಯುತ್ತಿತ್ತು. ನಡುಗುವ ಕೈಗಳಿಂದ ಪತ್ರ ಎತ್ತಿಕೊಂಡಿದ್ದೆ.
ಪ್ರೀತಿಯ ರಾಮ್ಸ್...
ನಾವಿಬ್ಬರೂ ಸತ್ತಿದ್ದೇವೆ. ಜಗತ್ತನ್ನು ನಾಶ ಮಾಡುವ ಪ್ರಯೋಗ ಮಾಡುವ ಮಂದಿಗೆ ಇನ್ನು ಮುಂದೆಯೂ ಇದೇ ಗತಿಯಾಗಬೇಕು. ನೀನೇನೂ ಯೋಚನೆ ಮಾಡಬೇಡ ನನ್ನೆಲ್ಲಾ ಆಸ್ತಿಯನ್ನು ನಿನ್ನ ಹೆಸರಿಗೆ ಬರೆದ ಉಯಿಲಿನ ಲಕೋಟೆ ಇಲ್ಲಿದೆ. ಅದರೊಂದಿಗೆ ಸಿಗಾರ್ ಲೈಟರ್ ಒಂದಿದೆ. ಅದನ್ನು ಜತನದಿಂದ ಎರಡು ತಿಂಗಳು ಕಾಪಾಡು. ಅದರಲ್ಲಿರುವ ದ್ರವ ಆರಿಹೋದ ನಂತರ ಅದನ್ನು ನಾಶಪಡಿಸು. ಆದರೆ ಯಾವುದೇ ಕಾರಣಕ್ಕೂ ಅದರಲ್ಲಿರುವ ಕೀಟಗಳು ಭೂಮಿಗೆ ಸೇರದಂತೆ ಎಚ್ಚರವಹಿಸು. ಇನ್ನೆರಡು ದಿನಗಳಲ್ಲಿ ನನ್ನ ಬಂಧನವಾಗಿ ಮೂರನೇ ದಜರ್ೆಯ ಶಿಕ್ಷೆ ನನಗೆ ಕಾದಿತ್ತು. ಹಾಗಾದಲ್ಲಿ ಈ ನನ್ನ ಜೈವಿಕ ಕೀಟಾಣುಗಳು ಮಹತ್ವಾಕಾಂಕ್ಷಿ ರಾಕ್ಷಸರ ಕೈ ಸೇರಿ ಅನಾಹುತವಾಗುತ್ತದೆ. ನನ್ನೆಲ್ಲಾ ಸಂಶೋಧನೆಗಳನ್ನೂ ನಾಶಪಡಿಸಿದ್ದೇನೆ ಈ ಎರಡು ಬಗೆಯ ಕೀಟ ನಾಶವಾಗಲು ಇನ್ನೆರಡು ತಿಂಗಳು ಬೇಕು. ಈ ಲೈಟರನ್ನು ಭದ್ರವಾಗಿಡು. ಇದರಲ್ಲಿರುವ ಕೀಟಗಳು ಉಕ್ಕು ಮತ್ತು ಸಿಮೆಂಟುಗಳನ್ನು ಕೊರೆದು ತಿಂದು ಬಿಡುತ್ತವೆ. ರಕ್ತ ಬೀಜಾಸುರನಂತೆ ಶೀಘ್ರವಾಗಿ ಹರಡುತ್ತದೆ. ಇದರ ವಿರುದ್ಧ ವತರ್ಿಸುವ ಯಾವುದೇ ಸೂತ್ರ ಇಷ್ಟರವರೆಗೆ ಸಂಶೋಧನೆಯಾಗಿಲ್ಲ. ಯಾವ ಕಾರಣಕ್ಕೂ ಅದು ಭೂಮಿಯನ್ನು ಸೇರಬಾರದು. ಈ ಪತ್ರವನ್ನು ಸುಟ್ಟುಬಿಡು. ಉಯಿಲಿನೊಂದಿಗೆ ಊರಿಗೆ ಹೋಗಿ ಬಿಡು. ನಿನಗೆ ಒಳ್ಳೆಯದಾಗಲಿ. ಅಣ್ಣ ಅತ್ತಿಗೆಯರ ಕೊನೆಯ ಸಿಹಿ ಮುತ್ತುಗಳನ್ನು ಈ ಪತ್ರದೊಂದಿಗೆ ಇಟ್ಟಿದ್ದೇನೆ....
ಪತ್ರ ಓದಿಮುಗಿದ ಕೂಡಲೇ ಅದನ್ನು ಲೈಟರಿನಿಂದ ಸುಟ್ಟು ಬಿಟ್ಟಿದ್ದೇನೆ. ಲಕೋಟೆ ಎತ್ತಿ ವಿಮಾನ ಹತ್ತಿ ನೇರವಾಗಿ ನನ್ನ ಊರಿಗೆ ಹೊರಟು ಬಿಟ್ಟಿದ್ದೆ. ಅನಂತರ... ಅನಂತರ ನನ್ನ ಬಂಧನವಾಯಿತು..." ರಾಮ್ಸ್ ಸುಮ್ಮನಾದ.
ನಡೆದು ಹೋದ ಭೀಕರ ಪ್ರಮಾದದ ಅರಿವಾದ ಮಿಲಿಟರಿ ಅಧಿಕಾರಿ ಇದುವರೆಗೆ ಭದ್ರವಾಗಿದೆ ಎಂದು ಭಾವಿಸಿದ ಕೊಠಡಿಯ ಕಾಂಕ್ರೀಟುಗೋಡೆಯ ಕಡೆಗೆ ದಿಟ್ಟಿಸಿದ. ಅದರಲ್ಲಿ ಸಣ್ಣಗೆ ಮೂಡಿದ ಬಿರುಕು ಆತನಿಗೆ ಸ್ಪಷ್ಟವಾಗಿ ಗೋಚರಿಸಲಾರಂಭಿಸಿತು. ಅದೇ ಕಪ್ಪು ಕೀಟಾಣುಗಳು ನಾಗರೀಕ ಪ್ರಪಂಚವನ್ನೇ ತಿಂದು ಬಿಡುವ ಗಡಿಬಿಡಿಯಿಂದ ಓಡಾಡುತ್ತಿದ್ದವು...





*****

ಸಂಕಮಕ್ಕ ಪಾತೆರುಜೆರ್ಗೆ

(ಆಕಾಶವಾಣಿ ಮಂಗಳೂರು ಕೇಂದ್ರೊಡು ಯಾನ್ ಓದುದಿನ ಕತೆ )

ಸಂಕಮಕ್ಕ ಇತ್ತೆ ಪಾತೆರುನ ಕಮ್ಮಿ ಮಲ್ದೆರ್. ಏರಾಂಡಲಾ ಮೋನೆ ತೂದು 'ದಾನೆ ಸಂಕಮಕ್ಕಾಂದ್' ಕೇಂಡ ಅರೆನ ಬಿಮ್ಮ ಒಂಚೂರು ಪಂದುನತ್ತಾಂದೆ ದುಂಬುದಲೆಕ್ಕ ಪೊಲರ್ುದ ತೆಲ್ಕೆ ತೆಲ್ತ್ದ್ 'ದಾನೆ ಮಗ ಒಂಚಿ ಪಿದಾಡಿಯಾ? ಪಂದ್ ಸುರು ಮಲ್ತೆರ್ಡ, ಆರ್ ಆನಿ ಪುಲ್ಯಕಾಂಡೆ ಲಕ್ಕಿನೆಡ್ದಿಂಚಿದ ಸುದ್ದಿಲೆನ್ ಮಾತಾ ಪಾತೆರೊಂದು ನಡುಟ್ಟ್ ಅರೆನ ಪುಲ್ಲಿ ಶಂಕರನ್ ಒಯ್ತ್ ಕನತ್ತ್ದ್, ಆಯನೊಂಜಿ ಆತ್ ಪುಗರ್ಜಿಡ ಅರೆಗೆ ಪಾತೆರ್ನ ಪಾತೆರ್ಲೆಕ ಅವೊಂದಿತ್ತಜಿ.
ಅವು ಅಂದ್, ಆರ್ ಅರೆನ ಪುಲ್ಲಿ ಶಂಕನರನ್ ದಾಯೆ ಪುಗರುನು, ಅರೆನ ಪುಲ್ಲಿನ್ ಪುಗರಿಯೆರ್ಡ ನಮಕ್ಕ್ ದಾನೆ ತೊಂದರೆ. ನಮ್ಮ ಅಪ್ಪೆ ನಮನ್ ಪುಗರುಜೆರಾ?
ಶಂಕರನ ಅಪ್ಪೆ... ಪಂಡ ಶಂಕರೆ ಸಂಕಮಕ್ಕನ್ ಅಂಚೆನೇ ಲೆಪ್ಪುನು. ಆರ್ ಶಂಕರನ್ ಪುಗರ್ಯೆರೆ ಮಲ್ಲ ಕಾರ್ನ ಉಂಡು. ಅವು ದಾದ ಪಂಡ ಶಂಕರನ್ ಬುಡುಂಡ ಸಂಕಮಕ್ಕಗ್ ಆರ್ನಕುಲು ಪಂಡ್ದ್ ಏರ್ಲಾ ಇಜ್ಜಿ. ಶಂಕರೆ ಅರೆನ ಜೀವದ ಗಂಟ್. ಶಂಕರೆ ಇಜ್ಜೆ ಪಂಡ್ದಾಂಡ ಸಂಕಮಕ್ಕ ಒಂಜಿ ಗಲಿಗೆಲಾ ಬದ್ಕಯರ್ಂದೇ ಪನೊಲಿ.
ಅಂಚಾಂಡ ಶಂಕರಗ್ ಅಮ್ಮೆ, ತಮ್ಮಲೆ ಪಂದ್ ಏರ್ಲಾ ಇಜ್ಜಾಂದ್ ಕೇನರ್. ಇತ್ತೆದ ಮಟ್ಟ್ಗ್ ಏರ್ಲಾ ಇಜ್ಜಿಂದೇ ಪನೊಲಿ. ಶಂಕರನ ಅಜ್ಜೆರ್ ಪಂಡ ಸಂಕಮಕ್ಕನ ಕಂಡನೆ ಕೊಗ್ಗಣ್ಣೆ ದುಂಬುದ ಕಾಲೊಡು ಚಿಲ್ಲರೆ ನರಮಾನಿ ಮಿನಿ ಅತ್ತ್. ಬಡಪತ್ತದ ಇಲ್ಲಡ್ ಪುಟ್ಟುಂಡಲಾ ಎಡೇನ ಬೇಲೆ ಬೆಂದ್ದ್, ಆರ್ನನೇ ಸ್ವಂತ ಬೆನ್ನಿ ಮಲ್ತದ್ ತೂಪಾಯಿನ ಆನ್ ಮಗೇಂದೇ ಪನೊಲಿ. ಕಾರ್ಲದ ಪೇಂಟೆಡ್ ವಾ ನಮೂನೆದ ಗೌಜಿ, ಕುಸೆಲ್ ನಡಪೊಡ್ಡಲಾ ಅಯ್ತ ಪಿರಾವುಡು ಕೊಗ್ಗಣ್ಣನ ಕೈ ಉಪ್ಪೊಡೇ ಪನ್ಪಿನ ಕಾಲ ಅವು. ಕೊಗ್ಗಣ್ಣನ ಬಿಸರ್ಾತಿಗೆ ತೂದು ಪಡ್ಡೆದ್ರದ ಕರಿಯಣ್ಣೆ ಆರ್ನ ಒತರ್ಿಯೇ ಮಗಲ್ ಸಂಕಮ್ಮನ್ ಧಾರೆ ಮೈಯ್ತ್ ಕೊರ್ದಿತ್ತೆರ್.
ಬೊಡ್ಚಾಂದಿನ ದುರಾಭ್ಯಾಸೊಲು ಮಿನಿ ದಾಲಾ ಕೊಗ್ಗಗ್ ಇತ್ತ್ಜಿ. ಆಂಡ ಕಂಬುಲದ ಒಂಜಿ ಮರ್ಲ್ ಇತ್ತಂಡ್. ವಾ ಊರುಡು ಕಂಬುಲ ಆಂಡಲಾ ಕೊಗ್ಗೆ ಉಪ್ಪುವನೇ. ಖಾಲಿ ಉಪ್ಪುನು ಮಾತ್ರ ಅತ್ತ್. ಗೋಳಿದಡಿ ತ್ಯಾಂಪಣ್ಣೆರ್ನ ಗಿಡ್ದೆರುತ್ತ ಮೂಕುದ ಬಲ್ಲ್ಲಾ ಕೊಗ್ಗನ ಕೈಯ್ಟೇ ಇತ್ತ್ಂಡ್.
ಗಿಡ್ದೆರ್ಲೆನ್ ಗಂತ್ಡ್ ಸಕರ್ೆಗ್ ಉಂತಾವೊಡ್ಡ ಕೊಗ್ಗಣ್ಣೆ ಬೋಡೆ. 'ಅಲಾ... ಬುಡ್ಲಾ...'ಂದ್ ಪನ್ಪಿನ ಕೊಗ್ಗಣ್ಣನ ಅರಬೈ ಕೇಂದೇ ತ್ಯಾಂಪಣ್ಣನ ಎರ್ಲು ಒಂಜೇ ದಂಬುಡು 'ಮಂಜೊಟ್ಟಿ'ಗ್ ಕಾರ್ ದೀವೊಂದಿತ್ತ. ಕೊಗ್ಗಣ್ಣನ ಬಿಸರ್ಾತಿಕೆಡ್ ತ್ಯಾಂಪಣ್ಣೆರ್ನ ಎರ್ಲು ಮಸ್ತ್ ಮೆಡಲ್ ಆಕ್ದಿತ್ತ. ತ್ಯಾಂಪಣ್ಣನ ಎರ್ಲೆದ ಮಿತ್ತ್ ಕೊಗ್ಗಣ್ಣಗ್ ಏತ್ ವಿಶ್ವಾಸ ಪಂಡ ಅಯಿಕ್ಲೆನ ಪಿರಾವುಡು ಏತ್ ದುಡ್ಡು ಕಟ್ಟೆರ್ಲಾ ಆರ್ ತಯಾರಿತ್ತೆರ್.
ಸೋಲು-ಗೆಲ್ಮೆ ಇತ್ತಿನವೇ ತ್ಯಾಂಪಣ್ಣೆರ್ನ ಎರ್ಲೆನ 'ಪರು' ಎಚ್ಚಾವೊಂದಿತ್ತಿಲೆಕ್ಕನೇ ಅಯ್ಕ್ಲೆಗೆ 'ಮಂಜೊಟ್ಟಿ' ದೂರ ಆವೆರೆ ಸುರುವಾಂಡ್. ಕೊಗ್ಗಣ್ಣೆ ಅಯ್ತ ಪಿರಾವುಡು ಕಟ್ಟಿನ ದೂದು ಸೋಲ್ಪೆರೆ ಸುರವಾಂಡ್. ಆರ್ ಬಂಗ ಬತ್ತ್ದ್ ಬೆಂದಿನ ಬೆನ್ನಿ ಕರಾವೆರೆ ಸುರುವಾಂಡ್. ಸಂಕಮ ಏತ್ ಬುದ್ದಿ ಪಂಡ್ಂಡಲಾ ಕೇನಿಜೆರ್. 'ಯಾನ್ ಮಲ್ದಿನಿ - ಯಾನ್ ಮುಗಿಪ್ಪುನಿ, ಕೇನ್ಯರೆ ಈ ಏರ್?' ಪಂದ್ ಗೌಜಿ ಮಲ್ತೆರ್.
ತ್ಯಾಂಪಣ್ಣೆ ಪರ ಎರು ಬದಲ್ತ್ತ್ದ್ ಪೊಸ ಎರುಕ್ಕುಲೆನ್ ಕಟ್ಟಿಯೆರ್. ಕೊಗ್ಗೆ ಅಯ್ತ ಬೆರಿಟ್ಟ್ಲಾ ಸಾರ ಸಾರ ದೂದು ಕಟ್ಟ್ದ್ ಏತ್ ಬೊಬ್ಬೆ ಪಾಡ್ಂಡಲಾ, ಮಂಜೊಟ್ಟಿಡ್ ಉಂತುದು ದೊಂಡೆ ಬಿಚ್ಚುಲೆಕ್ಕ ಎರುಕ್ಕುಲೆನ್ ಲೆತ್ತ್ಂಡಲಾ ವಾ ಪ್ರಯೋಜನಲಾ ಬೂರ್ಜಿ.
ಒಂಜಿ ಸತರ್ಿ ತ್ಯಾಂಪಣ್ಣೆರ್ನ ಎರುಕ್ಕು ಬುದ್ದಿ ಕಲ್ಪಾವೆಂದ್ ಮೂಂಕು ಬಲ್ಲ್ಡ್ ಪತ್ತ್ದ್ ಉರಬಡುಟ್ಟು ರಡ್ಡ್ ಒಯ್ಪುನಗ ಬರಮುಡು ದುಂಬು ಬತ್ತಿನ ಎರು ಕೊಗ್ಗಣ್ಣನ ಬಂಜಿ - ತಿಗಲೆದ ಸಂದ್ಗ್ ಗಟ್ಟಿಡ್ ಎಡ್ತ್ಂಡ್. ಅಲ್ಪನೇ ಮಗ್ರ್ನ ಕೊಗ್ಗಣ್ಣೆ ಒಂಜಿ ರಡ್ಡ್ ಗಳಿಗೆಡೇ ಪ್ರಾಣ ಬುಡಿಯೆರ್.
ಬಂಜಿನಾಲ್ ಸಂಕಮಕ್ಕನ ಇಲ್ಲ್ ಬಿತ್ತ್ಲ್ನ್ ಸಾಲ ಕೊರ್ತಿನಕ್ಲು ಏಲಂ ಮಲ್ತೆರ್. ಮಗೆ ನಾರಾಯಣೆ ಪುಟ್ಟುನಗ ಸಂಕಮ್ಮಡ ಒಂಜಿ ಅಕ್ಕಡ್ದ ಕಡ್ಡಿಲಾ ಇಜ್ಜಾಂದೆ ಪೋಂಡು. ಅಪ್ಪೆ ಇಲ್ಲಡ್ ಪಾಲ್ಗ್ ಬತ್ತಿನ ಒಂಜಿ ಎಲ್ಯ ಇಲ್ಲಡ್ ಸಂಕಮ್ಮ ನಾರಾಯಣನ್ ತಾಂಕಿಯಲ್. ಕೆಯಿ - ನಟ್ಟಿಗ್ ಪೋದು ನಾರಾಯಣಗ್ ದಾಲ ಕಮ್ಮಿ ಆವಂದಿಲೆಕ್ಕ ತೂಯಲ್.
ನಾರಾಯಣೆ ಜವನ್ಯೆ ಆಯೆ. ಅಮ್ಮೆ ಕೊಗ್ಗನ ಬಿಸರ್ಾದಿಗೆ ನಾರಾಯಣಡಲಾ ತೋಜಿದ್ ಬತ್ತ್ಂಡ್ 'ಬೆನ್ಪಾಟದ ಜವನ್ಯೆ'ಂದ್ ಜನಕ್ಕೊಲು ಬೆರಿ ಬೊಟ್ಟಿಯೆರ್. ಸಂಕಮ ಮಗನ್ ಸಂಕ್ರಾಂದಿ - ಸಂಕ್ರಾಂದಿ ದೇವೆರೆನ ಮನೆತ್ತ ಎದುರ್ ಉಂತಾದ್ ಪಟಕ್ಕು ಕೈ ದೀಪಾದ್ 'ಯಾನ್ ಕಂಬುಲೊಗು ಪೋಪುಜಿ... ಪೋಪುಜಿ... ಪೋಪುಜಿ' ಪಂದ್ ಆಜ ಪಾಡ್ಪಾವೊಂದಿತ್ತಲ್. ಅಂಚನೆ ನಾರಾಯಣೆ ಕಂಬುಲದಂಚಿ ತರೆ ಪಾಡ್ದ್ ಜೆತ್ತ್ಜೆ.
ಜವನ್ಯೆ ನಾರಾಯಣಗ್ ಎಡ್ಡ ಗುಣತ್ತ ಪೋಣ್ಣು ಆವೊಡುಂದು ಊರೊರ್ಮೆ ನಾಡ್ದ್ ಬೊಳ್ಮಣ್ದ ಕಾಂತಪ್ಪಣ್ಣನ ಮಗಳ್ ಸೀತನ್ ಮರ್ಮಲಾದ್ ಕನತ್ತೆರ್. ಸಂಕಮ್ಮಕ್ಕಗ್ ಸರಿಯಾಯಿನ ಮರ್ಮಲ್ ಸೀತ ಪಂದ್ ನಿರೆಕರೆತ್ತಕ್ಲು ಮಾತಾ ಪಂಡೆರ್.
ನಾರಾಯಣೆ ಇಲ್ಲಡ್ ಪೊರ್ಲಕಂಟ್ಡ್ ಬಲತಿನ ಮೈಪ ಕೋರಿನ್ ಪತ್ತೊಂದು ಪಡ್ಡೆದ್ರದ ಗಡಂಗ್ದ ಬರಿತ್ತ ಕೋರ್ದಟ್ಟದಂಚಿ ಏಪ ಪೋಯೆನಾ ಆನಿಯೇ ಆಯಗ್ ಸನಿ ಪತ್ತ್ಂಡ್. ಮೈಪಕೋರಿ ಏಲ್ ಕೋರಿಲೆನ್ ಕಾದ್ದ್ ಕೊರ್ನಗ ನಾರಾಯಣಗ್ ಕೋರ್ದಟ್ಟದ ಮರ್ಲ್ ತರೆಕ್ ಏರ್ದ್ ಪೋಂಡು. ಅಲ್ತ್ ಬೊಕ್ಕ ಓಲೋಲು ಮಾತಾ ಕೋರಿಕಟ್ಟ ಆಪುಂಡಾ ಅವುಲುಮಾತಾ ನಾರಾಯಣೆ ಉಪ್ಪೊಡೆ ಪನ್ಪಿನ ಕಾಲ ಬತ್ತ್ಂಡ್. ಸಂಕಮ್ಮ ಏತ್ ಜೋರು ಮಲ್ತ್ಂಡಲಾ 'ಈ ರೊರ ಮನಿಪಂದೆ ಕುಲ್ಲುಲೆ ಅಮ್ಮ. ಕೋರ್ದಟ್ಟದವುಲು ದಾನೆ ಎರು ಬರ್ಪುಂಡಾ ತಾಡ್ಯೆರೆ' ಪಂದ್ ಪನ್ಯೆರೆ ಸುರು ಮಲ್ತೆ.
ಸಂಕಮ್ಮನ ವಾ ಜನ್ಮದ ಪಾಪದ ಫಲನಾ ದಾಂನಾ ಸೀತ ಕಡೀರ್ದ ಬಂಜಿನಾಲ್ ಪೆದ್ದೆರೆಂದ್ ಅಪ್ಪೆ ಇಲ್ಲಗ್ ಪೋತಿನಾಲ್ ಬೊಕ್ಕ ಪಿರ ಬತ್ತ್ಜಲ್. ಶಂಕರಗ್ ಈ ಲೋಕದ ಬೊಲ್ಪು ತೋಜಾಯಿನ ಸೀತ ತೋಜಂದಿನ ಲೋಕೊಗು ಪಿದಾಡ್ದ್ ಪೋಯಲ್. ಪುರ್ಕಟ್ ಬಾಲೆನ್ ಸಂಕಮ್ಮಕ್ಕನೇ ಕನತ್ತ್ದ್ ತಾಂಕಿಯಲ್.
ಒಂಜಿ ಬೈಯ್ಯಗ್ ಕೋರ್ದಟ್ಟಗ್ಂದ್ ಪೋಯಿನ ನಾರಾಯಣೆ ರಾತ್ರಿ ಏತ್ ಪೊತರ್ಾಂಡಲಾ ಇಲ್ಲಗ್ ಬತ್ತ್ಜೆ ಮನದಾನಿ ಪುಲ್ಯಕಾಂಡೆ ಸುದ್ದಿ ಕೇಂದ್ ಸಂಕಮಕ್ಕನ ಅಕಲ್ ಪಾರ್ದೇ ಪೋಂಡು. ನಾರಾಯಣನ ಕೋಲು ಕಾರ್ಗ್ ಬಾಲ್ ತಾಗ್ದ್ ನೆತ್ತೆರ್ ಕಟ್ಟಂದಿನೆಕ್ ಕುಡ್ಲದ ಮಲ್ಲ ಆಸ್ಪತ್ರೆಗ್ ಕೊನನಗ ಸಾದಿಡೇ ನೆತ್ತರ್ ಖಾಲಿ ಆದ್ ಜೀವ ಬುಡಿಯೆಗೆಂದ್ ಊರು ನಿಲ್ಕೆ ಸುದ್ದಿ ಅಂಡ್.
ಅನಾಥೆ ಆಯಿನ ಶಂಕರೆ ಸಂಕಮ್ಮಕ್ಕಗ್ ಬದ್ಕೆರೆ ಬೊಲ್ಪು ಆದ್ ತೋಜಿಯೆ. ಇಂದ ಮಗಾ ನಿನ್ನ ಅಜ್ಜೆ ಕಂಬುಲಗ್ ಪೋದ ಹಾಳಾಯೆರ್, ಅಮ್ಮೆ ಕೋರ್ದಟ್ಟೊಡು ಜೂವ ಬುಡಿಯೆ. ನಿನನ್ ಯಾನ್ ಓಡೆಲಾ ಪೋವೊಚ್ಚಿಂದ್ ಪನ್ಪುಜಿ ನಿನ್ನ ಅಮ್ಮೆ, ಅಜ್ಜೆರ್ ಎಂಚ ಹಾಳಾಯೆರ್ಂದ್ ಮಾತ್ರ ಪನೊಂದುಲ್ಲೆ ಬೊಕ್ಕ ಮಾತಾ ನಿಕ್ಕೇ ಬುಡ್ತಿನವುಂದು ಶಂಕರಗ್ ಬುದ್ದಿ ತೆರೆಯೆರೆ ಸುರುವಾಯಿನಡ್ದಿಂಚಿ ಸಂಕಮಕ್ಕ ಪನೊಂದೇ ಬತ್ತೆರ್.
ಶಂಕರೆ ಶಾಲೆಗ್ ಪೋಯೆರೆ ಸುರ ಮಲ್ತೆ. ಶಾಲೆ ಕಲ್ತ್ದ್ ಎಡ್ಡೆ ಬೇಲೆ ಪತ್ತಿಯೆಡ ಯಾನೊಂಜಿ ವಾ ಎತೆಲಾ ದಾಂತೆ ಪೆರಣ ಬುಡ್ಪೆಂದ್ ಸಂಕಮಕ್ಕ ಎನ್ನಿನಿ ಮಾತ್ರ ಅತ್ತ ನಾಲ್ ಜನೊಕ್ಲುಡೆ ಪೆಂಡೆರ್. ಶಂಕರನ ಮಂಡೆಗ್ ಬರವು ಎಡೇನ ಪತ್ತ್ಂಡ್. ಆಯೆ ಒಂಜನೇ ನಂಬರ್ಡೇ ದುಂಬು ದುಂಬು ಪೋಯೆರೆ ಸುರು ಮಲ್ತೆ.
ಸಂಕಮಕ್ಕಗ್ ಬಾರೀ ಕುಶಿ. ಅರೆಗೆ ಬೆನ್ಯೆರೆ ಬಾರೀ ಉಮೇದ್. ಕೆಯಿ - ನಟ್ಟಿ - ಬೈ -ಮುಳಿಕ್ಕ್ಂದ್ ಪೋನಗ, ಪೇಂಟೆ - ದೇವಸ್ಥಾನ ಮಾತ್ರ ಅತ್ತ್ ಪೋಯಿನಲ್ಪ - ಬತ್ತಿನಲ್ಪ ಮಾತಾ ಕಡೆಟ್ಟ್ಲಾ ಬಾಯಿ ನಿಲ್ಕೆ ಪಾತೆರೊಂದು ನಡು ನಡುಟ್ಟು ಶಂಕರನ್ ಪುಗೊಂದು ಇತ್ತೆರ್.
ಏರಾಂಡಲಾ ಪುಲ್ಲಿ ಓಡೆಪೋತೆ ಪಂದ್ ಸಂಕಮಕ್ಕಡ ಕೇಂಡ ಆರ್ ಬಾಯಿ ನಿಲ್ಕೆ 'ಶಾಲೆಗ್ ಪೋತೆ ಮಗಾ, ಆಯನ ಅಜ್ಜೆ- ಅಮ್ಮೆರ್ ಇಜ್ಜಾಂದಿನ ದುರಾಭ್ಯಾಸೊಡು ಸೈತ್ ಪೋಯೆರ್ ಇಂಬ್ಯೆ ಒರಿಯಾಂಡಲಾ ಒಂತೆ ಕಲ್ಪಡ್ ಮಗಾಂದ್' ಪನೊಂದಿತ್ತೆರ್.
ಐತಾರ್ದಾನಿ ಶಂಕರೆ ಓಡೆ ಪೋತೆಂದ್ ಸಂಕಮಕ್ಕಡ ಕೇನುನೇ ಒಂಜಿ ರಂಗ್. 'ಇನಿ ಆಯಗ್ ರಜೆ ಮಗಾ. ಅವು ದಾದನಾ ಗೊಬ್ಬುವೆರತ್ತಾ. ಒರಿ ಚೆಂಡ್ ದಕ್ಕುನು ಬೊಕ್ಕರಿ ನನೊಂಜಿ ಮಗರ್ಿಲ್ಡ್ ಉಂತುದು ಕೊದಂಟಿ ಪತ್ತ್ದ್ ಬೀಜಾವುನು. ಚೆಂಡ್ ಆಯನ ಪಿರಾವುಡು ಊರ್ದಿನ ಮೂಜಿ ಕೋಲುಗು ತಾಗ್ಂಡ ಆಯೆ ಅವೆಂಚಿನ 'ಓಟು' ಗೆ ಎಂಕ್ ಬರ್ಪುಜಿ ಮಗಾ. ಆಯೆ ಪೋದು ಬೊಕ್ಕೊರಿ ಕೊದಂಟಿ ಪತೊಂದು ಬರ್ಪಿನಿ. ಏತ್ ಪೊಲರ್ು. ಮುರಾನಿ ಪದವುದ ಮೈದಾನೊಡು ಯಾನ್ ತೂಯೆ. ಶಂಕರೆ ಒಂಜಿ ಕೊದಂಟಿ ಪತ್ತೊಂದು ಚೆಂಡ್ಗ್ ಬೀಜಾದ್ ಬೀಜಾದ್ ಆಕೊಂದಿತ್ತೆ. ಬಾರಿ ಸೋಕುದ ಗೊಬ್ಬು ಅವು ಈ ಜೋಕ್ಲೆಗ್ ದೊಂಬು - ತೂ ಪಂದ್ ದಾಲಾ ಇಜ್ಜಿ ಇಲ್ಲಗ್ ಬನ್ನಗ ಮೋನೆಗ್ ಕಾಲೆ ಆಕಿಲೆಕ್ಕ ಆದುಪ್ಪುಂಡು....
ಬೊಕ್ಕ ಐತಾರ ಮಿನಿ ಆಯಗ್ ಒಂಜಿ ಚೂರು ಪುರ್ಸೊತ್ತಿಜ್ಜಿ. ಮುಲ್ಕಿ, ಬೆದ್ರ, ಕಾರ್ಲ ಪಂದ್ ಗೊಬ್ಬೆರೆ ಪೋಪೆ, ಮುರಾನಿ ಒಂಜಿ ಮಲ್ಲ ಮೆಡಲ್ ಕನೈದೆ. ಮಲ್ಲ ಅರಿವಾಣದ ಲೆಕ್ಕ ಇತ್ತಂಡ್. ಅಂಚಿನ ತಾಟುಲು ಇಲ್ಲಡ್ ಮಸ್ತ್ ಉಂಡು. ಗೋಡೆಡ್ ಮಾತಾ ತಿಕ್ಕಾದ್ ದೀತೆ. ಬೊಕ್ಕ ರೆಂಕೆ ಬೈದಿನ ಲೋಟೆಲು ಪತ್ತೈವ ಉಂಡು' ಇಂಚ ಸಂಕಮಕ್ಕ ಒಂಜೇ ದಂಬುಡು ಪನ್ಪಿನೆನ್ ಕೇಂದೇ ಕುಲ್ಲುಗಾಂದ ಆಪುಂಡು.
ಅಂಚಿನ ಸಂಕಮಕ್ಕ ಇತ್ತೆ ಪಾತೆರುನನೇ ಬುಡ್ತೆರ್ ಅಂಚಿನ ದಾನೆ ಆಂಡಪ್ಪಾ ಮೆರೆಗ್.
'ಅವು ದಾಲಾ ಇಜ್ಜಿಗೆ ಮುರಾನಿ ಐತಾರ್ದಾನಿ ಮುಲ್ಕಿಡ್ ಕ್ರಿಕೆಟ್ ಮ್ಯಾಚಿ ಇತ್ತ್ಂಡ್ಗೆ. ಶಂಕರೆ ಆಯನ ಟೀಮು ಗೆಂದುಡುಂದು ಒಂಜಿ ಸಾರ ಪಂತ ಕಟ್ಟ್ದಿತ್ತೆಗೆ. ಅಂಚ ಮೊಕ್ಲು ಗೆಂದಿ ಬೊಕ್ಕ ಶಂಕರಡ ಪಂತ ಪಾಡ್ದಿನಾಯೆ ಕಾಸ್ ಕೊರ್ಜೆಗೆ. ಶಂಕರೆ ಉಂತಾದೀದ್ ಕೇನ್ನಗ 'ಈ ಒರ ಪೋಯಾಂದ್' ಪಂಡೆಗೆ ಅಪಗ ಗಲಾಟೆ, ಪೆಟ್ಟ್ ಸುರವಾಂಡ್ಗೆ. ಆಯೆ ಕೈಟಿತ್ತಿನ ಬ್ಯಾಟ್ಡ್ ಶಂಕರಗ್ ಆಕಿಯೆಗೆ. ಗಲಾಟೆ ಜೋರಾದ್ ಅಕುಲು ಶಂಕರನ ಕಣ್ಣ - ಕೈ -ಕಾರ್ ತೂವಂದೆ ಆಕ್ದ್ ಪಾಡ್ದೆರ್ಗೆ. ಶಂಕರನ ಕಾರ್ ಪೊಲಿದ್ ಆಯನ್ ಆಸ್ಪತ್ರೆಡ್ ಪಾಡ್ದೆರ್ಗೆ. ನನ ಶಂಕರೆ ಸರಿ ಕಟ್ಟ್ ನಡಪೊಡ್ಡ ಕಮ್ಮಿಡ್ ಕಮ್ಮ ಆಜಿ ತಿಂಗೊಲು ಬೋಡಾವುಗೆ. ಪಾಪ ಸಂಕಮಕ್ಕ. ಅರೆನ ಕಂಡನೆ ಎರು ತಾಡ್ದ್ ಸೈದೆರ್. ಮಗೆ ಕೊರ್ದಟ್ಟಡ್ ಸೈತೆರ್. ಪುಲ್ಲಿ ಶಂಕರೆ ಇತ್ತೆ ಮ್ಯಾಚಿಡ್ ಪಂತ ಪಾಡ್ದ್ ಪೆಟ್ಟ್ ಗಲಾಟೆ ಮಲ್ತ್ದ್ ಕಾರ್ ಪೊಲಿದ್ ಆಸ್ಪತ್ರೆಡ್ ಜೈದೆ. ಬೊಕ್ಕ ಸಂಕಮಕ್ಕ ಇತ್ತೆ ದುಂಬುದಲೆಕ್ಕ ಪಾತೆರುನಾಂಡಲಾ ಎಂಚ ಪನ್ಲೆ.

ಊರು ಹೋಯಿತು

(ಬಂಟರವಾಣಿ ಮುಂಬಯಿ ಇದರ ಸುವರ್ಣ ಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾದ ಕತೆ)
`ಊರು ಹೋಗುತ್ತೆ ಕಣೇ... ನೀಲಾ...
``ಊರು ಹೋಗುತ್ತೆ...
ಆ ಮನೆಯ ಜಗುಲಿಯಿಂದ ರಾತ್ರಿಯ ನೀರವತೆಯನ್ನು ಬೇದಿಸಿಕೊಂಡು ಕ್ರಿಮಿ ಕೀಟಗಳ ಹಿಮ್ಮೇಳಗಳೊಂದಿಗೆ ಸ್ವರವೊಂದು ಕೇಳಿ ಬರುತ್ತಿತ್ತು.
`ಊರು ಹೋದ್ರೂ `ಊರು` ಅದು ಹೇಗೆ ಹೋಗುತ್ತದೆ... ನೀಲಾ ಅಜ್ಜ-ಪಿಜ್ಜನ ಕಾಲದಿಂದ ಇರೋ ದೈವದ `ಊರಿನ ತಳವನ್ನು ಯಾರು ನೋಡಿದ್ದಾರೆ... ಅದು ಕಾರ್ನಿಕದ ಕೆರೆ ಕಣೇ ನೀಲಾ...
ಊರು ಹೋಯಿತು
`ಊರು ಹೋಗುತ್ತೆ ಕಣೇ... ನೀಲಾ...
``ಊರು ಹೋಗುತ್ತೆ...
ಆ ಮನೆಯ ಜಗುಲಿಯಿಂದ ರಾತ್ರಿಯ ನೀರವತೆಯನ್ನು ಬೇದಿಸಿಕೊಂಡು ಕ್ರಿಮಿ ಕೀಟಗಳ ಹಿಮ್ಮೇಳಗಳೊಂದಿಗೆ ಸ್ವರವೊಂದು ಕೇಳಿ ಬರುತ್ತಿತ್ತು.
`ಊರು ಹೋದ್ರೂ `ಊರು` ಅದು ಹೇಗೆ ಹೋಗುತ್ತದೆ... ನೀಲಾ ಅಜ್ಜ-ಪಿಜ್ಜನ ಕಾಲದಿಂದ ಇರೋ ದೈವದ `ಊರಿನ ತಳವನ್ನು ಯಾರು ನೋಡಿದ್ದಾರೆ... ಅದು ಕಾರ್ನಿಕದ ಕೆರೆ ಕಣೇ ನೀಲಾ... ಕಾರ್ನಿಕದ ಕೆರೆ... ಅದಕ್ಕೆ ತಳ ಎಂಬುದಿಲ್ಲ ಕಣೇ... ಈ ಪಂಚಾತಿಕೆಯವರಿಗೆ ಮಂಡೆ ಸರಿ ಉಂಟಾ... ಎಲ್ಲರೂ ಊರು ಬಿಡುತ್ತಾರಂತೆ... ದುಡ್ಡು ತೆಗೆದುಕೊಳ್ಳುತ್ತಾರಂತೆ ನೀಲಾ... ಊರು ಹೋಗುತ್ತದಂತೆ....
ನಡು ರಾತ್ರಿ ಕಳೆದ ನಂತರ ಆ ಧ್ವನಿ ಕ್ಷೀಣವಾಗಿ ಜೀರುಂಡೆ ಕ್ರಿಮಿ ಕೀಟಗಳ ಸದ್ದು ಮೇಲುಗೈ ಪಡೆಯಿತು.
ಮರುದಿನ ಬೆಳಕು ಹರಿಯುತ್ತಿದ್ದಂತೆ ಆ ಮನೆಯಲ್ಲಿ ಚಟುವಟಿಕೆ ಕಂಡು ಬರತೊಡಗಿತ್ತು.
ನಿತ್ಯ ಕರ್ಮ ತೀರಿಸಿ ನೀಲಮ್ಮನ ಮುಂದೆ ಕುಳಿತ ದೇವಪ್ಪ `ನೀಲಾ ಊರು ಹೋಗುತ್ತದಂತೆ ಅಂದ.
ಊರು ಹೋದ್ರೆ ಹೋಗಲಿ? ನೀವ್ಯಾಕೆ ಹಗಲು ರಾತ್ರಿ ಊರು ಹೋಗುತ್ತೆ ಊರು ಹೋಗುತ್ತೆ ಅಂತ ಚಿಂತೆ ಮಾಡ್ಕೊಂಡು ಕೂತಿದ್ದೀರಿ. ಮೂರು ಮಕ್ಕಳು ಉಪಾಸ ಬೀಳುವುದು ಬೇಡಾಂತ ನಾನು ಗಾಣದೆತ್ತಿನಂತೆ ಒಂದು ಬೆಳಗ್ಗೆಯಿಂದ ಹೊತ್ತು ಅಡ್ಡಾಗುವವರೆಗೆ ದುಡಿದು ದುಡಿದು ಸೊಂಟದಲ್ಲಿ ಬಲ ಇಲ್ಲದೆ ಹೇಗಾದ್ರೂ ನೆಗರಿಕೊಂಡು ಮನೆಗೆ ಬಂದು ಬಿದ್ರೆ ನೀವು ಒಂದು ಬೆಳಿಗ್ಗೆಯಿಂದ ಊರು ಸುತ್ತಿ ಅದೆಲ್ಲೆಲ್ಲೋ ಬುಟ್ಟಿಚಾಕ್ರಿ ಮಾಡಿಕೊಂಡು ಯಾರ್ಯಾರೋ ಕೊಟ್ಟ ಮೂರ್ನಾಕು ಕಾಸು ಗಡಂಗಿನ ತೊಟ್ಟೆಗೆ ಹಾಕಿ ಕಣಿ, ತೋಡು, ಗದ್ದೆಯಲ್ಲೆಲ್ಲಾ ಉರುಳಾಡಿ ಪಿಲಿಗೊಬ್ಬು ಮಾಡಿಕೊಂಡು ಬರ್ತೀರಲ್ಲಾ ನಿಮ್ಗೆ ಏನಾದ್ರೂ ಮಂಡೆಯಲ್ಲಿ ಚೂರಾದ್ರೂ ಬೊಂಡು ಉಂಟಾ? ನಮ್ಮ ಮಕ್ಕಳಿಗೆ ಏನಾದ್ರೂ ಶಾಲೆ ಗೀಲೆ ಅಂತ ಕಲಿಸ್ಬೇಕು ಅಂತಾ ಯೋಚನೆ ಉಂಟಾ? ಆ ಚೆನ್ನಣ್ಣನನ್ನು ನೋಡಿ. ಹೇಗೆ ಬೆಳಿಗ್ಗಿಂದ ಸಂಜೆವರೆಗೆ ಸೌದೆ ಒಡೆದು, ತೆಂಗು-ಕಂಗು ಏರಿ ಇಳಿದು. ದುಡ್ಡಿಗೆ ದುಡ್ಡು ಮಾಡ್ತಾನೆ. ಮೊನ್ನೆ ಅವನ ಹೆಂಡ್ತಿ ಪೇಟೆಯ ಬಂಗಾರದ ಕೊಟ್ಟಿಗೆಯಲ್ಲಿ ಕೊತ್ತಂಬರಿ ಸರ ಗುದ್ದಿಸಿಕೊಂಡ್ಳು. ನನ್ನದೂ ಉಂಟು ನೋಡಿ ಇದೊಂದು ಮೋನ್ಮಾಲೆ ಅದೂ ಒಪ್ಪದ್ದು. ಆ ಚೆನ್ನಣ್ಣನ ಬುದ್ದಿ ನಿಮ್ಗೆ ಏಳು ಜನ್ಮ ಬಂದ್ರೂ ಬರೋದಕ್ಕಿಲ್ಲ... ನಿಮ್ಗೆ ಬೆಳಿಗ್ಗಿಂದ ಸಂಜೆ ವರೆಗೂ ದುಡಿದ್ರೂ ಈ ಊರಲ್ಲಿ ಒಂದೈವತ್ತು ರೂಪಾಯಿ ಯಾರಾದ್ರೂ ಕೊಡ್ತಾರ? ಅಲ್ಲಾ ನೀವು ತೆಗೋಳ್ತೀರಾ?... ಊರಂತೆ ಊರು. ಹೋದ್ರೆ ಹೋಗ್ಲಿ ಈ ಊರಿನ ಸನಿ ಸಂತಾನ ಸತ್ತು ಮಣ್ಣುತಿಂದು ಹೋಗ್ಲಿ. ನಾವು ಎಲ್ಲಿಯಾದ್ರೂ ಗಡಂಗು ಇಲ್ಲದ ಊರಿಗೆ ಹೋಗಿಬಿಡುವ. ಈ ಊರಲ್ಲಿ ನಿಮಗೆ ಕೆಲಸಕ್ಕೆ ತಕ್ಕ ಸಂಬಳ ಕೇಳಲು ಗೊತ್ತಿಲ್ಲ. ಕೊಡಲು ಅವರಿಗೆ ಗೊತ್ತಿಲ್ಲ.
ಅಲ್ಲಾ ಕಣೇ ಊರು ಹೋಗುತ್ತೆ ಹೋಗುತ್ತೆ ಅಂತಾರಲ್ಲಾ ಎಲ್ಲಿಗೆ ಹೋಗುತ್ತೇ?
ದೇವಪ್ಪ, ನೀಲಮ್ಮನ ವಟಗುಟ್ಟುವಿಕೆ ಕಿವಿಗೆ ಕೇಳಿಸಲೇ ಇಲ್ಲ ಎಂಬಂತೆ ಮುಂಭಾಗದಲ್ಲಿ ನಾಲ್ಕು ದೋಸೆ ಹಾಕಿದ್ದ ತಟ್ಟಿಕುಡ್ಪಿನ ಬಳಿ ಇದ್ದ ಅಲ್ಯೂಮಿನಿಯಂ ತಟ್ಟೆಯಲ್ಲಿದ್ದ ಬೂತಾಯಿ ಸಾರನ್ನು ನಡುಬೆರಳಿನಿಂದ ಅದ್ದಿ ತುಟಿಗಿಟ್ಟು ಚಪ್ಪರಿಸುತ್ತಾ ನುಡಿದ.
ಎಲಾ ಕತೆಯೇ.... ಪುನಾ ಅದೇ ಮಾತಾಡ್ತೀರಲ್ಲಾ.... ಅದೆಲ್ಲಿಗೋ ಏಳು ಕಡಲಾಚೆಗೆ ಹೋಗುತ್ತದಂತೆ. ಊರು ಹೋಗುತ್ತದೆ ಊರು ಹೋಗುತ್ತದೆ ಅಂತ ಹೇಳ್ಕೊಂಡು ಹತ್ತು ಹದಿನೈದು ವರ್ಷವಾಯಿತು ಈಗ ಮೂರ್ನಾಕು ದಿವಸದಿಂದ `ಪಠಪಾರಿಕೊಂಡು ಇದ್ದೀರಿ. ರಾತ್ರೀಂತ ಇಲ್ಲಾ ಹಗಲೂಂತ ಇಲ್ಲಾ... ಕನಸಿನಲ್ಲೂ ಅದೇ ಹೇಳ್ತಾ ಇದ್ದೀರಿ. ಈಗ ನನ್ಗೇ ಕೇಳ್ತಾ ಇದ್ದೀರಲ್ಲಾ ಊರು ಎಲ್ಲಿಗೆ ಹೋಗುತ್ತೇಂತ. ಅದೆಲ್ಲಿಗೆ ಅದರಪ್ಪನ ಮನೆಗೆ ಹೋಗುತ್ತದಾ? ಈ ಊರಿನ ದೊಡ್ಡ ದೊಡ್ಡ ಮುಂಡಾಸಿನವರಿಗೆ ಒಂದು ಭ್ರಾಂತಿ.... ನೀಲಮ್ಮ ದೊಡ್ಡ ಲೋಟೆಯಲ್ಲಿ ಚಹಾವನ್ನು ಸುರ್ರೆಂದು ಸುರಿದು ದೇವಪ್ಪನ ಎದುರು ಕುಕ್ಕಿದಳು.
ಅಲ್ಲ ನೀಲ ಇನ್ನು ಮೂರು ತಿಂಗಳೊಳಗೆ ನಾವೆಲ್ಲಾ ಗಾಡಿ ಕಟ್ಟಬೇಕಂತೆ. ನಿನ್ನೆ ಪೇಟೆಯ ಶಾಲೆಯಲ್ಲಿ ಪಂಚಾತಿಕೆ ನಡೀತು. ಊರಿನವರೆಲ್ಲ ದುಡ್ಡು ತೆಗಿತಾ ಇದ್ದಾರಂತೆ ಯಾರಿಗೂ ಊರು ಬೇಡ ಅಂತೆ. ಊರೆಲ್ಲಾ ಸಮತಟ್ಟು ಆಗುತ್ತದಂತೆ. ಯಾರಿಗೂ ಬೇಡ ಆದ್ರೇನು ಆ ಗುಡ್ಡದವ್ನು ಬಿಡ್ತಾನಾ. ರಾಣಿ ಕಾಲದಲ್ಲಿ ಬರಗಾಲ ಬಂದು ಊರಿನವರೆಲ್ಲಾ ಊರು ಬಿಟ್ಟು ಹೋಗೋ ಮೊದ್ಲು ಅವ್ನ ಎದುರು ನಿಂತು ಕೈಮುಗ್ದು ಕಣ್ಣೀರು ಹಾಕಿದಾಗ ಅವ್ನು ತನ್ನ ಖಡ್ಗ ಊರಿ ಕೆರೆ ಮಾಡಿ ಜನರಿಗೆ ನೀರು ಕುಡಿಸಲಿಲ್ವಾ. ಅದೇಗೆ ಆ ಗುಡ್ಡದವ್ನು ಹೋಗುತ್ತಾನೆ. ಅದೇಗೆ ತಾನು ಊರಿದ ಊರನ್ನು ಸಮತಟ್ಟು ಮಾಡ್ಲಿಕ್ಕೆ ಬಿಟ್ಟಾನು? ಊರು ಹೋಗ್ಲಿ ನಾವೆಲ್ಲಾದ್ರೂ ಹೋಗೋಣ ಅಂತ ಮಾತಾಡ್ತಿಯಲ್ಲಿ ನಿಂಗೊಂಚೂರಾದ್ರು ಬುದ್ದಿ ಉಂಟಾ ಮಾರಾಯ್ತಿ. ದೇವ್ರಿಲ್ಲದ ಊರುಂಟು ಗಡಂಗಿಲ್ಲದ ಊರುಂಟಾ ನಿನ್ನ ಕರ್ಮ? ದೇವಪ್ಪ ಮೀಸೆಯಡಿಯಲ್ಲಿ ನಗುತ್ತಾ ದೋಸೆ ಚೂರು ಸಾರಲ್ಲಿ ಅದ್ದಿ ಬಾಯಿಗಿಟ್ಟ.
ನನ್ನ ಕರ್ಮವಂತೆ ನನ್ನ ಕರ್ಮ. ಈ ಜನ್ರು ಮಾಡೋ ಕರ್ಮಕ್ಕೆ ನಾಲ್ಕು ಕೈಯ ನಾರಾಯಣ ದೇವ್ರೂ ಹೆದರಿ ಓಡಿ ಹೋಗ್ಯಾನು. ಇನ್ನು ಭೂತವಂತೆ, ದೈವವಂತೆ. ಈ ನರ ಭೂತದೆದುರು ನಿಮ್ಮ ಗುಡ್ಡದವ್ನೂ ಇಲ್ಲ, ಬೈಲಿನವ್ನೂ ಇಲ್ಲ ನೀಲ ಸಿಡುಕಿದಳು.
ಹಾಗಾದ್ರೆ ಊರು ಸಮತಟ್ಟು ಆಗುತ್ತಾ? ಗುಡ್ಡದವ್ನು ಕಾರ್ನಿಕ ತೋರ್ಸಿ ಮಾಡಿದ ಕೆರೆ ಮಣ್ಣನಡಿಗೆ ಬೀಳುತ್ತಾ...? ದೇವಪ್ಪನ ಮುಖದಲ್ಲಿ ತುಸು ಭೀತಿ ಇಣುಕಿತು.
ನೀಲ ಪಕ ಪಕನೆ ನಕ್ಕಳು. `ಯಾರು ಹೇಳಿದ್ರಿ ನಿಮ್ಗೆ ಆ ಗುಡ್ಡದವ್ನು ಖಡ್ಗ ಊರಿ ಕೆರೆ ನಿರ್ಮಿಸಿದ್ದು ಅಂತ... ಹಾಗಲ್ಲರೀ ಅದು. ಊರಿನವರೆಲ್ಲಾ ಸೇರಿ ಉಪಯೋಗಿಸೊ ಕೆರೆಗೆ ಊರುಕರೆ ಅಂತ ಹೆಸ್ರು ಬಂತು. ದೇವಸ್ಥಾನದ ಭಟ್ರಿಗೆ ಏನಾದರೊಂದು ಬೇಕಲ್ಲ. ಅದಕ್ಕೆ ಖಡ್ಗ ಊರಿದ್ದು, ಕತ್ತೀಲಿ ಕಡ್ದದ್ದು ಅಂತ ಹರಿಕತೆ ಮಾಡ್ತಾರೆ. ಅದನ್ನು ನೀವು ನಂಬ್ತೀರಿ. ಅಲ್ಲಾ... ಒನಕೆಯಂತೆ ಮಳೆ ಭೂಮಿಗೆ ಬಡಿಯೋ ಊರಿನಲ್ಲಿ ಬರಗಾಲ ಅಂತ ಬರೂದುಂಟಾ... ಬಂದದ್ದುಂಟಾ... ಬಂಗಾರದ ಬೆಳೆ ಬೆಳೆಯುವ ಪರಶುರಾಮ ಸೃಷ್ಟಿಗೆ ಬರ ಬರುದಿಲ್ಲಾಂತ ಆಟದಲ್ಲಿ ಹೇಳಿದ್ದು ಕೇಳಿಲ್ವಾ...?
`ಆಹಾಹಾ... ನಿನ್ನ ಬುದ್ದಿಯೇ ಊರೆಲ್ಲಾ ಸೇರಿ ಹೇಳಿದ್ರೂ ನೀನು ಮಾತ್ರ ಏನೇನೋ ತಲೆ ಕೆಟ್ಟವಳಂತೆ ಮಾತಾಡ್ತಿಯಲ್ಲ. ಭೂತದೆದುರು ಏನು ನಿನ್ನ ಅಡ್ಡ ಸವಾಲು. ಅದಕ್ಕೆ ಹೇಳೋದು ಈ ಹೆಂಗಸರ ಬುದ್ದಿ ಮೊಣಕಾಲ ಕೆಳಗೆ ಅಂತಾ ದೇವಪ್ಪ ಧ್ವನಿ ಎತ್ತರಿಸಿದ.
ಹೌದು.. ಹೌದು... ನಿಮ್ಮ ಗಂಡಸರ ಬುದ್ದಿ ಯಾವಾಗ್ಲೂ ನೆತ್ತಿಯಲ್ಲಿ. ಅದ್ಕೆ ನೀವು ನೆತ್ತಿಯವರೆಗೂ ತೊಟ್ಟೆ ಸುರಿದುಕೊಳ್ಳೋದು... ನೀವು ನಿಮ್ಮ ತೊಟ್ಟೆ ಖಚರ್ಿಗೆ ಮತ್ತೆ ಸಂಜೆ ಎರಡು ಮೀನಿನ ಬಾಲಕ್ಕೆ ದುಡಿಯೋದು ಬಿಟ್ರೆ ಮತ್ತೇನು ಮನೆಗೆ ತಂದು ಹಾಕಿದ್ದೀರಿ? ನಾನು ನಟ್ಟಿ-ಕೈ ಅಂತ ಹೇಳ್ಕೊಂಡು ಅಕ್ಕಿ ತಂದು ಹಾಕೋದ್ರಿಂದ ಪುಟ್ಟ ಮಕ್ಕಳ ಹೊಟ್ಟೆಗೆ ಏನಾದ್ರೂ ದಕ್ಕುತ್ತದೆ. ಹೆಂಗಸರ ಬುದ್ದಿಯಂತೆ... ಹೆಂಗಸರ ಬುದ್ದಿ... ನೀಲ ಮತ್ತಷ್ಟು ಧ್ವನಿ ಎತ್ತರಿಸಿದಳು.
ದೇವಪ್ಪ ತಣ್ಣಗಾದ.
ಗುಡ್ಡದವ್ನು ನಮಗೇನು ಕಮ್ಮಿ ಮಾಡಿದ್ದಾನೆ ನೀಲ. ನೀನು ದುಡೀತಿಯಾ... ಇಲ್ಲಾಂತ ನಾನು ಹೇಳಿದ್ನಾ... ದುಡಿದು ದುಡಿದು ಅಕ್ಕಿ ಮುಡಿ ನನ್ನಲ್ಲೇ ಕಟ್ಟಿಸಿ ಅಟ್ಟಕ್ಕೆ ಹಾಕಿಸ್ತಿಯಾ. ನಮಗೆ ಅನ್ನಕ್ಕೆ ಎಂದಾದ್ರೂ ಬರ ಬಂದದ್ದುಂಟಾ? ಶಿವಣ್ಣರನ್ನು ನೋಡು ಹಲವಾರು ಮುಡಿ ಗದ್ದೆ ಇದ್ರೂ. ಆಟಿ ಅಖೇರಿಯ ಜಡಿ ಮಳೆಗೆ ಅಕ್ಕಿ ಇಲ್ಲ ನೀಲಾ ಒಂದು ಮುಡಿ ಕೊಡು. ಬೇಸಾಯ ಮುಗಿದ ನಂತ್ರ ಕೊಡ್ತೇನೆ ಅಂತ ನಿನ್ನೆದುರು ಹೇಳಿಲ್ವಾ? ನಾವು ಯಾರತ್ರಾದ್ರೂ ಹಾಗೆ ಕೇಳಿದ್ದುಂಟಾ? ಅವ್ರು ಹೇಳಿದಾಕ್ಷಣ ನೀನು ಅಕ್ಕಿ ಮುಡಿ ಹೊರಳಿಸಿ ಕೊಟ್ಟಿಲ್ವಾ. ಸುಮ್ಮನೆ ಅದಿಲ್ಲಾ... ಇದಿಲ್ಲಾ ಅಂತ ಯಾಕೆ ಹೇಳ್ತಿ. ನನ್ಗೇನು ಆ ತೊಟ್ಟೆ ಸಹವಾಸ ಹಾಳಾದ್ದು ಅಂಟಿ ಬಿಡ್ತು... ಸಂಜೆಗೆ ಒಂದೆರಡು ಇಲ್ಲಾಂದ್ರೆ ಆಗೋದೇ ಇಲ್ಲ.
ದೇವಪ್ಪನ ದೈನ್ಯ ಧ್ವನಿ ನೀಲಮ್ಮ ಮನಸ್ಸನ್ನು ಕರಗಿಸಿಬಿಟ್ಟಿತು.
ಚೇ... ಕುಶಾಲಿಗೆ ಹೇಳಿದೆ ಕಣ್ರೀ. ಮತ್ತೆ ನಿಮ್ಮ ಮೇಲೆ ನನ್ಗೆ ಎಲ್ಲಾದ್ರೂ ಕೋಪಾಂತ ಆದದ್ದುಂಟಾ? ನಿನ್ನೆ ನಡುರಾತ್ರಿಯಿಂದ ಊರು ಹೋಗುತ್ತೆ... ಊರು ಹೋಗುತ್ತೆ ಅಂತ ನಿಮ್ಮ `ಪಠಪಾರಿ ಕೇಳಿ ಕೇಳಿ ಸಾಕಾಗಿ ಬಿಟ್ಟಿತು. ಈ ಊರು, ಈ ಬೇಸಾಯ ಯಾರಿಗೆ ಬೇಕು? ನಾವೆಲ್ಲಾ ಚಿಕ್ಕದಿರುವಾಗ ಶಿವಣ್ಣನ ಅಪ್ಪ ದೂಮಣ್ಣ ಈ ಊರಿಗೆಲ್ಲಾ ಯಜಮಾನರು. ಅವರ ಗತ್ತೇನು. ದೌಲತ್ತೇನು. ಅವ್ರು ಕೊಡೋ ನ್ಯಾಯ. ಹೇಳೋ ನೀತಿ ಎಲ್ಲಕ್ಕೂ ಒಂದು ಕ್ರಮಾಂತ ಇತ್ತು. ಈಗ ಅದೇ ಭೂಮಿ. ಅದೇ ಬೆಳೆ ನ್ಯಾಯ ನೀತಿ ಒಂದೂ ಇಲ್ಲ. ಪಾಪ ಶಿವಣ್ಣನ ಪಾಡೇನು? ಗದ್ದೆ ಕೆಲಸಕ್ಕೆ ಜನ ಇಲ್ಲ. ಮನೆಯವ್ರು ಎಲ್ಲಾ ಇವ್ರ ತಲೆಗೆ ಕಟ್ಟಿ ಬೊಂಬಾಯಿ, ಕೊಯ್ಟಾ ಅಂತ ಹೋಗಿ ಅವರವ್ರ ಪಾಡು ನೋಡಿಕೊಂಡು ನಾಲ್ಕು ಕಾಸು ಮಾಡ್ಕೊಂಡು ಬಿಟ್ಟಿದ್ದಾರೆ. ಮಗಳು ದೂರದ ಕುಡ್ಲದಲ್ಲಿ ಮಾವನ ಮನೆಯಲ್ಲಿ ಶಾಲೆ ಕಲೀತಿದ್ದಾಳೆ. ಗದ್ದೆಯಲ್ಲಿ ಬೆಳೆದದ್ದೆಲ್ಲಾ ಕೆಲಸದವರಿಗೆ ಅಳೆದು ಕೊಡುದಕ್ಕಾಯಿತು. ಕೆಲಸದವರ ಮನೆಯಲ್ಲಾದರೂ ಮಳೆಗಾಲದ ಅಖೇರಿಗೆ ಅಕ್ಕಿ ಉಂಟು ಈ ಭೂಮಿ ಇದ್ದವರ ಮನೆಯ ಕೋಳಿ ಮರಿಗೆ ನಿಂಗಲ್ಗೂ ಗತಿ ಇಲ್ಲದ ಪರಿಸ್ಥಿತಿ. ಈ ಊರು ಯಾರಿಗೆ ಬೇಕು?
ಹೌದು ನೀಲಾ ಊರು ಹೋದ್ರೆ ನಾವೆಲ್ಲಿಗೆ ಹೋಗೋದು. ನಮಗೆ ಯಾರು ದಿಕ್ಕು. ಆವಾಗ ಮೂರು ಕೋಲು ಊರಿಕೊಂಡು ದುರ್ಬೀನು ನೋಡುತ್ತಾ ತೆಂಗು-ಕಂಗು ಅಂತ ಲೆಕ್ಕ ತೆಗೆಯೋರು ಬಂದಾಗ ಊರಿನವರೆಲ್ಲಾ ಅರ್ಜಿಕೊಡು ದ್ಯಾಪ... ಅರ್ಜಿ ಕೊಡು ದ್ಯಾಪ ಅಂತ ಅಂದ್ರೆ ನಾನೇನೂ ಕೊಡಲೇ ಇಲ್ಲ. ಅರ್ಜಿ ಕೊಟ್ಟವರಿಗೆಲ್ಲಾ ಈಗ ಎಲ್ಲೋ ಗುಡ್ಡೆಯಲ್ಲಿ ಜಾಗ. ಹಣ ಎಲ್ಲಾ ಸಿಗುತ್ತಂತೆ. ನಾವೇನು ಮಾಡೋಣ....? ದೇವಪ್ಪ ನುಡಿದ.
ಹೌದು ನಿಮಗೆ ಪಾಪ ಪುಣ್ಯ ಜಾಸ್ತಿ ಆಯ್ತು. ರೇಶನ್ ಕಾಡರ್ು ನಂಬ್ರ ಬರೆದು ಖಾಲಿ ಕಾಗದಕ್ಕೆ ಶಿವಣ್ಣ ಹೆಬ್ಬೆಟ್ಟು ಒತ್ತಿಸಿ ಕೊಂಡೋಗಿದ್ದಾರಲ್ಲಾ ಅವ್ರಲ್ಲಿ ಕೇಳಿದ್ರೆ ನಮಗೂ ಜಾಗ, ಹಣ ಅಂತಾ ಸಿಕ್ಕೀತು... ಪಾಪ ಶಿವಣ್ಣ ಇಲ್ಲಾಂತ ಅನ್ಲಿಕ್ಕಿಲ್ಲ. ಆದರೆ ಅದೆಲ್ಲಾ ನಮಗೆ ಯಾಕೆ ಬೇಕು? ಇದೇನು ನಮ್ಮ ಅಪ್ಪನ, ಅಜ್ಜನ ಜಾಗವಾ? ಮನೆಯಾ? ನನ್ನ ರೆಟ್ಟೆ ಗಟ್ಟಿ ಇದ್ರೆ ಎಲ್ಲಾದರು ದುಡಿದು ಮಕ್ಕಳ ಹೊಟ್ಟೆ ತುಂಬಿಸಿಯೇನು? ಮಕ್ಕಳು ದೊಡ್ಡೋರಾದ್ರೆ ಮತ್ತೆ ನಮಗೇನು ಕಡಿಮೆ. ಈ ಲೋಕದಲ್ಲಿ ಎಲ್ಲಾದ್ರೂ ನಮಗೆ ಜಾಗ ಸಿಕ್ಕೀತು... ನೀಲಮ್ಮ ತಟ್ಟಿ ಕುಡ್ಪಿಗೆ ಮತ್ತೆರಡು ದೋಸೆ ಹಾಕಿದಳು.
ಹೌದು ಕಣೇ ನೀಲ ಯಾರ್ಯಾರದು ನಮಗ್ಯಾಕೆ? ಆದ್ರೂ ಶಿವಣ್ಣನಲ್ಲಿ ಒಂದು ಮಾತು ಕೇಳಿ ಬಿಡುವ. ಮತ್ತೆ ಗುಡ್ಡದವ್ನು ಇಟ್ಟ ಹಾಗೆ ಆಗುತ್ತದೆ... ದೇವಪ್ಪ ದೋಸೆ ತಿಂದು ಚಹಾ ಹೀರಿ ಎದ್ದು ಬಿಟ್ಟ.
ಮನೆ ಕೆಲಸ ಮುಗಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ ನೀಲಮ್ಮ ಶಿವಣ್ಣನ ಮನೆ ಅಂಗಳಕ್ಕೆ ಇಳಿದಳು. ಕೋಣಗಳಡಿಗೆ ಹಾಕಲು ತರಗೆಲೆ - ಸೊಪ್ಪು ತರಲು ಉಂಟು ನೀಲಾ ಬೆಳಿಗ್ಗೆ ಬಂದುಬಿಡು ಅಂತ ಶೀಲಕ್ಕ ಹೇಳಿದ್ದರಿಂದ ನೀಲ ನೇರವಾಗಿ ಹಟ್ಟಿಗೆ ನುಗ್ಗಿ ಕುಕರ್ಿಲ್ನೊಳಗೆ ಹಿಡಿಸೂಡಿ ಹಾಕಿ ಬೆನ್ನಿಗೇರಿಸಿಕೊಂಡು ಮನೆ ಬಾಗಿಲಿಗೆ ನಡೆದು ಶೀಲಕ್ಕೋರೇ ಕತ್ತಿ ಕೊಡಿ ಗುಡ್ಡೆಗೋಗುತ್ತೀನಿ ಅಂತಂದಳು.
ಮನೆಯೊಳಗಿಂದ ಹೊಸ ಮುಖವೊಂದು ಹೊರಬಂದು ಓ ನೀಲುವಾ ಹೇಗಿದ್ದಿಯಾ? ಅಂತ ಕೇಳಿತು. ಅಯ್ಯಾ... ನಳಿನಕ್ಕ ಯಾವಾಗ ಬಂದ್ರಿ... ನೀಲಮ್ಮ ಸಂಭ್ರಮದಿಂದ ಉದ್ಘರಿಸಿದಳು.. ನಳಿನಕ್ಕನನ್ನು ಅನುಸರಿಸಿ ಗಂಡಸೊಂದು ಮನೆಯಿಂದ ಹೊರಬಂತು. ಯಾರಕ್ಕಾ ಇದು ಅಂತ ಕೇಳಿತು. ಇದು ನಮ್ಮ ಒಕ್ಕೆಲಿನ ತನಿಯನ ಮಗಳು. ನೀಲು ಅಲ್ವಾ? ತನಿಯನ ಅಳಿಯ ದೇವಪ್ಪನಿಗೇ ಇವಳನ್ನು ಕೊಟ್ಟು ಮದ್ವೆ ಮಾಡಿದ್ದಲ್ವಾ. ಗುರ್ತು ಸಿಗ್ಲಿಲ್ವಾ...? ಅಂದರು. ನಳಿನಕ್ಕ. ಓ... ಹೋ. ನೀನಾ ಮಾರಾಯ್ತಿ. ದ್ಯಾಪ ಹೇಗಿದ್ದಾನೆ ಅಂದಿತು ಆ ಗಂಡಸು. ಓ ಇದು ಶಿವಣ್ಣನ ಅಣ್ಣ ಗೋವಿಂದ ಅಂತ ನೀಲಮ್ಮ ಗುರುತು ಹಚ್ಚಿದಳು. ಅಷ್ಟೊತ್ತಿಗೆ ಶೀಲಕ್ಕ ಕತ್ತಿ ಹಿಡಿದುಕೊಂಡು ಹೊರಬಂದರು. ಇಕಾ ಕತ್ತಿ ತೆಕೋ. ಹನ್ನೊಂದು ಗಂಟೆಗೆ ಚಾ ಹಿಡ್ಕೊಂಡು ಬರ್ತೇನೆ... ಶೀಲಕ್ಕನ ಧ್ವನಿ ಏಕೋ ಕುಂದಿದಂತಿತ್ತು. ನೀಲಮ್ಮ ಶೀಲಕ್ಕನ ಮುಖ ದಿಟ್ಟಿಸಿದಳು. ಏನೋ ವೇದನೆ... ನಿದ್ದೆ ಗೆಟ್ಟ ಮುಖ... ಆಯ್ತಕ್ಕಾ ಅನ್ನುತ್ತಾ ನೀಲಮ್ಮ ಗುಡ್ಡದ ಹಾದಿ ಹಿಡಿದರೂ. ಆಕೆಯ ಮನಸ್ಸು ನಳಿನಕ್ಕನ ದರ್ಪದ ಧ್ವನಿಯನ್ನು ಮೆಲುಕು ಹಾಕುತಿತ್ತು. ಇಷ್ಟರವರೆಗೆ ಶೀಲಕ್ಕ ನಮ್ಮನ್ನು ಒಕ್ಕೆಲಿನವರು ಎಂದು ಹೇಳಿದ್ದಿಲ್ಲ ನಳಿನಕ್ಕ ಒಕ್ಕೆಲನ್ನೂ ಇನ್ನೂ ಬಿಟ್ಟಿಲ್ವಾ ಅಂತ ಅನ್ನಿಸಿತು.
ಯೋಚಿಸುತ್ತಲೇ ಗುಡ್ಡಕ್ಕೆ ಹೋದ ನೀಲಮ್ಮ ಗೋಳಿಮರದ ಬುಡದ ತರಗೆಲೆಗಳನ್ನು ಬರಬರನೆ ಗುಡಿಸುತ್ತಾ ರಾಶಿ ಹಾಕತೊಡಗಿದಳು.
ನೀಲಮ್ಮಾ ಚಾ ಕುಡಿ ಬಾ ಅನ್ನುವ ಸ್ವರ ಕೇಳಿದ ಕೂಡಲೇ ಹೋ ಆಗ್ಲೇ ಹನ್ನೊಂದು ಗಂಟೆ ಆಗೋಯ್ತಾ ಅಂತ ಅಂದುಕೊಂಡಳು.
ಬಾಳೆ ಎಲೆಗೆ ಇಡ್ಲಿಯ ಹೋಳುಗಳನ್ನು ಹಾಕಿ ತೆಂಗಿನಕಾಯಿ ಚಟ್ನಿಯನ್ನು ಸುರಿದು ಎತ್ತಿ ನೀಲಮ್ಮನ ಕೈಗಿತ್ತು, ದೊಡ್ಡ ಲೋಟೆಯಲ್ಲಿ ಚಹಾವನ್ನೂ ಮುಂದಿಟ್ಟಳು ಶೀಲ. `ಇಷ್ಟೊಂದು ಇಡ್ಲಿಯಾ? ಇದನ್ನು ತಿಂದರೆ ಮಧ್ಯಾಹ್ನದ ಊಟ ಹೇಗೆ ಮಾಡೋದು ಎಂದು ಅಂದುಕೊಳ್ಳುತ್ತಾ, ಶೀಲನ ಕೈ ಬೆರಳುಗಳನ್ನೇ ನೋಡುತ್ತಾ `ಶೀಲಕ್ಕನ ಕೈ ಅಂದರೆ ಕೈಯೇ. ತಾನು ಮಾಡುವ ಕೆಲಸದ ಗಳಿಗೆ ಗಳಿಗೆಗಳನ್ನು ಲೆಕ್ಕ ಹಿಡಿದು ಒಂದು ಹಿಡಿ ಅಕ್ಕಿಯೂ ಬಾಕಿ ಮಾಡದೆ ಅಳೆದು ಕೊಡುವ ಶೀಲಕ್ಕನ ಕೈ ಹೊಟ್ಟೆಗೆ ಕಡಿಮೆ ಕೊಟ್ಟೀತೇ? ಎಂದು ಯೋಚಿಸಿದಳು ನೀಲಮ್ಮ.
ಪರವೂರಿನವರೆಲ್ಲಾ ಬಂದಿದ್ದಾರೆ ಏನೋ...? ನೀಲಮ್ಮ ಶೀಲಕ್ಕನ ಮುಖ ನೋಡುತ್ತಾ ನುಡಿದಳು. ಇದ್ದಕ್ಕಿದ್ದಂತೆ ಶೀಲನ ಕಣ್ಣುಗಳಲ್ಲಿ ಬಳಬಳನೆ ನೀರು ಸುರಿಯಲಾರಂಭಿಸಿತು. ನಮ್ಮ ಜಾಗ ಎಲ್ಲಾ ಹೋಗುತ್ತದಲ್ಲಾ. ಹಾಗೆ ಇವತ್ತು ಪಂಚಾತಿಕೆ. ಅವರ ಅಕ್ಕ. ಅಣ್ಣಂದಿರು, ತಂಗಿ ಎಲ್ಲಾ ಬಂದಿದ್ದಾರೆ. ನಮಗೆ ಪರಿಹಾರಾಂತ ಸಿಗುತ್ತಲ್ಲಾ ಅದರನ್ನು ಪಾಲು ಮಾಡ್ಲಿಕ್ಕೆ ಅವರೆಲ್ಲಾ ಬಂದಿದ್ದಾರೆ.... ಶೀಲಕ್ಕನ ದುಃಖ ಕಂಡ ನೀಲಮ್ಮನಿಗೆ ಇಡ್ಲಿ ರುಚಿಯಾಗಲೇ ಇಲ್ಲ. ಮೆಲ್ಲಗೆ ಎಲೆ ಮಡಚಿ ಬದಿಗಿಟ್ಟಳು. ಈಗ ಹಸಿವಿಲ್ಲ ಮತ್ತೆ ತಿನ್ನುತ್ತೇನಕ್ಕಾ ಅಂತಂದಳು. ಶೀಲ ಎದ್ದು. ಮಧ್ಯಾಹ್ನ ಊಟಕ್ಕೆ ಬಾ ಅನ್ನುತ್ತಾ ಮನೆಯ ಹಾದಿ ಹಿಡಿದಳು. ಹಿಂದೆಲ್ಲಾ ಚಿಗರೆ ಮರಿಯಂತೆ ಕಾಲು ಹಾಕುತ್ತಿದ್ದ ಶೀಲ ಇಂದೇಕೋ ಸೋತ ಕಾಲುಗಳನ್ನು ಊರಿದಂತೆ ಅನಿಸಿತು. ನೀಲ ಹಾಗೇ ನಿಂತ ನೋಡಿದಳು. ಅವಳ ಕಣ್ಣುಗಳು ಮಂಜಾದವು.
ಹೊತ್ತು ನೆತ್ತಿಗೇರುತ್ತಿದ್ದಂತೆ ರಾಶಿ ಮಾಡಿದ ತರಗೆಲೆಗಳನ್ನು ಕುಕರ್ಿಲ್ಗೆ ತುಂಬಿಸಿ ಹಟ್ಟಿ ಹಿಂಬದಿಯ ಅಂಗಳಕ್ಕೆ ತಂದು ಹಾಕತೊಡಗಿದಳು ನೀಲಮ್ಮ. ಹಾಗೇ ಮನೆಯ ಕಡೆ ಕಣ್ಣು ತಿರುಗಿಸಿ ಕಿವಿಯಾನಿಸಿದಳು. ಮನೆಯಳಗಿಂದ ಅದೇನೋ ಮಾತುಗಳು ಕೇಳಿಬರುತ್ತಿದ್ದವು. ಮತ್ತೆರಡು ಬಾರಿ ತರಗೆಲೆ ತಂದು ಹಾಕುತ್ತಿದ್ದಂತೆ ಮನೆಯೊಳಗೆ ಬಿಸಿ ಬಿಸಿ ವಾಗ್ಯುದ್ಧವಾಗತೊಡಗಿತ್ತು. ಕೊನೆಯದಾಗಿ ತುಂಬಿದ ಕುಕರ್ಿಲ್ ತಂದು ಹಾಕುತ್ತಿದ್ದಾಗ ಮನೆಯೊಳಗಿಂದ ದೇವಪ್ಪನ ಹೆಸರು ಕೇಳಿ ಬರತೊಡಗಿತು. ನೀಲಮ್ಮ ಹಾಗೇ ಹಟ್ಟಿಯೊಳಗಿನ `ಬೈಪನೆಯ ಕಂಬಕ್ಕೆ ಒರಗಿ ಕುಳಿತು ಮನೆಯಿಂದ ಕೇಳಿಬರುತ್ತಿದ್ದ ಮಾತುಗಳನ್ನುಆಲಿಸತೊಡಗಿದಳು.
ನನ್ನಪ್ಪ ದೂಮಣ್ಣನಿಗೆ ಐದು ಜನ ಮಕ್ಕಳು. ಆರನೇ ಮಗ ಇದ್ದ ಅಂತ ನಂಗೆ ಗೊತ್ತಿಲ್ಲ. ಆ ದ್ಯಾಪ ಏನು ನಮ್ಮ ತಂದೆಗೆ ಹುಟ್ಟಿದ್ದಾ...? ಅವನಿಗ್ಯಾಕೆ ಜಾಗ ಬಿಡಬೇಕು? ಅವನೇನು ಡಿಕ್ಲರೇಶನ್ ಕೊಟ್ಟಿದ್ದಾನಾ? ಒಂದು ರೇಶನ್ ಕಾಡರ್್ ಇದೆ ಅಂತ ಅರ್ಧ ಎಕ್ರೆ ಅವನಿಗೆ ಬಿಟ್ಟ ನಿನ್ನ ಮಂಡೆಯಲ್ಲಿ ಏನು ಸೆಗಣಿ ತುಂಬಿದೆಯಾ?. ಯಾರನ್ನು ಕೇಳಿ ಹೀಗೆ ಮಾಡಿದೆ. ನಾವೆಲ್ಲಾ ಸತ್ತು ಹೋಗಿದ್ದೇವಾಂತ ತಿಳ್ಕೊಂಡಿಯಾ?....
ನೀಲಮ್ಮ ಕಲ್ಲಿನಂತೆ ಕುಳಿತು ಕೇಳತೊಡಗಿದಳು.
ಹಾಗಲ್ಲಣ್ಣ... ಅವ ನಮ್ಮಪ್ಪನ ಕಾಲದಿಂದ ಆ ಜಾಗದಲ್ಲಿ ಇದ್ದನಲ್ಲ. ಕರೆದಾಗ ಬಂದು ಬುಟ್ಟಿ ಚಾಕ್ರಿ ಮಾಡಿದನಲ್ಲ. ಸಂಬಳ ಇಷ್ಟು ಅಂತ ಹೇಳಲಿಲ್ಲ. ಕೊಟ್ಟದ್ದನ್ನು ತೆಗೆದುಕೊಂಡ. ಪಾಪ ಪುಣ್ಯ ನೋಡಿ ಡಿಕ್ಲರೇಶನ್ ಕೊಡಲಿಲ್ಲ. ಅವನನ್ನು ಹಾಗೇ ಬಿಡೋಕಾಗುತ್ತಾ. ಅವ ದೇಶಾಂತರ ಹೋಗುವ ಹಾಗೆ ಮಾಡೋದು ನ್ಯಾಯಾನಾ?. ಅವ ಇರುವ ಜಾಗ ಅವನಿಗೇ ಇರ್ಲಿ ಅಂತ ಪರಿಹಾರದಲ್ಲಿ ಅವನ ಹೆಸರು ಸೇರಿಸಿದ್ದೀನಿ ಒಂಚೂರು ಜಾಗ ಹೋದ್ರೆ ಏನು ಮಹಾ? ಏನಿಲ್ಲ ಒಂದು ನಾಕು ತೆಂಗಿನ ಗಿಡ ಅಷ್ಟೆ...
ಮುಚ್ಚಾ ಬಾಯಿ ಆವಾಗದಿಂದ ಅದನ್ನೇ ಹೇಳ್ತಾ ಇದ್ದಿಯಲ್ಲ. ಅವನೇನು ನಮ್ಮ ಸಂಬಂಧಿಕನಾ, ನಮ್ಮ ಬಂಧುವಾ ಹೋಗ್ಲಿ ನಮ್ಮ ಜಾತಿಯವ್ನಾ? ಒಂಚೂರು ಅಂತೆ ಒಂಚೂರು. ದುಡ್ಡೆಷ್ಟಾಯಿತು? ಲೆಕ್ಕ ಹಾಕು. ನಿನ್ನ ಪಾಲಿಗೆ ಬಂದದ್ದರಲ್ಲಿ ಅವನಿಗೆ ಏನು ಬೇಕೋ ಅದನ್ನು ಕೊಡು ನಮ್ಮ ಅಭ್ಯಂತರ ಇಲ್ಲ. ಇನ್ನು ತೋಟ. ಗದ್ದೆ, ಗುಡ್ಡ ಎಲ್ಲ ಸರಿಯಾಗಿ ಐದು ಪಾಲಾಗಬೇಕು. ನಳಿನಕ್ಕ ಅಬ್ಬರಿಸಿದರು.
`ಅದೇಗಾಗುತ್ತದೆ ನಳಿನಕ್ಕಾ? ನೀನು ಬೊಂಬಾಯಿಗೆ ಹೋಗುವಾಗ ಒಂದು ತುಂಡಾದ್ರೂ ತೋಟ ಅಂತ ಇತ್ತಾ. ನಾಲ್ಕು ಎಕ್ರೆ ತೋಟ ಮಾಡಿದ್ದು ನಾನು. ಬಾವಿ ಕೂಡಾ ನಾನೇ ತೋಡಿಸಿದ್ದು. ಎಷ್ಟು ಕಷ್ಟ ಪಟ್ಟಿದ್ದೀನಿ ಗೊತ್ತಾ? ತೋಟದ ಪರಿಹಾರದಲ್ಲಿ ಯಾರಿಗೂ ಪಾಲಿಲ್ಲ ಉಳಿದ ಗುಡ್ಡ, ಗದ್ದೆಯಲ್ಲಿ ನೀವು ಪಾಲು ತೆಗೆದುಕೊಳ್ಳಿ. ತೋಟವೊಂದು ನನಗೆ ಬಿಡಿ ಶಿವಣ್ಣನ ಕಳಕಳಿಯ ಧ್ವನಿ ಕೇಳಿ ನೀಲಮ್ಮ ಕರುಳು ಚುರುಕ್ಕೆಂದಿತು.
ನೋಡು ಶಿವ ನೀನು ಯಾರ ಜಾಗದಲ್ಲಿ ಯಾರನ್ನು ಕೇಳಿ ತೋಟ ಮಾಡಿದಿ? ಅದರ ಫಲದಲ್ಲಿ ನಮಗೇನಾದರೂ ಪಾಲು ಕೊಟ್ಟಿದ್ಯಾ? ನೀನೇ ಇಷ್ಟರವರೆಗೆ ತಿಂದದ್ದಲ್ವಾ. ಅಲ್ಲಿಗೆ ಸರಿಯಾಯ್ತು. ಈಗ ಎಲ್ಲವನ್ನೂ ಸರಿಯಾಗಿ ಐದು ಪಾಲು ಮಾಡಿಬಿಡುವಾ. ಏನು ಸುಮಿತ್ರಾ ಏನು ಹೇಳುತ್ತಿ? ಅಂದರು ಗೋವಿಂದಣ್ಣ.
ಹೌದಣ್ಣಾ ಹಾಗೇ ಆಗ್ಲಿ ಅವ್ರೂ ಹಾಗೇ ಹೇಳಿದ್ದಾರೆ ಅಂದಳು ಶಿವಣ್ಣನ ಚಿಕ್ಕ ತಂಗಿ ಸುಮಿತ್ರ.
ಏನು ಸುಮಿತ್ರಾ ಹಾಗಂತಿಯಾ? ಅಪ್ಪ ತೀರಿಹೋದ ಬಳಿಕ ನಿನ್ನ ಮದುವೆ ಆದದ್ದು ನೆನಪಿದ್ಯಾ ನಿನಗೆ. ವರದಕ್ಷಿಣೆ, ಬಂಗಾರ ಎಲ್ಲಾ ನಾನೇ ತಂದು ಹಾಕಿದ್ದು. ಈ ನಿನ್ನ ಅಣ್ಣ ಅಕ್ಕಂದಿರು ಬೊಂಬಾಯಿ, ಕೊಯ್ಟಾದಿಂದ ತಿರುಗಿ ಕೂಡಾ ನೋಡಿಲ್ಲ. ಈಗ ಜಾಗ ಹೋಗುತ್ತದೆ, ದುಡ್ಡು ಸಿಗುತ್ತದೆ ಅಂತ ಎಲ್ಲಾ ಓಡಿ ಬಂದಿದ್ದಾರೆ. ಈ ಗೋವಿಂದಣ್ಣ ಊರು ಬಿಟ್ಟು ಹೋದವ ಒಮ್ಮೆಯಾದರೂ ಊರಿಗೆ ಬಂದಿದ್ದಾನಾ ಕೇಳು? ನಿನ್ನ ಮದುವೆಗೆ ಸೊಸೈಟಿಯಿಂದ ತೆಗೆದ ಸಾಲ ತೀರಿದ್ದು ಕಳೆದ ವರ್ಷ. ನೀನೂ ಅವರೊಂದಿಗೆ ಸೇರಿ ಹಾಗೇ ಅಂತಿಯಾ? ಶಿವಣ್ಣನ ತಾಳ್ಮೆ ತಪ್ಪಿದ ಧ್ವನಿ ನೀಲಮ್ಮನ ಕಿವಿಗೆ ಅಪ್ಪಳಿಸಿತು.
ನಾನು ಬೇಡ ಅಂದ್ರೆ ಅವ್ರು ಕೇಳ್ಬೇಕಲ್ಲಾ. ಸರಿ ಪಾಲು ಆಗ್ಬೇಕು ಅಂತಾನೆ ಹೇಳಿದ್ದಾರೆ ಸುಮಿತ್ರ ತಣ್ಣಗೆ ನುಡಿದಳು.
ಮತ್ತೆ ಅದ್ರಲ್ಲಿ ಕೆಲಸ ಅಂತಾ ಸಿಗುತ್ತಲ್ಲಾ. ಕೆಲಸ ಯಾರಿಗೆ ಅಂತ ಸಿಗೋದು? ಅವ್ನಿಗೆ ಇವ್ನಿಗೆ ಅಂತಾ ಏನೂ ಬೇಡ ಅದಕ್ಕೆ ಏನು ಪರಿಹಾರ ಸಿಗುವುದೋ ಅದನ್ನು ಐದು ಪಾಲು ಮಾಡಿ ಬಿಡೋದ್ರಲ್ಲೇ ನ್ಯಾಯ ಇದೆ. ಏನು ಆಗದಾ? ಎಲ್ರೂ ಏನು ಹೇಳುತ್ತೀರಿ ಗೋವಿಂದಣ್ಣ ನುಡಿದರು.
ಹಾಗೇ ಆಗ್ಲಿ ಅಂತ ಸುಮಿತ್ರ, ನಳಿನಿ, ಚಿದಾನಂದ ನುಡಿದರು.
ದಯವಿಟ್ಟು ಆ ಕೆಲಸ ಒಂದನ್ನಾದರೂ ನನ್ನ ಮಗಳಿಗೆ ಸಿಗುವ ಹಾಗೆ ಮಾಡಿ ನಾನು ಈ ಊರಲ್ಲಿದ್ದು ಬೇಸಾಯ ಜಾಗ ನೋಡಿಕೊಂಡದ್ದಕ್ಕೆ ಅಷ್ಟಾದರೂ ಉಪಕಾರ ಮಾಡಿ ಶಿವಣ್ಣ ಗೋಗರೆದರು.
ನೀನು ಭೂಮಿ ನೋಡ್ಕೊಂಡು ಏನು ಉಪಕಾರ ಮಾಡಿದೆ? ದೊಡ್ಡ ದಾನಶೂರಕರ್ಣನಂತೆ ಒಕ್ಕಲಿನವರಿಗೆ ಪಾಲು ತೆಗೆಸಿಕೊಟ್ಟೆ. ನಿನ್ನಲ್ಲಿ ದುಡ್ಡು ಇದ್ರೆ ಎಲ್ಲಾ ಊರಿನವರ ಪಾಲಾಗುತ್ತದೆ. ಹಾಗೆ ನನಗೆ ಮಗಳಿಲ್ವಾ. ಗೋವಿಂದನಿಗಿಲ್ವಾ?.. ನಮ್ಮ ಹಿರಿಯರದು ಹಾಗೆಲ್ಲಾ ಒಬ್ಬೊಬ್ಬರ ಪಾಲಿಗೆ ಹೋಗಬಾರದು ಎಲ್ಲವೂ ಸರಿಯಾಗಿ ಪಾಲು ಆಗ್ಬೇಕು ನಳಿನಕ್ಕನ ದೊಡ್ಡ ಕಂಠ ನುಡಿಯಿತು.
ಅದು ಹೇಗೆ ಹಾಗೆ ಮಾಡ್ತೀರೋ ನೋಡೋಣ. ಮನೆ ನನ್ನ ಹೆಸ್ರಲ್ಲಿರೋದು. ರೇಶನ್ ಕಾಡರ್ು ನನ್ನದು. ಕೆಲಸ ನನ್ನ ಮಗಳಿಗೇ ಸಿಗೋದು. ಅದನ್ನು ಹ್ಯಾಗೆ ತಪ್ಪಿಸ್ತೀರಿ ಅಂತ ನಾನೂ ನೋಡ್ತೇನೆ ಶಿವಣ್ಣ ಕೆಂಡಾಮಂಡಲವಾಗಿ ಅಬ್ಬರಿಸಿದ ಧ್ವನಿ ನೀಲಮ್ಮನ ಕಿವಿಗೆ ಬಡಿಯಿತು.
ಮತ್ತೆ ವಾಗ್ಯುದ್ಧ ಆರಂಭವಾಯಿತು. ಎಲ್ಲರೂ ಏನೇನೋ ಮಾತಾಡತೊಡಗಿದರು. ಎಲ್ಲವೂ ಗೋಜಲು ಗೋಜಲು. ಇನ್ನೇನು ಕೈ-ಕೈ ಮಿಲಾಯಿಸುತ್ತದೆ ಅಂತ ಅನಿಸುತ್ತಿದ್ದಂತೆ ಏನೋ ಶಿವ ಭಾರೀ ಹಾರಾಡ್ತಿಯಾ. ಹಿರಿಯರ ಎದುರು ಹೇಗೆ ಮಾತಾಡ್ಬೇಕು ಅಂತ ಗೊತ್ತಿಲ್ಲಾ ನಿಂಗೆ. ದೇವರು ನಿನ್ನನ್ನು ನೋಡ್ಕೋತಾನೆ. ನೀನೇನಾದರೂ ಸರಿಯಾಗಿ ಪಾಲು ಮಾಡದೇ ಹೋದರೆ ಆ ಗುಡ್ಡದವ್ನ ಮೇಲೆ ಆಣೆ ಇದೆ.... ನಳಿನಕ್ಕನ ಗಟ್ಟಿ ಸ್ವರಕ್ಕೆ ಮನೆಯೊಳಗೆ ಕೆಲ ಕ್ಷಣ ನೀರವ ಮೌನ ಆವರಿಸಿಬಿಟ್ಟಿತು.
`ಗುಡ್ಡದವನ ಆಣೆಗೆ ಯಾರಾದರು ತಲೆ ಬಾಗದಿರುವುದುಂಟೇ ನೀಲಮ್ಮ ಮನದಲ್ಲೇ ಚಿಂತಿಸಿದಳು.
ಒಂದೆರಡು ನಿಮಿಷಗಳಲ್ಲೇ ಮನೆಯೊಳಗಿಂದ ಸದ್ದು ಕೇಳಿಸತೊಡಗಿತು. ಹಳೆ ಕಾಲದ ಕಲೆಂಬಿಯ ಬಾಗಿಲು ತರೆದಾಗ ಕಿರುಗುಟ್ಟುವ ಸದ್ದು. ದಭಾಲನೆ ಕಲೆಂಬಿಯ ಬಾಗಿಲನ್ನು ಹಾಕಿದ ಸದ್ದು...
`ತೆಗೊಳ್ಳಿ.. ಮನೆ... ಜಾಗ... ಎಲ್ಲದರ ದಾಖಲೆ ಪತ್ರ ಇದು. ನಿಮಗೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳಿ ನನಗೇನೂ ಬೇಡ. ನನಗೇನೂ ಬೇಡ. ಶಿವಣ್ಣ ಬಿಕ್ಕಳಿಸುತ್ತಿದ್ದರು. ಟಪ್ ಟಪ್ ಏನೋ ಎಸೆದ ಸದ್ದು ಬಹುಶಃ ದಾಖಲೆ ಪತ್ರಗಳನ್ನು ಗೋವಿಂದಣ್ಣನ ಮುಂದೆ ಎಸೆದಿರಬೇಕು... ಮರುನಿಮಿಷದಲ್ಲಿ ಶಿವಣ್ಣ ಉಟ್ಟ ಬಟ್ಟೆಯಲ್ಲಿ ಹೊರಬಂದದ್ದನನ್ನು ಕಂಡು ನೀಲು ಗಾಬರಿಯಿಂದ ಎದ್ದು ನಿಂತಳು. ಕೆಂಪು ಬೈರಾಸಿನಲ್ಲಿ ಕಣ್ಣು ಮುಖ ಒರಸುತ್ತಾ ಚಪ್ಪಲಿ ಮೆಟ್ಟಿ ಶಿವಣ್ಣ ನಡೆದೇ ಬಿಟ್ಟರು. ಈಗ ಮನೆಯೊಳಗಿಂದ ಶೀಲಕ್ಕನ ಬಿಕ್ಕಳಿಕೆಯ ಧ್ವನಿ ಮಾತ್ರ.
ನೀಲಮ್ಮನ ದುಡಿದ ಹೊಟ್ಟೆಯ ಹಸಿವು ಮಾಯವಾಗಿತ್ತು. ಆಕೆ ತನ್ನ ಮನೆಯ ಕಡೆ ನಡೆದುಬಿಟ್ಟಳು.
ಕತ್ತಲಾಗುತ್ತಿದ್ದಂತೆ ಮಕ್ಕಳನ್ನು ಉಣಿಸಿದ ನೀಲಮ್ಮ ಗಂಜಿ ಕುಡಿದು ದೇವಪ್ಪನ ದಾರಿ ಕಾಯತೊಡಗಿದಳು. ರಾತ್ರಿಯಾಗುತ್ತಿದ್ದಂತೆ ಅನ್ನ, ಪದಾರ್ಥ ಬಡಿಸಿ ಮುಚ್ಚಿಟ್ಟು, ಹೊರ ಜಗಲಿಯಲ್ಲಿ ಚಾಪೆ, ದಿಂಬು, ಹೊದಿಕೆ ಇಟ್ಟು, ಬಾಗಿಲು ಎಳೆದು ಮಲಗಿ ಬಿಡುತ್ತಿದ್ದ ನೀಲಮ್ಮ ಇಂದು ಮಾತ್ರ ದೇವಪ್ಪ ಬಂದ ನಂತರವೇ ಮಲಗುವ ನಿಧರ್ಾರ ಮಾಡಿದ್ದಳು. ಯಾವಾಗಲೂ ತೂರಾಡುತ್ತಾ ಊರಿಗೆಲ್ಲಾ ಕೇಳಿಸುವಂತೆ ಮಾತನಾಡುತ್ತಾ ಏನೇನೋ ಹಾಡುತ್ತಾ ಬರುತ್ತಿದ್ದ ದೇವಪ್ಪ ಅಂದು ಮಧ್ಯರಾತ್ರಿಯಾದರೂ ಬರಲೇ ಇಲ್ಲ. ಮಧ್ಯರಾತ್ರಿ ಕಳೆದಿರಬೇಕು. ಹೊರಜಗಲಿಯಲ್ಲಿ ಹೊದಿಕೆ ಕೊಡವಿದ ಸದ್ದು ಕೇಳಿ ನೀಲಮ್ಮ ಬಾಗಿಲು ತೆಗೆದು ಹೊರಬಂದಳು. ದೇವಪ್ಪ ಮಲಗಿ ಹೊದಿಕೆ ಎಳೆದುಕೊಳ್ಳುತ್ತಿದ್ದ. ತನ್ನ ಬರವನ್ನು ಊರಿಗೆ ಸಾರಿ ಹೇಳುತ್ತಿದ್ದ ದೇವಪ್ಪ ಅಂದು ನಿಶ್ಯಬ್ದವಾಗಿ ಬಂದು ಊಟ ಕೂಡಾ ಮಾಡದೆ ಮಲಗಿದ್ದ.
ಏನ್ರೀ... ಶಿವಣ್ಣ ಏನಾದ್ರೂ ಸಿಕ್ಕಿದ್ರಾ ನೀಲಮ್ಮ ದೇವಪ್ಪನ ಬಳಿಬಂದು ಕುಕ್ಕರುಗಾಲಿನಲ್ಲಿ ಕುಳಿತಳು.
ಆಯ್ತು ಕಣೇ ನೀಲಾ ಎಲ್ಲಾ ಆಯ್ತು... ಇಷ್ಟರವರೆಗೆ ನೀನು ನನ್ನನ್ನು ಕುಡ್ಕಾ... ಕುಡ್ಕಾ ಅನ್ನುತ್ತಿದ್ದಿ. ಇವತ್ತು ಶಿವಣ್ಣ ನನಗಿಂತ ಹೆಚ್ಚು ಕುಡ್ದು ಕಾಮ್ತರ ಅಂಗಡಿ ಮುಂದೆ ಬಿದ್ದು ಬಿಟ್ಟಿದ್ರು.. ಏಳೋಕೆ ಶಕ್ತಿ ಇಲ್ಲದ ಅವ್ರನ್ನು ಹೇಗಾದ್ರೂ ಮಾಡಿ ಮನೆಗೆ ಕರೆತರುವಾಂತ ಇದ್ರೆ ಮನೆಗೆ ಬರೋದಕ್ಕೆ ಸುತರಾಂ ಒಪ್ಲಿಲ್ಲ... ಅವ್ರನ್ನ ಕಾಮ್ತರ ಜಗಲಿ ಮೇಲೆ ಮಲಗಿಸಿ ಬಂದುಬಿಟ್ಟೆ.... ಈ ತೊಟ್ಟೆ ಸಹವಾಸ ನೀಲಾ... ಏನಕ್ಕೇನೋ ಮಾಡಿ ಬಿಡುತ್ತೆ... ಆವರೆಗೆ ಸುಮ್ಮನಿದ್ದ ದೇವಪ್ಪನ ಬಾಯಿಗೆ ಕೋಲು ಹಾಕಿದಂತಾಗಿತ್ತು... ಆತ ಊರೆಲ್ಲಾ ಕೇಳಿಸುವಂತೆ ಬೊಬ್ಬಿರಿಯತೊಡಗಿದ. `ಗುಡ್ಡದವ್ನ ಎದುರು ಎದೆ ಸಟೆಸಿ ನಿಂತು ಮಯರ್ಾದೆ ಸ್ವೀಕರಿಸುತ್ತಿದ್ದ ಶಿವಣ್ಣ ಇಂದು ಬಿದ್ದು ಬಿಟ್ಟರು ಕಣೇ ನೀಲಾ... ಕಾಮತರ ಅಂಗಡಿಯ ಎದುರು ನೆಲಕ್ಕೆ ಅಂಗಾತ ಬಿದ್ದು ಬಿಟ್ಟರು... ಮೇಲಿನ ಬೈಲಿನ ಕಂಬಳದ ಕರೆಯಲ್ಲಿ ಕೋಣ ಓಡಿಸುತ್ತಾ ಒಂದು ಬಾರಿಯೂ ಹಗ್ಗ ಬಿಟ್ಟು, ಹಲಗೆ ಜಾರಿ ಕೆಸರಿಗೆ ಬೀಳದ ಶಿವಣ್ಣ ಇಂದು ಏಳಲಾಗದಂತೆ ಬಿದ್ದು ಬಿಟ್ಟರು.. ನೀಲಾ... ಬಿದ್ದು ಬಿಟ್ಟರು...
ನೀಲಮ್ಮ ಕಣ್ಣೀರು ಸುರಿಸುತ್ತಾ ಒಳಸೇರಿದಳು.
ಮನೆಯಿಂದ ಇಳಿದು ಹೋದ ಶಿವಣ್ಣ ಮತ್ತೆ ಮನೆಗೆ ಕಾಲಿಡಲಿಲ್ಲ. ನಳಿನಕ್ಕ, ಸುಮಿತ್ರ, ಚಿದಾನಂದ ಅವರವರ ಸಂಬಂಧಿಕರ ಮನೆಗೆ ಹೋಗಿಬಿಟ್ಟರು. ಗೋವಿಂದಣ್ಣ ನಗರದ ಹೋಟೇಲಿನಲ್ಲಿ ಬಾಡಿಗೆ ಕೋಣೆ ಹಿಡಿದರು. ಶೀಲಲ ಚಿಕ್ಕ ತಮ್ಮ ಶಿವಣ್ಣನ ಮನೆಗೆ ಬಂದು ಇರತೊಡಗಿದ. ದೇವಪ್ಪ ಮಾತ್ರ ಶಿವಣ್ಣ ಹೋದಲೆಲ್ಲಾ ಹಿಂಬಾಲಿಸಿ ಹೋಗುತ್ತಿದ್ದ. ಹಗಳಿರುಳೂ ಶಿವಣ್ಣ ಅಮಲೇರಿ ತೂರಾಡುತ್ತಿದ್ದ. ಆತನ ಕಣ್ಣುಗಳು ಹಳದಿಬಣ್ಣಕ್ಕೆ ತಿರುಗಿದವು. ಉಗುರ ತುದಿಗಳು ಅರಶಿನ ಕೊಂಬುಗಳಂತಾದವು. ಆತನ ದೇಹಕ್ಕೆ ಅರಶಿನ ಕಾಮಾಲೆ ಧಾಳಿಯಿಟ್ಟಿತು.
ಒಂದು ಬೆಳಿಗ್ಗೆ ಶಿವಣ್ಣನಿಗಾಗಿ ಎಲ್ಲೆಲ್ಲೋ ಹುಡುಕಾಡಿದ ಗೋವಿಂದಣ್ಣ ಶರಾಬು ಅಂಗಡಿ ಬಳಿಗೇ ಬಂದು ಶಿವಣ್ಣನಿಂದ ಯಾವುದೋ ಕಾಗದ ಪತ್ರಗಳಿಗೆ ಸಹಿ ಹಾಕಿಸಿ ಮಧ್ಯಾಹ್ನ ಕಳೆಯುತ್ತಿದ್ದಂತೆ ಮತ್ತೆ ಬಂದು ಒಂದು ಪ್ಲಾಸ್ಟಿಕ್ ಚೀಲತುಂಬಾ ಹಣದ ಕಂತೆಗಳನ್ನು ಕೊಟ್ಟು ಋಣ ತೀರಿಸಿ ಸಂಜೆಗೆ ಮುಂಬಾಯಿಯ ಬಸ್ಸು ಹತ್ತಿದರು.
ಅಂದು ಶಿವಣ್ಣನ ಬುದ್ದಿಯೇ ಸ್ವಾಧೀನದಲ್ಲಿರಲಿಲ್ಲ. ಹೊಟ್ಟೆ ತುಂಬಾ ಶರಾಬು ಕುಡಿದು ಮತ್ತಿನಲ್ಲಿ ತೂರಾಡತೊಡಗಿದ. ಪೇಟೆ ಇಡೀ ಕೇಳುವಂತೆ ಬೊಬ್ಬಿರಿಯತೊಡಗಿದ. ಬನ್ನಿ.... ಬನ್ನಿ. ದುಡ್ಡು... ಯಾರಿಗೆ ಬೇಕು... ತೆಕ್ಕೊಳ್ಳಿ..... ನಾನು ಕರ್ಣ.. ಮಹಾಭಾರತದ ಕರ್ಣ. ದಾನಶೂರಕರ್ಣ ಅನ್ನುತ್ತಾ ದುಡ್ಡಿನ ಕಟ್ಟುಗಳ ದಾರ ಕಡಿದು ತಲೆಯ ಮೇಲೆ ಸುರಿದುಕೊಳ್ಳತೊಡಗಿದ.
ಕಾಮತರ ಅಂಗಡಿ ಮುಂದೆ. ಐದ್ರೋಸ್ ಬ್ಯಾರಿಯ ಗೂಡಂಗಡಿಯ ಮುಂದೆ. ಸಂಕಪ್ಪಣ್ಣ ಸೆಲೂನಿನ ಮುಂದೆ. ಪೇಟೆಯ ಬಸ್ಸು ನಿಲ್ಲುವ ಕಟ್ಟೆಯ ಬಳಿ. ಎಲ್ಲೆಲ್ಲೂ ತಿರುಗಾಡಿ ಹಣವನ್ನು ಚೆಲ್ಲಾಡತೊಡಗಿದ.
ದೇವಪ್ಪ ಎಷ್ಟು ಸಮಾಧಾನಪಡಿಸಿದರೂ ಶಿವಣ್ಣ ಕೇಳಲೇ ಇಲ್ಲ. ದ್ಯಾಪ ನೀನು ... ನೀನು ದೂಮಣ್ಣನ ಆರನೇ ಮಗ.. ತಕೋ... ದುಡ್ಡು.. ನಿನಗೆಷ್ಟು ಬೇಕು ತಕೊ.... ಶಿವಣ್ಣ ನೋಟುಗಳನ್ನು ದೇವಪ್ಪನ ಮುಂದೆ ಬಿಸಾಡತೊಡಗಿದ.
ಶಿವಣ್ಣ ಹೋದಲ್ಲೆಲ್ಲಾ ಹಿಂಬಾಲಿಸಿದ ದೇವಪ್ಪ ನೋಟುಗಳನ್ನು ಒಂದೂ ಬಿಡದೆ ಹೆಕ್ಕಿ ಹೆಕ್ಕಿ ಬೈರಾಸಿನೊಳಗೆ ತುಂಬಿಸಿಕೊಳ್ಳುತ್ತಲೇ ಹೋದ. ತಡರಾತ್ರಿಯವರೆಗೂ ಶಿವಣ್ಣನ ಪಿಲಿಗೊಬ್ಬು ನಡೆಯುತ್ತಲೇ ಇತ್ತು. ಹಣವನ್ನೆಲ್ಲಾ ಚೆಲ್ಲಾಡಿದ ನಂತರ ಸುಸ್ತಾದ ಶಿವಣ್ಣ ಕಾಮತರ ಜಗಲಿಯಲ್ಲಿ ಕಾಲು ಚಾಚಿದ.
ದೇವಪ್ಪ ಅಂದು ಕುಡಿಯುವುದನ್ನೇ ಮರೆತು ಮನೆಯ ಕಡೆ ನಡೆದಿದ್ದ. ನೀಲಮ್ಮನನ್ನು ಎಬ್ಬಿಸಿ ಬೈರಾಸನ್ನು ಆಕೆಯ ಮುಂದಿಟ್ಟ.
ಚಿಮಿಣಿ ದೀಪದ ಬೆಳಕಿನಡಿಯಲ್ಲಿ ನೋಟುಗಳನ್ನು ಅಟ್ಟಿ ಮಾಡಿ ಗೋಣಿ ನಾರಿನಿಂದ ಕಟ್ಟಿ ದಿಂಬಿನಡಿ ಇಟ್ಟಳು ನೀಲಮ್ಮ.
ರಾತ್ರಿ ಇಡೀ ನಿದ್ದೆ ಬರದೇ ಒದ್ದಾಡಿದ ನೀಲಮ್ಮ ಮರುದಿನ ಚುಮು ಚುಮು ಬೆಳಕು ಹರಿಯುವಾಗಲೇ ಹಣದ ಕಟ್ಟಿನೊಂದಿಗೆ ಶೀಲಕ್ಕನ ಮನೆ ಹೊಕ್ಕಳು. ನರಪೇತಲದಂತಿದ್ದ ಶೀಲನ ಕಣ್ಣುಗಳಿಂದ ಈಗ ಕಣ್ಣೀರು ಸುರಿಯುತ್ತಿರಲಿಲ್ಲ. ಬೇಸಗೆಯ ಬಿರುಗಾಳಿಗೆ ಒಣಗಿಹೋದ ಕರೆಯಂತೆ ಆಕೆಯ ಕಣ್ಣುಗಳು ತಳ ಹಿಡಿದಿದ್ದವು.
ನೀಲಮ್ಮ ಹಣದ ಕಟ್ಟನ್ನು ಶೀಲನ ಎದುರು ಹಿಡಿದು ವಿಷಯವನ್ನೆಲ್ಲಾ ತಿಳಿಸಿ ಕಣ್ಣೀರು ಸುರಿಸಿದಳು. ನೀಲ... ನೀಲ.. ನೀನು ಈ ಮನೆಯ ಕೆಲಸದವಳಲ್ಲ ನೀಲ... ನೀನು ನನ್ನ ಒಡಹುಟ್ಟಿದ ತಂಗಿ ಎನ್ನುತ್ತಾ ನೀಲನನ್ನು ಅಪ್ಪಿ ಹಿಡಿದು ಗೋಳಾಡಿದಳು ಶೀಲ.
ಬೇಡಕ್ಕಾ ನಾನು ಕೆಲಸದವಳೇ... ನಾನು ತಂಗಿಯೂ ಅಲ್ಲ... ಅಕ್ಕನೂ ಅಲ್ಲ... ಈ ಅಕ್ಕ ತಂಗಿ.. ಅಣ್ಣ ತಮ್ಮಂದಿರ ಸಹವಾಸವೇ ಬೇಡ.. ನೀಲ ಅಳುತ್ತಾ ನುಡಿದಳು.
ಮುಂಜಾನೆ ಎದ್ದು ಕಾಮತರ ಅಂಗಡಿಗೆ ನಡೆದು ಶಿವಣ್ಣನನ್ನು ತಟ್ಟಿ ಎಬ್ಬಿಸಲು ನೋಡಿದ ದೇವಪ್ಪ. ಶಿವಣ್ಣ ಅಲುಗಾಡಲಿಲ್ಲ. ಅಯ್ಯೋ ಗುಡ್ಡದವ್ನೇ ಅನ್ನುತ್ತಾ ಮೂಗಿನ ಹೊಳ್ಳೆಗಳಿಗೆ ಬೆರಳು ಚಾಚಿದ. ಕ್ಷೀಣವಾಗಿ ಉಸಿರಾಟ ಸಾಗುತ್ತಿತ್ತು. ಒಂದೇ ಉಸಿರಿಗೆ ಓಡಿ ಹೋಗಿ ಶೀಲ ಮತ್ತಾಕೆಯ ತಮ್ಮನನ್ನು ಕರೆತಂದ. ಕಾಮತರು ಅಂಗಡಿ ಬಾಗಿಲು ತೆಗೆದು ಫೋನು ಮಾಡಿ ಕಾರು ತರಿಸಿ ಶಿವಣ್ಣನನ್ನು ಆಸ್ಪತ್ರೆಗೆ ಸಾಗಿಸಿದರು. ದೇವಪ್ಪ ಗುಡ್ಡದ ಕಡೆ ತಿರುಗಿ ಕೈ ಮುಗಿಯುತ್ತಾ ಓ ಗುಡ್ಡದವ್ನೇ... ಊರು ಹೋದರೆ ಹೋಗಲಿ.. ಶಿವಣ್ಣನಿಗೆ ಏನಾದರೂ ಆದರೆ ನಾನು ಈ ಜನ್ಮದಲ್ಲಿ ಮತ್ತೆ ನಿನಗೆ ಕೈ ಮುಗಿಯುದಿಲ್ಲ ಎಂದು ಗಟ್ಟಿ ಸ್ವರದಲ್ಲಿ ನುಡಿದ.
ಊರಿಗೆ ಭಾರೀ ಭಾರೀ ಯಂತ್ರಗಳು ಕಾಲಿಟ್ಟವು. ಶೀಲನ ಅಣ್ಣಂದಿರು ಬಂದು ಕೋಣಗಳನ್ನು ಹೊಡೆದುಕೊಂಡು ಹೋದರು. ಬೆಲೆಬಾಳುವ ಸಾಮಗ್ರಿ, ಪಕ್ಕಾಸು, ಬಾಗಿಲು, ಮರದ ಸೊತ್ತುಗಳನ್ನೆಲ್ಲಾ ಲಾರಿಯಲ್ಲಿ ಸಾಗಿಸಿದರು. ಶೀಲ ನೀಲನನ್ನು ಅಪ್ಪಿ ಹಿಡಿದು ಕಣ್ಣೀರು ಸುರಿಸಿ ಬೀಳ್ಕೊಂಡ ಮರುದಿನವೇ ನೀಲಮ್ಮಳೂ ಅಟ್ಟದಲ್ಲಿದ್ದ ಅಕ್ಕಿ ಮುಡಿ. ಮತ್ತಿತರ ಪಾತ್ರೆ ಪಗಡಿಗಳನ್ನು ಒಟ್ಟುಗೂಡಿಸಿ ಮಕ್ಕಳೊಂದಿಗೆ ತವರು ಮನೆಯ ದಾರಿ ಹಿಡಿದಳು. ಹೋಗುತ್ತಾ ದೇವಪ್ಪನೊಂದಿಗೆ ನಿಮಗೆ ಯಾವಾಗ ಬರಬೇಕಂತ ಅನ್ನಿಸುತ್ತದೋ ಆವಾಗ ಬಂದು ಬಿಡಿ ಅಂದಳು.
ನೀನು ಹೋಗು ಶೀಲಾ... ಊರು ಅದು ಹೇಗೆ ಸಮತಟ್ಟಾಗುತ್ತೋ ನೋಡಿಯೇ ಬರುತ್ತೇನೆ ಅಂದ ದೇವಪ್ಪ. ಇವರ ಭ್ರಾಂತಿ ಇನ್ನೂ ಕಡಿಮೆಯಾಗಿಲ್ಲ. ದೇವರೇ ಇವರಿಗೆ ಇನ್ನಾದರೂ ಬುದ್ದಿ ಕೊಡು ಎಂದು ಗೊಣಗಿಕೊಂಡಳು ನೀಲಮ್ಮ.
ಈಗ ಊರಿನಲ್ಲಿ ಯಾರ ಕಷ್ಟ ಸುಖವನ್ನು ಯಾರೂ ಕೇಳುವ ಹಾಗಿಲ್ಲ. ಒಂದೊಂದು ಮನೆಯದೂ ಒಂದೊಂದು ಕತೆ. ಎಲ್ಲರಿಗೂ ಗಡಿಬಿಡಿ. ಲೋರಿ ಪೊಬರ್ುವಿನ ಲಾರಿ ಎಲ್ಲರ ಸಾಮಾನುಗಳನ್ನು ಸಾಗಿಸುತ್ತಿತ್ತು. ಬಿಟ್ಟು ಹೋದ ಮನೆಗಳನ್ನು ಯಂತ್ರಗಳು ನೆಲಸಮಗೊಳಿಸುತ್ತಿದ್ದವು. ಭಾರೀ ಭಾರಿ ಯಂತ್ರಗಳು. ಊರೆಲ್ಲಾ ಧೂಳುಮಯ. ದೇವಪ್ಪ ಬೆಕ್ಕಸಬೆರಗಾಗಿ ನೋಡುತ್ತಿದ್ದಂತೆ ಊರಿನವರೆಲ್ಲಾ ಭಯ ಭಕ್ತಿಯಿಂದ ನೋಡುತ್ತಿದ್ದ ಕಾನರ್ಿಕದ `ಊರು ಅರ್ಧ ದಿವಸದಲ್ಲೇ ಹೇಳ ಹೆಸರಿಲ್ಲದಂತಾಗಿತ್ತು. ಎಂದೂ ತಳಕಾಣದ ಕರೆ ಮಾಯವಾಗಿತ್ತು.
ದ್ಯಾಪಾ ನಾಳೆ ನಾಡಿದ್ದು ನಿನ್ನ ಮನೆ ನೆಲಸಮವಾಗುತ್ತದೆ. ಅದಷ್ಟು ಬೇಗ ಮನೆ ಖಾಲಿ ಮಾಡು ಎಂದು ಕೆಲವರು ದೇವಪ್ಪನಿಗೆ ಸಲಹೆ ನೀಡಿದರು. ನನ್ನ ಮನೆಯಲ್ಲೇನಿದೆ ಕರ್ಮ ದೇವಪ್ಪ ಗೊಣಗಿಕೊಂಡ
ಅಂದು ಸಂಜೆ ಹೊಟ್ಟೆ ಭತರ್ಿ ಶರಾಬು ತುಂಬಿಸಿಕೊಂಡಿದ್ದ ದೇವಪ್ಪ. ಗುಡ್ಡದವ್ನ ದಯೆ ಶಿವಣ್ಣ ಈಗ ಗುಣಮುಖರಾಗಿ ಹೆಂಡತಿಯ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರಂತೆ ಯಾರೂ ದೇವಪ್ಪನಿಗೆ ಹೇಳಿದರು.
ಕೊನೆಯದಾಗಿ ತನ್ನ ಮನೆಯ ಜಗಲಿಯಲ್ಲಿ ದೇವಪ್ಪ ರಾತ್ರಿ ಕಳೆಯುತ್ತಿದ್ದ.
ಓ ನೀಲಾ... ಊರು ಹೋಯ್ತು ಕಣೇ... ನೀಲಾ ನೀನೇನೇ ಹೇಳು... ಅದು ಕಾನರ್ಿಕದ ಕೆರೆ ಹೌದು ಕಣೇ.... ಈ ಊರು ಕೆರೆಯ ನೀರು ಕುಡ್ದೋನಿಗೆ ನ್ಯಾಯ ನೀತಿ... ಕಷ್ಟ -ಕಾರ್ಪಣ್ಯ ಏನೂಂತ ಗೊತ್ತು ಕಣೇ ನೀಲ.. ಈ ಊರು ಬಿಟ್ಟು ಪರವೂರಿಗೆ ಹೋದ್ರು ನೋಡು... ಅಲ್ಲಿನ ನೀರು ಸಂಕಪಾಶಾನದ ನೀರು ಕಣೇ ನೀಲಾ... ಅದು ಸ್ವಾರ್ಥದ ನೀರು ಕಣೇ . ನೀಲಾ.... ಆ ಗುಡ್ಡದವ್ನು ಬಾರೀ ಚಾಲಾಕಿ ಕಣೇ ನೀಲಾ... ನಾನು ಕೈ ಮುಗಿಯೋದಿಲ್ಲಾಂತ ಆ ಶಿವಣ್ಣರನ್ನು ಬದುಕಿಸಿ ಮತ್ತೆ ಕೈ ಮುಗಿಯುವಂತೆ ಮಾಡ್ಕೊಂಡ ಕಣೇ..... ಅಯ್ಯೋ ಗುಡ್ಡದವ್ನೇ ನಾನು ಯಾರತ್ರ ಮಾತಾಡುತ್ತಿದ್ದೇನೆ.... ನೀಲಾ ತಾಯಿಮನೆಗೆ ಹೋಗಿಬಿಟ್ಯಲ್ಲೇ.... ನಾನ್ಯಾರಿಗೆ ಹೇಳಲಿ... ನೀಲಾ ನಾನ್ಯಾರಿಗೆ ಹೇಳಲಿ... ಊರು ಹೋಯ್ತು ಕಣೇ... ಇನ್ನು ನನಗ್ಯಾಕೆ ಈ ಊರು
ಹಿಂದೆಲ್ಲಾ ಆ ಗುಡಿಸಲಿನ ಜಗುಲಿಯಿಂದ ಹೊರಡುವ ಮಾತುಗಳಿಗೆ ನೀರವ ರಾತ್ರಿಯಲ್ಲಿ ಕಿರುಗುಟ್ಟುವ ಕ್ರಿಮಿ ಕೀಟಗಳು ಜತೆ ನೀಡುತ್ತಿದ್ದವು. ಈಗ ಹಗಲು ರಾತ್ರಿ ಎನ್ನದೆ ಭಯಂಕರ ಸದ್ದು ಮಾಡುವ ಯಂತ್ರಗಳು....
ದೇವಪ್ಪನ ಧ್ವನಿ ಯಾರಿಗೂ ಕೇಳಿಸುತ್ತಿರಲಿಲ್ಲ. ಆದರೂ ಆ ಮನೆಯಿಂದ ದೇವಪ್ಪನ ಧ್ವನಿ ಹೊರಡುತ್ತಲೇ ಇತ್ತು....
`ಕೆರೆ ಹೋಯ್ತು ಕಣೇ...
ನೀಲಾ... ಊರ ಕೆರೆ ಹೋಯ್ತು.
ಊರು ಹೋಯ್ತು ಕಣೇ...
ನೀಲಾ... ಊರು ಹೋಯ್ತು...
*******
ಶಬ್ದಾರ್ಥಗಳು :
ನೆಗರಿ = ಎದ್ದುಬಿದ್ದು.
ಬುಟ್ಟಿಚಾಕ್ರಿ = ಬಿಟ್ಟಿ ಚಾಕರಿ.
ಪಿಲಿಗೊಬ್ಬು = ಶರಾಬು ಕುಡಿದವರ ಹದ್ದು ಮೀರಿದ ವರ್ತನೆ.
ತಟ್ಟಿ ಕುಡ್ಪು = ಕಾಡು ಬಳ್ಳಿಯಿಂದ ಮಾಡಿದ ತಟ್ಟೆಯಾಕಾರದ ವಸ್ತು.
ನಟ್ಟಿ-ಕೈ = ನಾಟಿ-ಕೊಯ್ಲು.
ಬೈಪನೆ = ಜಾನುವಾರುಗಳಿಗೆ ಆಹಾರ ಹಾಕುವ ಎತ್ತರದ ಕಟ್ಟೆ.
ಕುಕರ್ಿಲ್ = ಈಚಲು ಮರದ ಬಳ್ಳಿಯಿಂದ ಮಾಡಿದ ಬುಟ್ಟಿ.
ಕಲೆಂಬಿ = ಹಳೆಯಕಾಲದ ಮರದ ಪೆಟ್ಟಿಗೆ.